ಆ್ಯಪ್ನಗರ

ಐಎಲ್ಐಗಳಿಂದ‌ ಬಳಲುತ್ತಿರುವವರ ಪ್ರತ್ಯೇಕ ಪರೀಕ್ಷೆಗೆ ಸಚಿವ ಸುಧಾಕರ್ ಸೂಚನೆ!

ಐಎಲ್‌ಐನಿಂದ ಬಳಲುತ್ತಿರುವವರನ್ನ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಸಚಿವ ಸುಧಾಕರ್‌ ಸೂಚನೆ ನೀಡಿದ್ದಾರೆ. ಎಲ್ಲಾರೂ ಟೆಸ್ಟ್‌ ನಡೆಸಿದರೆ ಕೊರೊನಾದಿಂದ ಪಾರಾಗಬಹುದು ಎಂದು ತಿಳಿಸಿದ್ದಾರೆ.

Vijaya Karnataka Web 12 Jun 2020, 12:01 pm
ಬಳ್ಳಾರಿ: ಐಎಲ್ಐ ಲಕ್ಷಣ ಹೊಂದಿರುವವರೇ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಸೊಂಕಿಗೀಡಾಗುತ್ತಿದ್ದು, ಈ ಹಿನ್ನೆಲೆ ಅಂತಹ ಲಕ್ಷಣಗಳು ಇರುವವರನ್ನು ಪ್ರತ್ಯೇಕ ಮಾಡಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.
Vijaya Karnataka Web vijaya-karnataka (8)


ಬಳ್ಳಾರಿಯ ವಿಮ್ಸ್ ಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ‌ ಮಾತನಾಡಿದ ಸಚಿವರು, 60ವರ್ಷ ಮೇಲ್ಪಟ್ಟ ಐಎಲ್ಐ ಪ್ರಕರಣಗಳನ್ನು ಮೊದಲಿಗೆ ಪತ್ತೆಹಚ್ಚಿ ಅವರಿಗೆ‌ ಪರೀಕ್ಷೆ ನಡೆಸಲು ತಿಳಿಸಲಾಗಿದೆ. 60ವರ್ಷ ಮೇಲ್ಪಟ್ಟ ಐಎಲ್ಐನಿಂದ ಬಳಲುತ್ತಿರುವವರು ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು, ಕೆಮ್ಮು, ಶೀತ, ಜ್ವರದಂತ ಲಕ್ಷಣಗಳು ಇರುವವರು ಈಗಾಗಲೇ ಸ್ಥಾಪಿಸಲಾಗಿರುವ ಫೀವರ್ ಕ್ಲಿನಿಕ್‌ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳ ಬೇಕು ಎಂದು ಇದೆ ವೇಳೆ ಸಚಿವರು ಮನವಿ ಮಾಡಿದರು.

ಅಲ್ಲದೇ ಇಂತಹ ಲಕ್ಷಣಗಳಿರುವವರು ಟೆಸ್ಟ್ ಮಾಡಿಸುವುದರಿಂದ ಕೊರೊನಾವನ್ನ ಮೆಟ್ಟಿನಿಲ್ಲಬಹುದು. ಎಲ್ಲಾದರೂ ಮೊದಲೇ ಬಂದಿದ್ದರೆ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಾಗುತ್ತಿರಲಿಲ್ಲ. ಎರಡು ದಿನ ಇರುವಾಗ ಬಂದಾಗ ಏನು ಮಾಡಲು ಸಾಧ್ಯವಿಲ್ಲ ಮೊದಲೇ ಬಂದು ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ.

ಸಹಿಷ್ಣುತೆ ಮಾಯವಾಗುತ್ತಿದೆ: ರಾಹುಲ್-ನಿಕೋಲಸ್ ಒಮ್ಮತದ ಅಭಿಪ್ರಾಯ!


ರಾಜ್ಯದಲ್ಲಿ 3 ಸಾವಿರಕ್ಕೂ‌ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು,ಅವುಗಳಲ್ಲಿ ಶೇ.97ರಷ್ಟು ಜನರಿಗೆ ರೋಗ ಲಕ್ಷಣಗಳೇ ಇಲ್ಲ ಎಂದು ಹೇಳಿದ ಅವರು, ಆಗಸ್ಟ್ ಅಂತ್ಯಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಲಿವೆ‌ ಎಂದು ಅಧ್ಯಯನ ನಡೆಸಿದ ಪರಿಣಿತರ ತಂಡವೊಂದು ಹೇಳಿದೆ. ಈ ವರದಿ ಅನುಸಾರ ಅದಕ್ಕೆ ತಕ್ಕ‌ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಏನಿದು ಐಎಲ್‌ಐ? ಇದನ್ನ ವಿಶ್ವ ಆರೋಗ್ಯ ಸಂಸ್ಥೆಯ ಭಾಷೆಯಲ್ಲಿ ಇನ್ಫ್ಲುಯೆನ್ಜ ಲೈಕ್‌ ಇಲ್‌ನೆಸ್‌ ಅನ್ನುತ್ತಾರೆ. ಅಂದರೆ ದೇಹದಲ್ಲಿ ಅನಾರೋಗ್ಯ ಉಂಟಾಗುವುದು ಎಂದಾಗಿದೆ. ಮೊದಲು ಇಂತಹ ಅನಾರೋಗ್ಯ ಉಂಟಾಗಿ ನಂತರ ಇದುವೇ ಕೊರೊನಾ ಪಾಸಿಟಿವ್‌ ಆಗಿ ಬದಲಾಗುತ್ತೆ. ಇಂತಹ ಅನೇಕ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ನಗಡಿ, ಜ್ವರದಂತಹ ಅನಾರೋಗ್ಯ ಉಂಟಾದರೆ ಕೂಡಲೇ ಕೊರೊನಾ ಟೆಸ್ಟ್‌ ಮಾಡುವುದು ಒಳಿತು. ಯಾಕೆಂದರೆ, ಈ ರೋಗ ಲಕ್ಷಣಗಳಿಂದ ಕೊರೊನಾ ಬರುವುದು ಖಚಿತ ಹೀಗಾಗಿ ಮುಂಜಾಗ್ರತೆ ವಹಿಸಬಹುದು. ಅಲ್ಲದೇ ಇಂತಹ ಲಕ್ಷಣಗಳಿಂದ ಬೇರೆಯವರಗೂ ಕೊರೊನಾ ಸೋಂಕು ಹರಡುತ್ತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ