ಆ್ಯಪ್ನಗರ

ಶಾಲೆಗೆ ಬಿಇಒ ಭೇಟಿ, ಪರಿಶೀಲನೆ

ಸಮೀಪದ ದೇವಸಮುದ್ರ ಸರಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ.ಜೋಷಿ ಭೇಟಿ ನೀಡಿ ಸೋಮವಾರ ಪರಿಶೀಲಿಸಿದರು.

Vijaya Karnataka 4 Jul 2018, 5:00 am
ಕಂಪ್ಲಿ : ಸಮೀಪದ ದೇವಸಮುದ್ರ ಸರಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ.ಜೋಷಿ ಭೇಟಿ ನೀಡಿ ಸೋಮವಾರ ಪರಿಶೀಲಿಸಿದರು.
Vijaya Karnataka Web BLR-3KMP1


ತಾ.ಪಂ.ಸದಸ್ಯ ಕೆ.ಷಣ್ಮುಖಪ್ಪ ಮಾತನಾಡಿ, ಗ್ರಾಮದ ನಾನಾ ಶಾಲೆಗಳಿಗೆ ಹಲವು ಸಮಸ್ಯೆಗಳಿವೆ. ಪ್ರೌಢಶಾಲೆಗೆ 50 ಡೆಸ್ಕ್‌, ಎರಡು ಕೊಠಡಿ, ಒಂದು ಅಡುಗೆ ಕೋಣೆ, ಶಾಲೆ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಬೇಕು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣ ಗೋಡೆ ಇಲ್ಲ. ಅಲ್ಲದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಹೊಸೂರು ಸಹಿಪ್ರಾ ಶಾಲೆಗೆ ಹೊಸ ಕಟ್ಟಡದ ವ್ಯವಸ್ಥೆಯಾಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ಬಿಇಒ ಪ್ರತಿಕ್ರಿಯಿಸಿ, ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡೆಸ್ಕ್‌ಗಳನ್ನು ಹೈ-ಕ ಯೋಜನೆಯಡಿ ಕಲ್ಪಿಸಲಾಗುವುದು. ಈಗಾಗಲೇ ಮೊದಲ ಆದ್ಯತೆ ಮೇರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಡೆಸ್ಕ್‌ಗಳನ್ನು ಒದಗಿಸಲಾಗಿದೆ. ಉಳಿದ ಶಾಲೆಗಳ ಡೆಸ್ಕ್‌ಗಳನ್ನು ಕಲ್ಪಿಸಲಾಗುವುದು. ಜಿ.ಪಂ.ನ ಸೇರ್ಪಡೆ ಮಾರ್ಪಾಡು ಯೋಜನೆಯಡಿ ಕೊಠಡಿಗಳ ದುರಸ್ತಿಗೆ ಜಿ.ಪಂ. ಸದಸ್ಯರ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಮುಖ್ಯಗುರು ಶಕುಂತಲಾ, ಶಿಕ್ಷ ಕರು, ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ