ಆ್ಯಪ್ನಗರ

ಕಾರು ಕೇಳಿದ ಪತ್ನಿಯ 15 ಪೀಸ್

ಕಾರು ಕೊಡಿಸುವಂತೆ ಪೀಡಿಸಿದ್ದಕ್ಕೆ ಕೋಪಗೊಂಡ ಪತಿರಾಯ, ತನ್ನ ಪತ್ನಿಯನ್ನೇ ಕೊಲೆ ಮಾಡಿ, ದೇಹವನ್ನು ಹದಿನೈದು ತುಂಡುಮಾಡಿ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

Vijaya Karnataka 6 Apr 2018, 9:36 am
ಹೊಸಪೇಟೆ: ಕಾರು ಕೊಡಿಸುವಂತೆ ಪೀಡಿಸಿದ್ದಕ್ಕೆ ಕೋಪಗೊಂಡ ಪತಿರಾಯ, ತನ್ನ ಪತ್ನಿಯನ್ನೇ ಕೊಲೆ ಮಾಡಿ, ದೇಹವನ್ನು ಹದಿನೈದು ತುಂಡುಮಾಡಿ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web murder


ಮಂಗಳೂರು ಮೂಲದ ಚಂದ್ರಹಾಸ (27) ಆರೋಪಿ ಪತಿ. ಭಾರತಿ (24) ಕೊಲೆಯಾದವರು. ಈ ದಂಪತಿ ನಗರದ ಸುಣ್ಣದ ಬಟ್ಟಿ ಏರಿಯಾದಲ್ಲಿ ವಾಸವಾಗಿದ್ದರು. ನಗರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಹಂಪಿಯ ಪ್ರಕಾಶನಗರದ ಭಾರತಿಯನ್ನು ಚಂದ್ರಹಾಸ ಪ್ರೀತಿಸಿ, ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ.

2018ರ ಫೆಬ್ರವರಿ 19ರ ರಾತ್ರಿ ನಡೆದ ಜಗಳದಲ್ಲಿ ಚಂದ್ರಹಾಸ, ತನ್ನ ಪತ್ನಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದ. ತಲೆ ತಿರುಗಿ ಬಿದ್ದ ಭಾರತಿ ಮೃತಪಟ್ಟಿದ್ದಾರೆ. ಇದರಿಂದ ಹೆದರಿದ ಚಂದ್ರಹಾಸ, ಪತ್ನಿಯ ದೇಹವನ್ನು ಹದಿನೈದು ತುಂಡುಮಾಡಿ, ನಾಲ್ಕು ಬ್ಯಾಗ್‌ಗಳಲ್ಲಿ ತುಂಬಿ, ನಗರದ ರೈಲ್ವೆ ಸ್ಟೇಶನ್‌ ರಸ್ತೆಯ ಎಲ್‌ಎಲ್‌ಸಿ ಕಾಲುವೆಯಲ್ಲಿ ಎಸೆದಿದ್ದ.

ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಚಂದ್ರಹಾಸ, ಆಕೆಯ ತವರು ಮನೆಯವರಿಗೂ ಸುದ್ದಿಮುಟ್ಟಿಸಿದ್ದ. ಎಲ್ಲರೂ ಸೇರಿ ಹುಡುಕೋಣ, ಪೊಲೀಸ್‌ ಠಾಣೆಗೆ ದೂರು ಕೊಡುವುದು ಬೇಡ ಎಂದು ಕುಟುಂಬದವರನ್ನು ನಂಬಿಸಿದ್ದ. ಕೆಲ ದಿನಗಳವರೆಗೆ ಪತ್ನಿಯನ್ನು ಹುಡುಕಿದಂತೆ ನಟಿಸಿದ ಆತ, ನಂತರ ಪರಾರಿಯಾಗಿದ್ದ. ಚಂದ್ರಹಾಸನ ಅಣ್ಣ ಈ ಕುರಿತು ಪಟ್ಟಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಕೊಲೆಯ ಪ್ರಕರಣ ಭೇದಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ