ಆ್ಯಪ್ನಗರ

ರೈತರ ಹೋರಾಟದ ದಿಕ್ಕು ತಪ್ಪಿಸಲು ರಾಮಮಂದಿರ ನಿಧಿ ಸಂಗ್ರಹ ಅಭಿಯಾನ: ಕೋಡಿಹಳ್ಳಿ ಚಂದ್ರಶೇಖರ್

ಚೀನಾದವರು ಬಂದು ಅರುಣಾಚಲ ಪ್ರದೇಶದಲ್ಲಿ ಬಂದು ಒಂದು ಹಳ್ಳಿ ನಿರ್ಮಾಣ ಮಾಡಿದ್ದಾರೆ. ಮಾತು ಎತ್ತಿದರೆ ಚೀನಾ, ಪಾಕಿಸ್ತಾನ, ಸಾಬ್ರು ಅಂತ ಮಾತಾಡ್ತಿರಿ, ಇದನ್ನು ಮಾತಾಡೋಕೆ ಧಮ್ ಇಲ್ವಾ ನಿಮಗೆ? ಗುಪ್ತಚರ ಇಲಾಖೆ ಏನು ಮಾಡ್ತಿದೆ, ಇದು ಫೈಲೂರ್ ಅಲ್ವಾ?

Vijaya Karnataka Web 19 Jan 2021, 11:24 am
Vijaya Karnataka Web ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
ಹೊಸಪೇಟೆ (ಬಳ್ಳಾರಿ): ರೈತರ ಹೋರಾಟದ ದಿಕ್ಕು ತಪ್ಪಿಸಲು ಶ್ರೀ ರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.

ದೇಶದ ಗಡಿಯಲ್ಲಿ ಲಕ್ಷಾಂತರ ರೈತರು ಹೋರಾಟ ಮಾಡ್ತಿದ್ದಾರೆ, ಅದನ್ನು ಬಗೆಹರಿಸೋದು ಬಿಟ್ಟು ನೀವು ರಾಮ ಮಂದಿರ ನಿರ್ಮಾಣ ಮಾಡ್ತಿದ್ದಿರಿ. ರಾಮ ಮಂದಿರ ನಿರ್ಮಾಣದ ಸಂದರ್ಭ ಇದಲ್ಲಾ, ಬಿಡುವಿನ ಸಮಯದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದರು.

ದೇಶದಲ್ಲಿ ಜಾರಿಗೆ ತಂದಿರೋ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಯುತ್ತಿದೆ, ನೀವು ರಾಮನ ಕಟ್ಟೋಕೆ ಹೋಗ್ತಾ ಇದ್ದೀರಿ. ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ಡೈವರ್ಟ್ ಮಾಡಲಾಗುತ್ತಿದೆ. ವಾರದಲ್ಲಿ ಮೂರ್ನಾಲ್ಕು ರೈತರು ಸಾಯ್ತಿದ್ದಾರೆ. ಇದು ವಿಷಾದಕರ ಎಂದು ಹೇಳಿದರು.

ರೈತರ ವಿಷಯಗಳ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಯಾಕೆ ಮಾತನಾಡೋಲ್ಲಾ, ಹೊಸದಾಗಿ ಮದುವೆಯಾಗಿರೋ ಗಂಡ ಹೆಂಡ್ತಿ ಬೀಚ್‌ನಲ್ಲಿ ಪ್ಲಾಸ್ಟಿಕ್ ಆರಿಸಿದ ಬಗ್ಗೆ ಬಗ್ಗೆ ಮಾತನಾಡ್ತಾರೆ ನಮ್ಮ ಪ್ರಧಾನಿ. ಬಿಜೆಪಿ, ಆರ್‌ಎಸ್‌ಎಸ್‌ ಅಜೆಂಡಾದಂತೆ ಇವತ್ತು ದೇಶ ನಡೆಯುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ಚೀನಾದವರು ಬಂದು ಅರುಣಾಚಲ ಪ್ರದೇಶದಲ್ಲಿ ಬಂದು ಒಂದು ಹಳ್ಳಿ ನಿರ್ಮಾಣ ಮಾಡಿದ್ದಾರೆ. ಮಾತು ಎತ್ತಿದರೆ ಚೀನಾ, ಪಾಕಿಸ್ತಾನ, ಸಾಬ್ರು ಅಂತ ಮಾತಾಡ್ತಿರಿ, ಇದನ್ನು ಮಾತಾಡೋಕೆ ಧಮ್ ಇಲ್ವಾ ನಿಮಗೆ? ಗುಪ್ತಚರ ಇಲಾಖೆ ಏನು ಮಾಡ್ತಿದೆ, ಇದು ಫೈಲೂರ್ ಅಲ್ವಾ? ಎಂದು ಪ್ರಶ್ನಿಸಿದರು.

ಬಿಡುವಿನ ಸಮಯದಲ್ಲಿ ಕಟ್ಟೋ ರಾಮ ಮಂದಿರದ ಬಗ್ಗೆ ಈಗ ಚಿಂತೆ ಏಕೆ. ನಾನೂ ಕೂಡ ರಾಮನ ಭಕ್ತ, ಆದ್ರೆ ಕೆಲಸದ ಸಮಯದಲ್ಲಿ ಆರಾಧನೆ ಮಾಡೋದಲ್ಲಾ, ರೈತರ ಹೋರಾಟಕ್ಕೆ‌ ಮೊದಲು ಸ್ಪಂದಿಸಬೇಕಾಗಿದೆ. ಇದರ ಬಗ್ಗೆ ಬಿಜೆಪಿ ಸರಕಾರ ಸಮಯ ಕೊಡಲಿ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ