ಕಷ್ಣ ಎನ್.ಲಮಾಣಿ, ಹೊಸಪೇಟೆ
ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಅಂಕಿ-ಅಂಶ ಸ್ಥಿತಿ-ಗತಿಯನ್ನು ಫೇಸ್ಬುಕ್ನಲ್ಲಿಯೇ ಅರಿಯುತ್ತಿದ್ದಾರೆ.
ಟಿಬಿಡ್ಯಾಂ ಫೇಸ್ಬುಕ್ನಲ್ಲೂ ಪೇಜ್ ತೆಗೆದಿರುವುದರಿಂದ ಇಂತಹ ಭಾಗ್ಯ ಸಿಕ್ಕಿದ್ದು, ಇದನ್ನು ಫಾಲೋ ಮಾಡುತ್ತಿರುವ ಸಾವಿರಾರು ರೈತರು ಫೇಸ್ಬುಕ್ನಲ್ಲಿಯೇ ನೀರಿನ ಲೆಕ್ಕಾಚಾರವನ್ನು ಅರಿಯುತ್ತಿದ್ದಾರೆ.
ಇತ್ಯ ಅಪ್ಡೆಟ್: ಈ ಫೇಸ್ಬುಕ್ ಖಾತೆಯನ್ನು ತುಂಗಭದ್ರಾ ಮಂಡಳಿ ತೆರೆದಿದ್ದು, ನಿತ್ಯವೂ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ಹೊರ ಹರಿವು, ಒಳ ಹರಿವು ಮಾಹಿತಿ ನೀಡುತ್ತಿದೆ. ಫೇಸ್ಬುಕ್ ಪೇಜ್ ಫಾಲೋ ಮಾಡುವ ರೈತರು ಹಾಗೂ ರೈತಪರ ಕಾಳಜಿವುಳ್ಳವರು ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎನ್ನುವ ಮಾಹಿತಿ ಸುಲಭವಾಗಿ ದೊರೆಯುತ್ತಿದೆ.
ಹೆಚ್ಚಿದ ಫಾಲೋವರ್ಸ್: ಟಿಬಿಡ್ಯಾಂ ಪೇಜ್ನ್ನು 12,963 ಜನರು ಫಾಲೋ ಮಾಡುತ್ತಿದ್ದಾರೆ. ಸರಾಸರಿ ನಿತ್ಯ 12,430 ಜನರು ಲೈಕ್ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಆಂಧ್ರಪ್ರದೇಶದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ಕುಡಿವ ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸುತ್ತದೆ. ಫೇಸ್ಬುಕ್ ಪೇಜ್ ಈ ಎಲ್ಲ ಸಂಗತಿಗಳನ್ನು ಒದಗಿಸುತ್ತಿದ್ದು, ಜಲಾಶಯ ನೆಚ್ಚಿರುವ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ.
ಇಲ್ಲೂ ಸಲಹೆ, ಸೂಚನೆಯುಂಟು : ಟಿಬಿ ಡ್ಯಾಂ ಫೇಸ್ಬುಕ್ ಪೇಜ್ ಫಾಲೋ ಮಾಡುವ ರೈತರು ಸಲಹೆ, ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ರೈತರೊಬ್ಬರು ಹೊರ ಹರಿವು ತಗ್ಗಿಸಿ, ಮಾರ್ಚ್ 20ರ ವರೆಗೆ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದ್ದರೆ, ಮತ್ತೊಬ್ಬರು ಎಚ್ಎಲ್ಸಿ ಕಾಲುವೆಗೆ ನೀರು ಬಂದ್ ಮಾಡಿ, ಎಡದಂಡೆಗೆ ಹರಿಸಿ ಎಂದಿದ್ದರೆ, ಮಗದೊಬ್ಬರು ಇನ್ನು ಎಷ್ಟು ದಿನ ನೀರು ಬಿಡುತ್ತಾರೆ? ಎಂಬ ಪ್ರಶ್ನೆಗಳನ್ನು ಪೇಜ್ನಲ್ಲಿ ಕೇಳಲಾಗಿದೆ.
ಇದು ಮಾತ್ರವಲ್ಲದೇ ನೀರಿನ ಲೆಕ್ಕಾಚಾರದಲ್ಲಿ ತಪ್ಪಾಗಿದ್ದರೆ, ಕೂಡಲೇ ಅದಕ್ಕೆ ರೈತರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನೀರಿನ ಸಂಗ್ರಹ ಸಾಮರ್ಥ್ಯ ನಿನ್ನೆ ಇಷ್ಟಿದ್ದರೆ, ಇಂದು ಇಷ್ಟಿದೆಯಲ್ಲ ಎಂದು ಪ್ರಶ್ನಿಸುತ್ತಿರುವುದು ಸಾಮಾನ್ಯ ಎನಿಸಿದೆ. ತುಂಗಭದ್ರಾ ಜಲಾಶಯದ ನೀರಿನ ಒಳ ಹರಿವು, ಹೊರ ಹೊರಿವು, ಕಳೆದ ವರ್ಷ ಹಾಗೂ ಕಳೆದ ಹತ್ತು ವರ್ಷಗಳ ಸರಾಸರಿ ನೀರಿನ ಸಂಗ್ರಹ ಸಾಮರ್ಥ್ಯದ ಮಾಹಿತಿ ನಿತ್ಯ ಈ ಪೇಜ್ನಲ್ಲಿ ಅಪ್ಲೋಡ್ ಮಾಡುತ್ತಿರುವುದರಿಂದ; ರೈತರಿಗೂ ಅನುಕೂಲದ ಜತೆಗೆ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಈ ಪೇಜ್ ವೇದಿಕೆ ಕಲ್ಪಿಸಿದೆ.
ವೋಟು ಕೇಳಿದ್ರೆ ಏಟು ಕೊಡಿ: ತುಂಗಭದ್ರಾ ಜಲಾಶಯದಲ್ಲಿ ಹೊರ ಹರಿವು ಕುರಿತು ಈ ಪೇಜ್ ಫಾಲೋ ಮಾಡುವರೊಬ್ಬರು, ಮೋಸ ಮೋಸ ಎಲ್ಲರಿಗೂ ಜಾಗತಿ ಮೂಡಿಸಿ, ನೀರಿನ ಹರಿವು ಎಂಎಲ್ಎ ವೋಟ್ ಕೇಳಾಕ್ ಬಂದಾಗ್ ತಿಳಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಗಂಭೀರವಾಗಿ ರೈತರು ಪೇಜ್ ಅವಲೋಕಿಸುತ್ತಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.
ಮಹತ್ವದ ಜಲಾಶಯ: ತುಂಗಭದ್ರಾ ಜಲಾಶಯದಲ್ಲಿ ಫೆ.25ರಂದು 12.061 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 4.553 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಈ ಜಲಾಶಯ ರಾಜ್ಯದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಕಷಿ ಪ್ರದೇಶಕ್ಕೆ ಹಾಗೂ ಆಂಧ್ರದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳ 1.46 ಲಕ್ಷ ಹೆಕ್ಟೇರ್ ಕಷಿ ಪ್ರದೇಶಕ್ಕೆ ನೀರು ಒದಗಿಸುತ್ತದೆ.
ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಅಂಕಿ-ಅಂಶ ಸ್ಥಿತಿ-ಗತಿಯನ್ನು ಫೇಸ್ಬುಕ್ನಲ್ಲಿಯೇ ಅರಿಯುತ್ತಿದ್ದಾರೆ.
ಟಿಬಿಡ್ಯಾಂ ಫೇಸ್ಬುಕ್ನಲ್ಲೂ ಪೇಜ್ ತೆಗೆದಿರುವುದರಿಂದ ಇಂತಹ ಭಾಗ್ಯ ಸಿಕ್ಕಿದ್ದು, ಇದನ್ನು ಫಾಲೋ ಮಾಡುತ್ತಿರುವ ಸಾವಿರಾರು ರೈತರು ಫೇಸ್ಬುಕ್ನಲ್ಲಿಯೇ ನೀರಿನ ಲೆಕ್ಕಾಚಾರವನ್ನು ಅರಿಯುತ್ತಿದ್ದಾರೆ.
ಇತ್ಯ ಅಪ್ಡೆಟ್: ಈ ಫೇಸ್ಬುಕ್ ಖಾತೆಯನ್ನು ತುಂಗಭದ್ರಾ ಮಂಡಳಿ ತೆರೆದಿದ್ದು, ನಿತ್ಯವೂ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ಹೊರ ಹರಿವು, ಒಳ ಹರಿವು ಮಾಹಿತಿ ನೀಡುತ್ತಿದೆ. ಫೇಸ್ಬುಕ್ ಪೇಜ್ ಫಾಲೋ ಮಾಡುವ ರೈತರು ಹಾಗೂ ರೈತಪರ ಕಾಳಜಿವುಳ್ಳವರು ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎನ್ನುವ ಮಾಹಿತಿ ಸುಲಭವಾಗಿ ದೊರೆಯುತ್ತಿದೆ.
ಹೆಚ್ಚಿದ ಫಾಲೋವರ್ಸ್: ಟಿಬಿಡ್ಯಾಂ ಪೇಜ್ನ್ನು 12,963 ಜನರು ಫಾಲೋ ಮಾಡುತ್ತಿದ್ದಾರೆ. ಸರಾಸರಿ ನಿತ್ಯ 12,430 ಜನರು ಲೈಕ್ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಆಂಧ್ರಪ್ರದೇಶದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ಕುಡಿವ ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸುತ್ತದೆ. ಫೇಸ್ಬುಕ್ ಪೇಜ್ ಈ ಎಲ್ಲ ಸಂಗತಿಗಳನ್ನು ಒದಗಿಸುತ್ತಿದ್ದು, ಜಲಾಶಯ ನೆಚ್ಚಿರುವ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ.
ಇಲ್ಲೂ ಸಲಹೆ, ಸೂಚನೆಯುಂಟು : ಟಿಬಿ ಡ್ಯಾಂ ಫೇಸ್ಬುಕ್ ಪೇಜ್ ಫಾಲೋ ಮಾಡುವ ರೈತರು ಸಲಹೆ, ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ರೈತರೊಬ್ಬರು ಹೊರ ಹರಿವು ತಗ್ಗಿಸಿ, ಮಾರ್ಚ್ 20ರ ವರೆಗೆ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದ್ದರೆ, ಮತ್ತೊಬ್ಬರು ಎಚ್ಎಲ್ಸಿ ಕಾಲುವೆಗೆ ನೀರು ಬಂದ್ ಮಾಡಿ, ಎಡದಂಡೆಗೆ ಹರಿಸಿ ಎಂದಿದ್ದರೆ, ಮಗದೊಬ್ಬರು ಇನ್ನು ಎಷ್ಟು ದಿನ ನೀರು ಬಿಡುತ್ತಾರೆ? ಎಂಬ ಪ್ರಶ್ನೆಗಳನ್ನು ಪೇಜ್ನಲ್ಲಿ ಕೇಳಲಾಗಿದೆ.
ಇದು ಮಾತ್ರವಲ್ಲದೇ ನೀರಿನ ಲೆಕ್ಕಾಚಾರದಲ್ಲಿ ತಪ್ಪಾಗಿದ್ದರೆ, ಕೂಡಲೇ ಅದಕ್ಕೆ ರೈತರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನೀರಿನ ಸಂಗ್ರಹ ಸಾಮರ್ಥ್ಯ ನಿನ್ನೆ ಇಷ್ಟಿದ್ದರೆ, ಇಂದು ಇಷ್ಟಿದೆಯಲ್ಲ ಎಂದು ಪ್ರಶ್ನಿಸುತ್ತಿರುವುದು ಸಾಮಾನ್ಯ ಎನಿಸಿದೆ. ತುಂಗಭದ್ರಾ ಜಲಾಶಯದ ನೀರಿನ ಒಳ ಹರಿವು, ಹೊರ ಹೊರಿವು, ಕಳೆದ ವರ್ಷ ಹಾಗೂ ಕಳೆದ ಹತ್ತು ವರ್ಷಗಳ ಸರಾಸರಿ ನೀರಿನ ಸಂಗ್ರಹ ಸಾಮರ್ಥ್ಯದ ಮಾಹಿತಿ ನಿತ್ಯ ಈ ಪೇಜ್ನಲ್ಲಿ ಅಪ್ಲೋಡ್ ಮಾಡುತ್ತಿರುವುದರಿಂದ; ರೈತರಿಗೂ ಅನುಕೂಲದ ಜತೆಗೆ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಈ ಪೇಜ್ ವೇದಿಕೆ ಕಲ್ಪಿಸಿದೆ.
ವೋಟು ಕೇಳಿದ್ರೆ ಏಟು ಕೊಡಿ: ತುಂಗಭದ್ರಾ ಜಲಾಶಯದಲ್ಲಿ ಹೊರ ಹರಿವು ಕುರಿತು ಈ ಪೇಜ್ ಫಾಲೋ ಮಾಡುವರೊಬ್ಬರು, ಮೋಸ ಮೋಸ ಎಲ್ಲರಿಗೂ ಜಾಗತಿ ಮೂಡಿಸಿ, ನೀರಿನ ಹರಿವು ಎಂಎಲ್ಎ ವೋಟ್ ಕೇಳಾಕ್ ಬಂದಾಗ್ ತಿಳಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಗಂಭೀರವಾಗಿ ರೈತರು ಪೇಜ್ ಅವಲೋಕಿಸುತ್ತಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.
ಮಹತ್ವದ ಜಲಾಶಯ: ತುಂಗಭದ್ರಾ ಜಲಾಶಯದಲ್ಲಿ ಫೆ.25ರಂದು 12.061 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 4.553 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಈ ಜಲಾಶಯ ರಾಜ್ಯದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಕಷಿ ಪ್ರದೇಶಕ್ಕೆ ಹಾಗೂ ಆಂಧ್ರದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳ 1.46 ಲಕ್ಷ ಹೆಕ್ಟೇರ್ ಕಷಿ ಪ್ರದೇಶಕ್ಕೆ ನೀರು ಒದಗಿಸುತ್ತದೆ.