ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಸಹಯೋಗದಲ್ಲಿ ಭಾನುವಾರ ಎನ್.ಡಿ. ವೆಂಕಮ್ಮನವರ ಸ್ವರಚಿತ 'ಯಾರು ಸಾಕ್ಷಿ' ಎಂಬ ಕವನ ಸಂಕಲನವನ್ನು ಬಿಡುಗಡೆಮಾಡಲಾಯಿತು. ತುಮಕೂರು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ನೊಂದವರ ಧ್ವನಿಯಾಗಬೇಕು. ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿರಬೇಕು. ಸಾಮಾಜವನ್ನು ಪರಿವರ್ತನೆಮಾಡುವ ಸಾಹಿತ್ಯ ಪ್ರಸ್ತುತ ಅಗತ್ಯ ಎಂದರು. ಡಾ.ಸುಭದ್ರಮ್ಮ ಮನ್ಸೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಲೇಖಕಿ ಎನ್.ಡಿ.ವೆಂಕಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ, ಸಾಹಿತಿ ಎಸ್.ಬಿ.ಚಂದ್ರಶೇಖರ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಸುಧಾ ಚಿದಾನಂದ ಗೌಡ, ಹಂಪಿ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಸಿದ್ದಗಂಗಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕವಯಿತ್ರಿ ಸುಶೀಲಾ ಶಿರೂರ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವೆಂಕಟಯ್ಯ ಅಪ್ಪಗೆರೆ, ಇತಿಹಾಸ ಅಕಾಡೆಮಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಚ್.ಎಂ.ಬಸವರಾಜ್ ಇದ್ದರು. ಕೆ.ವೆಂಕಟೇಶ್ಮೂರ್ತಿ, ಡಾ.ಬಿ.ಜಿ.ಕಲಾವತಿ ನಿರ್ವಹಿಸಿದರು. ದೊಡ್ಡ ಬಸವ ಗವಾಯಿ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು.
‘ಯಾರು ಸಾಕ್ಷಿ’ ಕವನ ಸಂಕಲನ ಬಿಡುಗಡೆ
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಸಹಯೋಗದಲ್ಲಿ ಭಾನುವಾರ ಎನ್.ಡಿ. ವೆಂಕಮ್ಮನವರ ಸ್ವರಚಿತ 'ಯಾರು ಸಾಕ್ಷಿ' ಎಂಬ ಕವನ ಸಂಕಲನವನ್ನು ಬಿಡುಗಡೆಮಾಡಲಾಯಿತು.
ವಿಕ ಸುದ್ದಿಲೋಕ 7 Sep 2016, 9:00 am