ಆ್ಯಪ್ನಗರ

ಉತ್ಸಾಹದಿಂದ ಮತದಾನ

ತಾಲೂಕಾದ್ಯಂತ ಮಂಗಳವಾರ ಮತದಾರರು ತಮ್ಮ ಹಕ್ಕನ್ನು ಉತ್ಸಾಹದಿಂದ ಚಲಾಯಿಸಿದರು. ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕನ್ನು ಚಲಾಯಿಸಿದರು.

Vijaya Karnataka 24 Apr 2019, 5:00 am
ಹೊಸಪೇಟೆ : ತಾಲೂಕಾದ್ಯಂತ ಮಂಗಳವಾರ ಮತದಾರರು ತಮ್ಮ ಹಕ್ಕನ್ನು ಉತ್ಸಾಹದಿಂದ ಚಲಾಯಿಸಿದರು. ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕನ್ನು ಚಲಾಯಿಸಿದರು. ನಗರದ ದೇವಾಂಗ ಪೇಟೆಯ ಸಖಿ ಮತಗಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ತಾಲೂಕಿನ ನಾಗೇನಹಳ್ಳಿ ಸೇರಿದಂತೆ ಇತರೆಡೆ ಮತದಾರರು ಬೆಳಗ್ಗೆ ಮತದಾನ ಮಾಡಿದರು.ನಗರದ ಸರಕಾರಿ ಪದವೀ ಪೂರ್ವ ಕಾಲೇಜಿನ ಬೂತ್‌ 21ರಲ್ಲಿ ಶಾಸಕ ಆನಂದ್‌ ಸಿಂಗ್‌ ಅವರು ಕುಟುಂಬ ಸಮೇತ ಬಂದು ಮತದಾನ ಮಾಡಿದರು. ಶಾಸಕ ಆನಂದ ಸಿಂಗ್‌ ಪತ್ನಿ ಲಕ್ಷ್ಮಿ ಹಾಗೂ ತಂದೆ ಪೃಥ್ವಿರಾಜ್‌ ಸಿಂಗ್‌ ಹಕ್ಕನ್ನು ಚಲಾಯಿಸಿದರು.
Vijaya Karnataka Web BLR-BLR23HPT-01


ಬಿಸಿಲಿನ ಝಳ: ತಾಲೂಕಿನ ಬಹುತೇಕ ಕಡೆ ಜನರು ಬೆಳಗ್ಗೆ ಬಂದು ಉತ್ಸಾಹದಿಂದ ಮತದಾನ ಮಾಡಿದರು. ಬಳಿಕ ಬಿಸಿಲಿನ ಪ್ರಮಾಣ ಹೆಚ್ಚಾದಂತೆ ಮತಗಟ್ಟೆಯಿಂದ ಮತದಾರರು ದೂರ ಉಳಿದರು. ವಧುವಿನಿಂದ ಮತದಾನ: ನಗರದ ಮಲಪನಗುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 219 ಮತಗಟ್ಟೆಯಲ್ಲಿ ನವವಧು ಟಿ.ರಮಾ ಅವರು ಹಸಿಮಣೆ ಏರುವ ಮುನ್ನ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಯ್ಯನಹಳ್ಳಿಯಲ್ಲಿ ಮದುವೆ ನಿಶ್ಚಯವಾಗಿದೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ನಂತರ ಮದುವೆ ಮಂಟಪಕ್ಕೆ ಕುಟುಂಬ ಸಮೇತ ತೆರಳಿದರು. ನಾಗೇನಹಳ್ಳಿಯಲ್ಲಿ 90 ವಯಸ್ಸಿನ ಅಜ್ಜಿ ಪಾರ್ವತಮ್ಮ ಉತ್ಸಾಹದಿಂದ ಬಂದು ಮತದಾನ ಮಾಡಿದರು. ನಗರದ ದೇವಾಂಗಪೇಟೆಯ 157 ಮತಗಟ್ಟೆಯಲ್ಲಿ ಭಾರತಿ, ವಾಣಿ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ