ಆ್ಯಪ್ನಗರ

‘ಬುಡಕಟ್ಟು ಜನಾಂಗದ ಕೊಡುಗೆ ಆಪಾರ’

ಬುಡಕಟ್ಟು ಜನಾಂಗ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಕನ್ನಡ ಶಿಕ್ಷ ಕ ತುಳಜಾ ನಾಯ್ಕ ಹೇಳಿದರು.

Vijaya Karnataka 25 Jul 2018, 5:00 am
ಹೂವಿಹಡಗಲಿ : ಬುಡಕಟ್ಟು ಜನಾಂಗ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಕನ್ನಡ ಶಿಕ್ಷ ಕ ತುಳಜಾ ನಾಯ್ಕ ಹೇಳಿದರು.
Vijaya Karnataka Web BLR-BLY24HDLP1


ತಾಲೂಕಿನ ಕೊಮಾರ್ನಹಳ್ಳಿ ತಾಂಡಾದ ಗೋಗಲಬಾಯಿ ಹರಿಶ್ಚಂದ್ರನಾಯ್ಕ ಪ್ರೌಢ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ-441 ಕವಿ-ಕಾವ್ಯ ವಿಚಾರ ವೇದಿಕೆ ಬಳ್ಳಾರಿ ಇವರ ಸಹಯೋಗದಿಂದ ಏರ್ಪಡಿಸಿದ್ದ ನಾಡುನುಡಿ ಸೇವೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಬುಡಕಟ್ಟು ಜನಾಂಗ ತಮ್ಮದೇ ಆದ ಕಲೆ, ಸಾಹಿತ್ಯ, ಸಂಸ್ಕೃತಿ ಮೈಗೂಡಿಸಿಕೊಂಡಿದೆ. ವೇಷ,ಭೂಷಣ ಪರಿಸರ ಕಾಳಜಿ, ಸಾಮಾಜಿಕ ನ್ಯಾಯ, ಭ್ರಾತೃತ್ವಕ್ಕೆ ಮಾದರಿಯಾಗಿದೆ ಎಂದರು.

ಹಾವೇರಿಯ ಮುಖ್ಯಗುರು ಗುಡಿಗೇರಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ನಾಡು, ನುಡಿ ಕುರಿತು ಅಭಿಮಾನ ಹೊಂದಬೇಕು ಎಂದರು. ಮೀರಾಕೊರ್ನಹಳ್ಳಿ ಪ್ರೌಢಶಾಲೆಯ ಹಿಂದಿ ಶಿಕ್ಷ ಕ ಎಲ್‌.ಖಾದರ್‌ಬಾಷಾ ಮಾತನಾಡಿ, ಗಾದೆಗಳು, ಒಡಪುಗಳು, ತತ್ತ್ವಪದಗಳು, ಗ್ರಾಮೀಣ ಪ್ರದೇಶ ಮತ್ತು ತಾಂಡಾಗಳ ಸಾಹಿತ್ಯ ಸಂಪತ್ತಾಗಿದ್ದು, ಸಾಹಿತ್ಯದ ತಾಯಿ ಬೇರು ಎಂದರು.

ಸಾಹಿತ್ಯ ಅಕಾಡೆಮಿಯ ಪ್ರತಿನಿಧಿ ಡಾ.ಅಂಜನಾ ಕೃಷ್ಣಪ್ಪ, ಶಿಕ್ಷ ಕರಾದ ಮಂಜ್ಯಾನಾಯ್ಕ, ರೂಪ್ಲನಾಯ್ಕ, ಚನ್ನನಾಯ್ಕ, ಕಬೀರದಾಸ್‌, ಕನ್ನಡ ಶಿಕ್ಷ ಕ ಕೋಟೆಪ್ಪ ಮತ್ತೂರು ಇತರರಿದ್ದರು.

ಶಾಲೆಯ ಮುಖ್ಯಗುರು ದಾದಾಸಾಹೇಬ್‌ ಅಧ್ಯಕ್ಷ ತೆ ವಹಿಸಿದ್ದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಗುರುಪ್ರಸಾದ್‌, ಮೋಹನ್‌, ರೋಜಾ, ಪ್ರಿಯಾಂಕ, ಲಲಿತಾಬಾಯಿ, ಕಾವ್ಯ, ಪವಿತ್ರ ಶೋಭಾ ಸ್ವರಚಿತ ಕವಿತೆಗಳನ್ನು ಓದಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ