ಶಶಿಧರ ಮೇಟಿ, ಬಳ್ಳಾರಿ
ಕಳೆದೆರಡು ಬಾರಿ ಹರಾಜಗದೇ ಉಳಿದ ಸಿ ಕೆಟಗರಿಯ ಕೆಲವು ಗಣಿ ಗುತ್ತಿಗೆಗಳು, ಮೂರನೇ ಬಾರಿ ಅದೃಷ್ಟ ಪರೀಕ್ಷೆ ಎದುರಿಸುತ್ತಿವೆ. ಮೂರನೇ ಹಂತದಲ್ಲಿ 8ಗಣಿ ಗುತ್ತಿಗೆಗಳ ಹರಾಜು ಪ್ರಕ್ರಿಯೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಾಲನೆ ನೀಡಿದ್ದು, ಸಿ ಕೆಟಗರಿ ಗಣಿ ಗುತ್ತಿಗೆ ಪಡೆಯುವವರಲ್ಲಿ ಹೊಸ ಖುಷಿ ಮೂಡಿದೆ.
ಗಣಿ ಅಕ್ರಮ ಆಧಾರದ ಮೇಲೆ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಎ, ಬಿ ಮತ್ತು ಸಿ ಕೆಟಗರಿಗಳಾಗಿ ಗಣಿ ಗುತ್ತಿಗೆ ಪ್ರದೇಶಗಳೆಂದು ವಿಂಗಡಿಸಿದೆ. ಎ ಮತ್ತು ಬಿ ಕೆಟಗರಿ ಗಣಿ ಗುತ್ತಿಗೆಗೆ ಸಂಬಂಧಿಸಿ ದಂಡದ ಮೂಲಕ ಕೆಲವನ್ನು ಆರಂಭಿಸಲು ಸೂಚಿಸಿದೆ. ಒಟ್ಟು 51 ಗಣಿಗಳು ಸಿ ಕೆಟಗರಿಗೆ ಒಳಪಟ್ಟಿವೆ. ಹೆಚ್ಚಿನ ಅಕ್ರಮ ಹಿನ್ನೆಲೆಯಲ್ಲಿ ಸರಕಾರವೇ ಈ ಗಣಿಗಳ ಗುತ್ತಿಗೆ ಪಡೆದು, ಇ-ಹರಾಜು ಪ್ರಕ್ರಿಯೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಸೂಚಿಸಿದೆ. ಸೂಚನೆ ಆಧರಿಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಹಂತ ಹಂತವಾಗಿ ಈ ಗಣಿಗಳ ಇ ಹರಾಜು ನಡೆಸಲು ಯೋಜಿಸಿದೆ.
ಹರಾಜು ವಿವರ:ಸಿ ಕೆಟಗರಿಯ 15 ಗಣಿ ಗುತ್ತಿಗೆಯ ಮೊದಲ ಹಂತದ ಹರಾಜು ಪ್ರಕ್ರಿಯೆ 2016 ನಡೆಸಲಾಯಿತು. ಆಗ ಕೇವಲ ಏಳು ಗಣಿಗಳು ಹರಾಜಾಗಿವೆ. ಜೆಎಸ್ಡಬ್ಲ್ಯು ಐದು ಗಣಿ ಗುತ್ತಿಗೆ ಪ್ರದೇಶ ಹಾಗೂ ಉಳಿದೆರಡು ಗಣಿ ಗುತ್ತಿಗೆಯನ್ನು ಎಂಎಸ್ಪಿಎಲ್ ಪಡೆದಿವೆ. ಆದರೆ, ಈವರೆಗೆ ಕೇವಲ ಎರಡು ಗಣಿ ಗುತ್ತಿಗೆಗಳಿಗೆ ಶಾಸನಬದ್ಧ ಪರವಾನಗಿ ಸಿಕ್ಕಿದ್ದು, ಅವುಗಳಲ್ಲಿ ಗಣಿಗಾರಿಕೆ ಆರಂಭವಾಗಿದೆ. ಇನ್ನುಳಿದ ಗಣಿ ಗುತ್ತಿಗೆ ಪ್ರದೇಶಗಳು, ಶಾಸನಬದ್ಧ ಪರವಾನಗಿಯನ್ನೇ ಇದಿರುನೋಡುತ್ತಿವೆ.
2017ರಲ್ಲಿ ನಡೆದ ಎರಡನೇ ಹಂತದ ಹರಾಜಿನಲ್ಲಿ ಮೊದಲ ಹಂತದಲ್ಲಿ ಹರಾಜಾಗದೇ ಉಳಿದ ಗಣಿಗಳನ್ನೂ ಮರುಹರಾಜು ನಡೆಸಲಾಯಿತು. ಚಿತ್ರದುರ್ಗದ ಚೆನ್ನಕೇಶವ ರೆಡ್ಡಿ, ಎಂ.ಶ್ರೀನಿವಾಸಲು, ಬಳ್ಳಾರಿಯ ಎಂಎಂಟಿ, ಬಿ.ಆರ್.ಯೋಗೇಂದ್ರನಾಥ್ ಸಿಂಗ್, ಆರ್ಎಂಎಂಪಿಎಲ್ ಜತೆಗೆ ಹೊಸದಾಗಿ ಚಿತ್ರದುರ್ಗದಲ್ಲಿನ ಅಲ್ಲಂ ವೀರಭದ್ರಪ್ಪ, ತಂಗವೇಲು, ತುಮಕೂರಿನ ಬಿ.ಆರ್.ಸುರೇಂದ್ರನಾಥ್ಸಿಂಗ್, ಬಳ್ಳಾರಿ ಶಾಂತಾಲಕ್ಷ್ಮಿ ಜಯರಾಂ ಗಣಿ ಗುತ್ತಿಗೆಗೆ ಇ ಹರಾಜು ನಡೆಸಲಾಯಿತು. ಆದರೆ, ಗಣಿ ಗುತ್ತಿಗೆ ಹರಾಜು ನಿಯಮದಂತೆ ಕನಿಷ್ಠ 3 ಅರ್ಜಿ ಬಾರದ ಹಿನ್ನೆಲೆಯಲ್ಲಿ ಒಂದೂ ಗಣಿ ಗುತ್ತಿಗೆ ಆಗ ಹರಾಜಾಗಲಿಲ್ಲ.
ಮೂರನೇ ಹಂತದತ್ತ ಚಿತ್ತ:ಇದೀಗ ಮೂರನೇ ಹಂತದಲ್ಲಿ ಈ ಹಿಂದೆ ಎರಡು ಬಾರಿ ಹರಾಜಾಗದೇ ಉಳಿದ ಚೆನ್ನಕೇಶವ ರೆಡ್ಡಿ, ಎಂ.ಶ್ರೀನಿವಾಸಲು ಮತ್ತು ಎಂಎಂಟಿ ಗಣಿ ಗುತ್ತಿಗೆಗಳನ್ನು ಮೂರನೇ ಬಾರಿ ಅದೃಷ್ಟ ಪರೀಕ್ಷೆ ಒಡ್ಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದೆ. ಮೊದಲ ಹಂತದ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೇ ಉಳಿದ ನಿಧಿ ಮೈನಿಂಗ್ ಕಂಪನಿ, ಹೊಸದಾಗಿ ಎಚ್.ಜಿ.ರಂಗನಗೌಡ, ಬಿಎಂಎಂ, ಎಂಎಂಎಲ್ ಉಬಳಗುಂಡಿ ಹಾಗೂ ಕನ್ನೆಲಾಲ್ದುದೇರಿಯಾ ಸೇರಿ ಒಟ್ಟು 8 ಗಣಿ ಗುತ್ತಿಗೆಗೆ ಮೂರನೇ ಹಂತದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ ಶುರು:ಆ.17ರಂದು ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿತ್ತು. ಆ.20ರಂದು ಟೆಂಡರ್ ಓಪನ್ ಮಾಡಲಾಗುತ್ತಿದ್ದು, ಆ.20ರಿಂದ ಆ.26ರವರೆಗೆ ಟೆಂಡರ್ ಪರಿಶೀಲನೆ ನಡೆಯಲಿದೆ. ಆ.27ರಂದು ತಾಂತ್ರಿಕವಾಗಿ ಅರ್ಹ ಗುತ್ತಿಗೆದಾರರ ಹೆಸರು ಘೋಷಣೆಯಾಗಲಿದೆ. ಆ.28ರಂದು ಫೈನಾನ್ಸಿಯಲ್ ಬಿಡ್ ಓಪನ್ ಮಾಡಲಾಗುತ್ತದೆ. ಸೆ.4,5 ಮತ್ತು 6ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಎರಡು ಹಂತಗಳಲ್ಲಿ ಇಷ್ಟು: ಎರಡು ಹಂತಗಳಲ್ಲಿ ಸಿ ಕೆಟಗರಿಯ 25 ಗಣಿ ಗುತ್ತಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಮೊದಲ ಹಂತದಲ್ಲಿ ವಿ.ಎಸ್.ಲಾಡ್, ರಾಮರಾವ್ ಪೊಲ್, ತುಂಗಭದ್ರಾ ಮಿನರಲ್ಸ್ 1 ಮತ್ತು 2, ಹೊತ್ತೂರ್ ಟ್ರೇಡರ್ಸ್, ಲಕ್ಷ್ಮಿ ನಾರಾಯಣ ಮೈನಿಂಗ್ ಕಂಪನಿ, ಕಾರ್ತಿಕೇಯ ಮೈನ್ಸ್ ಗಣಿ ಗುತ್ತಿಗೆ ಪ್ರದೇಶಗಳು ಮಾತ್ರ ಹರಾಜಾಗಿವೆ. ಇನ್ನುಳಿದ ಗಣಿ ಗುತ್ತಿಗೆಗಳು ಹರಾಜಾಗಿಲ್ಲ.
ಇ-ಹರಾಜಿಗೆ ಈ ಸಮಸ್ಯೆ: ಸಿ ಕೆಟಗರಿಯಲ್ಲಿ ಕೆಲವು ಗಣಿ ಪ್ರದೇಶಗಳು ಕಡಿಮೆ ವಿಸ್ತೀರ್ಣ ಹಾಗೂ ಕಡಿಮೆ ಪ್ರಮಾಣದ ಕಬ್ಬಿಣ ಅದಿರು ಹೊಂದಿವೆ ಇದು ಗಣಿ ಗುತ್ತಿಗೆ ಇ ಹರಾಜಿಗೆ ಅಡ್ಡಿಯಾಗಿದೆ. ಮೂರನೇ ಹಂತದಲ್ಲೂ ಗಣಿ ಗುತ್ತಿಗೆಗಳು ಹರಾಜಾಗದಿದ್ದರೆ, ಸುಪ್ರೀಂ ಕೋರ್ಟ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ನೀಡಲಿದೆ. ಸುಪ್ರೀಂ ಕೋರ್ಟ್ ನೀಡುವ ಸೂಚನೆಯಂತೆ ಮುಂದಿನ ಕ್ರಮ ನಿರ್ಧರಿಸುವ ಸಾಧ್ಯತೆಯಿದೆ.
ಕಳೆದೆರಡು ಬಾರಿ ಹರಾಜಗದೇ ಉಳಿದ ಸಿ ಕೆಟಗರಿಯ ಕೆಲವು ಗಣಿ ಗುತ್ತಿಗೆಗಳು, ಮೂರನೇ ಬಾರಿ ಅದೃಷ್ಟ ಪರೀಕ್ಷೆ ಎದುರಿಸುತ್ತಿವೆ. ಮೂರನೇ ಹಂತದಲ್ಲಿ 8ಗಣಿ ಗುತ್ತಿಗೆಗಳ ಹರಾಜು ಪ್ರಕ್ರಿಯೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಾಲನೆ ನೀಡಿದ್ದು, ಸಿ ಕೆಟಗರಿ ಗಣಿ ಗುತ್ತಿಗೆ ಪಡೆಯುವವರಲ್ಲಿ ಹೊಸ ಖುಷಿ ಮೂಡಿದೆ.
ಗಣಿ ಅಕ್ರಮ ಆಧಾರದ ಮೇಲೆ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಎ, ಬಿ ಮತ್ತು ಸಿ ಕೆಟಗರಿಗಳಾಗಿ ಗಣಿ ಗುತ್ತಿಗೆ ಪ್ರದೇಶಗಳೆಂದು ವಿಂಗಡಿಸಿದೆ. ಎ ಮತ್ತು ಬಿ ಕೆಟಗರಿ ಗಣಿ ಗುತ್ತಿಗೆಗೆ ಸಂಬಂಧಿಸಿ ದಂಡದ ಮೂಲಕ ಕೆಲವನ್ನು ಆರಂಭಿಸಲು ಸೂಚಿಸಿದೆ. ಒಟ್ಟು 51 ಗಣಿಗಳು ಸಿ ಕೆಟಗರಿಗೆ ಒಳಪಟ್ಟಿವೆ. ಹೆಚ್ಚಿನ ಅಕ್ರಮ ಹಿನ್ನೆಲೆಯಲ್ಲಿ ಸರಕಾರವೇ ಈ ಗಣಿಗಳ ಗುತ್ತಿಗೆ ಪಡೆದು, ಇ-ಹರಾಜು ಪ್ರಕ್ರಿಯೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಸೂಚಿಸಿದೆ. ಸೂಚನೆ ಆಧರಿಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಹಂತ ಹಂತವಾಗಿ ಈ ಗಣಿಗಳ ಇ ಹರಾಜು ನಡೆಸಲು ಯೋಜಿಸಿದೆ.
ಹರಾಜು ವಿವರ:ಸಿ ಕೆಟಗರಿಯ 15 ಗಣಿ ಗುತ್ತಿಗೆಯ ಮೊದಲ ಹಂತದ ಹರಾಜು ಪ್ರಕ್ರಿಯೆ 2016 ನಡೆಸಲಾಯಿತು. ಆಗ ಕೇವಲ ಏಳು ಗಣಿಗಳು ಹರಾಜಾಗಿವೆ. ಜೆಎಸ್ಡಬ್ಲ್ಯು ಐದು ಗಣಿ ಗುತ್ತಿಗೆ ಪ್ರದೇಶ ಹಾಗೂ ಉಳಿದೆರಡು ಗಣಿ ಗುತ್ತಿಗೆಯನ್ನು ಎಂಎಸ್ಪಿಎಲ್ ಪಡೆದಿವೆ. ಆದರೆ, ಈವರೆಗೆ ಕೇವಲ ಎರಡು ಗಣಿ ಗುತ್ತಿಗೆಗಳಿಗೆ ಶಾಸನಬದ್ಧ ಪರವಾನಗಿ ಸಿಕ್ಕಿದ್ದು, ಅವುಗಳಲ್ಲಿ ಗಣಿಗಾರಿಕೆ ಆರಂಭವಾಗಿದೆ. ಇನ್ನುಳಿದ ಗಣಿ ಗುತ್ತಿಗೆ ಪ್ರದೇಶಗಳು, ಶಾಸನಬದ್ಧ ಪರವಾನಗಿಯನ್ನೇ ಇದಿರುನೋಡುತ್ತಿವೆ.
2017ರಲ್ಲಿ ನಡೆದ ಎರಡನೇ ಹಂತದ ಹರಾಜಿನಲ್ಲಿ ಮೊದಲ ಹಂತದಲ್ಲಿ ಹರಾಜಾಗದೇ ಉಳಿದ ಗಣಿಗಳನ್ನೂ ಮರುಹರಾಜು ನಡೆಸಲಾಯಿತು. ಚಿತ್ರದುರ್ಗದ ಚೆನ್ನಕೇಶವ ರೆಡ್ಡಿ, ಎಂ.ಶ್ರೀನಿವಾಸಲು, ಬಳ್ಳಾರಿಯ ಎಂಎಂಟಿ, ಬಿ.ಆರ್.ಯೋಗೇಂದ್ರನಾಥ್ ಸಿಂಗ್, ಆರ್ಎಂಎಂಪಿಎಲ್ ಜತೆಗೆ ಹೊಸದಾಗಿ ಚಿತ್ರದುರ್ಗದಲ್ಲಿನ ಅಲ್ಲಂ ವೀರಭದ್ರಪ್ಪ, ತಂಗವೇಲು, ತುಮಕೂರಿನ ಬಿ.ಆರ್.ಸುರೇಂದ್ರನಾಥ್ಸಿಂಗ್, ಬಳ್ಳಾರಿ ಶಾಂತಾಲಕ್ಷ್ಮಿ ಜಯರಾಂ ಗಣಿ ಗುತ್ತಿಗೆಗೆ ಇ ಹರಾಜು ನಡೆಸಲಾಯಿತು. ಆದರೆ, ಗಣಿ ಗುತ್ತಿಗೆ ಹರಾಜು ನಿಯಮದಂತೆ ಕನಿಷ್ಠ 3 ಅರ್ಜಿ ಬಾರದ ಹಿನ್ನೆಲೆಯಲ್ಲಿ ಒಂದೂ ಗಣಿ ಗುತ್ತಿಗೆ ಆಗ ಹರಾಜಾಗಲಿಲ್ಲ.
ಮೂರನೇ ಹಂತದತ್ತ ಚಿತ್ತ:ಇದೀಗ ಮೂರನೇ ಹಂತದಲ್ಲಿ ಈ ಹಿಂದೆ ಎರಡು ಬಾರಿ ಹರಾಜಾಗದೇ ಉಳಿದ ಚೆನ್ನಕೇಶವ ರೆಡ್ಡಿ, ಎಂ.ಶ್ರೀನಿವಾಸಲು ಮತ್ತು ಎಂಎಂಟಿ ಗಣಿ ಗುತ್ತಿಗೆಗಳನ್ನು ಮೂರನೇ ಬಾರಿ ಅದೃಷ್ಟ ಪರೀಕ್ಷೆ ಒಡ್ಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದೆ. ಮೊದಲ ಹಂತದ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೇ ಉಳಿದ ನಿಧಿ ಮೈನಿಂಗ್ ಕಂಪನಿ, ಹೊಸದಾಗಿ ಎಚ್.ಜಿ.ರಂಗನಗೌಡ, ಬಿಎಂಎಂ, ಎಂಎಂಎಲ್ ಉಬಳಗುಂಡಿ ಹಾಗೂ ಕನ್ನೆಲಾಲ್ದುದೇರಿಯಾ ಸೇರಿ ಒಟ್ಟು 8 ಗಣಿ ಗುತ್ತಿಗೆಗೆ ಮೂರನೇ ಹಂತದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ ಶುರು:ಆ.17ರಂದು ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿತ್ತು. ಆ.20ರಂದು ಟೆಂಡರ್ ಓಪನ್ ಮಾಡಲಾಗುತ್ತಿದ್ದು, ಆ.20ರಿಂದ ಆ.26ರವರೆಗೆ ಟೆಂಡರ್ ಪರಿಶೀಲನೆ ನಡೆಯಲಿದೆ. ಆ.27ರಂದು ತಾಂತ್ರಿಕವಾಗಿ ಅರ್ಹ ಗುತ್ತಿಗೆದಾರರ ಹೆಸರು ಘೋಷಣೆಯಾಗಲಿದೆ. ಆ.28ರಂದು ಫೈನಾನ್ಸಿಯಲ್ ಬಿಡ್ ಓಪನ್ ಮಾಡಲಾಗುತ್ತದೆ. ಸೆ.4,5 ಮತ್ತು 6ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಎರಡು ಹಂತಗಳಲ್ಲಿ ಇಷ್ಟು: ಎರಡು ಹಂತಗಳಲ್ಲಿ ಸಿ ಕೆಟಗರಿಯ 25 ಗಣಿ ಗುತ್ತಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಮೊದಲ ಹಂತದಲ್ಲಿ ವಿ.ಎಸ್.ಲಾಡ್, ರಾಮರಾವ್ ಪೊಲ್, ತುಂಗಭದ್ರಾ ಮಿನರಲ್ಸ್ 1 ಮತ್ತು 2, ಹೊತ್ತೂರ್ ಟ್ರೇಡರ್ಸ್, ಲಕ್ಷ್ಮಿ ನಾರಾಯಣ ಮೈನಿಂಗ್ ಕಂಪನಿ, ಕಾರ್ತಿಕೇಯ ಮೈನ್ಸ್ ಗಣಿ ಗುತ್ತಿಗೆ ಪ್ರದೇಶಗಳು ಮಾತ್ರ ಹರಾಜಾಗಿವೆ. ಇನ್ನುಳಿದ ಗಣಿ ಗುತ್ತಿಗೆಗಳು ಹರಾಜಾಗಿಲ್ಲ.
ಇ-ಹರಾಜಿಗೆ ಈ ಸಮಸ್ಯೆ: ಸಿ ಕೆಟಗರಿಯಲ್ಲಿ ಕೆಲವು ಗಣಿ ಪ್ರದೇಶಗಳು ಕಡಿಮೆ ವಿಸ್ತೀರ್ಣ ಹಾಗೂ ಕಡಿಮೆ ಪ್ರಮಾಣದ ಕಬ್ಬಿಣ ಅದಿರು ಹೊಂದಿವೆ ಇದು ಗಣಿ ಗುತ್ತಿಗೆ ಇ ಹರಾಜಿಗೆ ಅಡ್ಡಿಯಾಗಿದೆ. ಮೂರನೇ ಹಂತದಲ್ಲೂ ಗಣಿ ಗುತ್ತಿಗೆಗಳು ಹರಾಜಾಗದಿದ್ದರೆ, ಸುಪ್ರೀಂ ಕೋರ್ಟ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ನೀಡಲಿದೆ. ಸುಪ್ರೀಂ ಕೋರ್ಟ್ ನೀಡುವ ಸೂಚನೆಯಂತೆ ಮುಂದಿನ ಕ್ರಮ ನಿರ್ಧರಿಸುವ ಸಾಧ್ಯತೆಯಿದೆ.