ಆ್ಯಪ್ನಗರ

ಭಗವಂತನ ಕೃಪೆ ಇದ್ದರೆ ನಾವು ಸರಕಾರ ರಚಿಸುತ್ತೇವೆ: ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ

ನಮ್ಮ ಸರಕಾರ ಇದ್ದರೆ, ನಾವು ಇದನ್ನೇಲ್ಲಾ ತಡೆಯುತ್ತೇವೆ. ನೌಕರ ಪರ ನಿಲ್ಲುತ್ತೇವೆ, ದೇವರ ದಯೆ ಇದ್ದರೆ ನಾವು ಸರಕಾರ ರಚನೆ ಮಾಡುತ್ತೇವೆ ಎಂಬುದು ಬಳ್ಳಾರಿ ನಗರ ಬಿಜೆಪಿ ಶಾಸಕರ ಅಂಬೋಣ

Vijaya Karnataka Web 24 Dec 2018, 4:53 pm
ಬಳ್ಳಾರಿ: ಭಗವಂತನ ಕೃಪೆ ಇದ್ದರೆ ನಾವು ಸರಕಾರ ರಚನೆ ಮಾಡುತ್ತೇವೆ. ದೇವರು ಏನು ಮಾಡ್ತಾರೋ ನೋಡೋಣ. ಅತೃಪ್ತರು ಒಗ್ಗಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮ ಶೇಖರ್ ರೆಡ್ಡಿ ಹೇಳಿದ್ದಾರೆ.
Vijaya Karnataka Web ಸೋಮಶೇಖರ ರೆಡ್ಡಿ
ಸೋಮಶೇಖರ ರೆಡ್ಡಿ


ಬಳ್ಳಾರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ ಬೆಂಬಲಿಸಿ ಮಾತನಾಡುವ ಸಂದರ್ಭದಲ್ಲಿ,‌ ನಮ್ಮ ಸರಕಾರ ಇದ್ದರೆ, ನಾವು ಇದನ್ನೇಲ್ಲಾ ತಡೆಯುತ್ತೇವೆ. ನೌಕರ ಪರ ನಿಲ್ಲುತ್ತೇವೆ, ದೇವರ ದಯೆ ಇದ್ದರೆ ನಾವು ಸರಕಾರ ರಚನೆ ಮಾಡುತ್ತೇವೆ ಎಂದರು.

ಅತೃಪ್ತರೆಲ್ಲರೂ ಒಗ್ಗಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಿ. ಅವರು ಯಾರು ನಮ್ಮನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಎಲ್ಲರೂ ಒಗ್ಗಟ್ಟಾಗಿ ಬಂದರೆ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದರು.

ಬಿಜೆಪಿ ನಾಯಕರು ಯಾರೂ ಇದವರೆಗೂ ಕಾಂಗ್ರೆಸ್‌ ಶಾಸಕರ ಜತೆ ಮಾತುಕತೆ ನಡೆಸಿಲ್ಲ. ಆಪರೇಷನ್‌ ಕಮಲ ಮಾಡಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಈಗ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಸೋಮಶೇಖರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ