ಆ್ಯಪ್ನಗರ

ಬಳ್ಳಾರಿ: ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಉದ್ಯೋಗಿ ಸೇರಿ ಇಬ್ಬರ ಸಾವು

ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿಯ ಹಿನ್ನೀರು ಕೂಡ ಈಗ ತುಂಬಿ ತುಳುಕುತ್ತಿದೆ. ಇದನ್ನು ವೀಕ್ಷಿಸಲು ಹೋಗಿದ್ದ ಇಬ್ಬರು ಯುವಕರು ಮುಳುಗಿ ಮೃತಪಟ್ಟದ್ದಾರೆ.

Vijaya Karnataka Web 10 Sep 2019, 8:01 pm
ಬಳ್ಳಾರಿ: ತಾಲೂಕಿನ ಮರಿಯಮ್ಮನಹಳ್ಳಿಯ ಬಳಿ ಡಾಣಾಪುರ ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.
Vijaya Karnataka Web ನೀರುಪಾಲು
ನೀರುಪಾಲು


ಬೆಂಗಳೂರಿನ ಎಂಜಿನಿಯರ್ ಉದ್ಯೋಗಿ ಡಾಣಾಪುರದ ಬಸವರಾಜ (25) ಹಾಗೂ ಸಂಡೂರಿನ ಹರೀಶ್ (17) ಮೃತ ದುರ್ದೈವಿಗಳು.

ಹಿನ್ನೀರಿನ ಬಳಿ ಬಸವರಾಜ ಅವರ ಹೊಲವಿದೆ. ಬಸವರಾಜ ಅವರು ಅಕ್ಕ ನಾಗತ್ನಮ್ಮ ಹಾಗೂ ಅಳಿಯ ಹರೀಶ್‍ನೊಂದಿಗೆ ಹೊಲಕ್ಕೆ ತೆರಳಿದ್ದಾರೆ. ಮೀನುಗಾರ ತಪ್ಪೆದಲ್ಲಿ ಬಸವರಾಜ ಮತ್ತು ಹರೀಶ್ ತೆರಳಿದ್ದ ವೇಳೆ ಗಾಳಿಗೆ ತೆಪ್ಪ ಬೇರೆ ಕಡೆ ಚಲಿಸಲು ಪ್ರಾರಂಭವಾಗಿದೆ. ಇದರಿಂದ ಭಯಭೀತರಾದ ಯುವಕರು ನೀರಿಗೆ ಹಾರಿದ್ದಾರೆ. ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್, ಕೂಡ್ಲಿಗಿ ಡಿವೈಎಸ್ಪಿ ಎಂ.ಸಿ.ಶಿವುಕುಮಾರ, ತಹಶೀಲ್ದಾರ್ ಎಚ್.ವಿಶ್ವನಾಥ, ಮರಿಯಮ್ಮಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವಕುಮಾರ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ