ಹೊಸಪೇಟೆ; ತಾಲೂಕಿನ ಸೀತಾರಾಂ ತಾಂಡಾ ವ್ಯಾಪ್ತಿಯಲ್ಲಿ ವನ್ಯ ಜೀವಿಗಳ ಹಾವಳಿಯಿಂದ ರೈತರು ಬೆಳೆದ ಫಸಲುಗಳು ಹಾಳಗುತ್ತಿದ್ದು, ರೈತರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಸೀತಾರಾಂ ತಾಂಡಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಡಲೆ, ಮೆಕ್ಕೆಜೋಳ, ಬಾಳೆ, ಕಬ್ಬು ಸೇರಿದಂತೆ ನಾನಾ ಫಸಲುಗಳು ಫಲ ನೀಡುವ ಸಂದರ್ಭದಲ್ಲೇ ವನ್ಯ ಜೀವಿಗಳು ಹಾಳು ಮಾಡುತ್ತಿರುವುದರಿಂದ ಸಣ್ಣ ಹಿಡುವಳಿದಾರರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಬೆಳೆದಿರುವ ಬೆಳೆಗಳು ಪ್ರಾಣಿಗಳಿಗೆ ಆಹುತಿಯಾಗುತ್ತಿದೆ. ಚಿರತೆ, ಕರಡಿ ಸೇರಿದಂತೆ ನಾನಾ ಪ್ರಾಣಿಗಳು ಈ ಭಾಗದಲ್ಲಿ ತಿರುಗಾಡುತ್ತಿವೆ. ಪ್ರಾಣಿಗಳ ಹಿಂಡು ಹೊಲ-ಗದ್ದೆಗಳಿಗೆ ಆಗಮಿಸಿ ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ರೈತರು ಸಂಜೆಯಾಗುತ್ತಲೇ ಮನೆ ಸೇರುವ ಸ್ಥಿತಿ ಸೀತಾರಾಂ ತಾಂಡಾದ ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಕಮಲಾಪುರದ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಬೆಳೆದಿರುವ ನಾನಾ ಬೆಳೆಯನ್ನು ವನ್ಯಜೀವಿಗಳು ಹಾಳು ಮಾಡುತ್ತಿವೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳನ್ನು ಪ್ರಾಣಿಗಳು ಹಾಳು ಮಾಡುತ್ತಿವೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರೈತರಾದ ಸಿದ್ದಪ್ಪ, ಹಳ್ಳಿ ಜಂಬಯ್ಯ ಆಗ್ರಹಿಸಿದ್ದಾರೆ.
ಸೀತಾರಾಂ ತಾಂಡಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಡಲೆ, ಮೆಕ್ಕೆಜೋಳ, ಬಾಳೆ, ಕಬ್ಬು ಸೇರಿದಂತೆ ನಾನಾ ಫಸಲುಗಳು ಫಲ ನೀಡುವ ಸಂದರ್ಭದಲ್ಲೇ ವನ್ಯ ಜೀವಿಗಳು ಹಾಳು ಮಾಡುತ್ತಿರುವುದರಿಂದ ಸಣ್ಣ ಹಿಡುವಳಿದಾರರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಬೆಳೆದಿರುವ ಬೆಳೆಗಳು ಪ್ರಾಣಿಗಳಿಗೆ ಆಹುತಿಯಾಗುತ್ತಿದೆ. ಚಿರತೆ, ಕರಡಿ ಸೇರಿದಂತೆ ನಾನಾ ಪ್ರಾಣಿಗಳು ಈ ಭಾಗದಲ್ಲಿ ತಿರುಗಾಡುತ್ತಿವೆ. ಪ್ರಾಣಿಗಳ ಹಿಂಡು ಹೊಲ-ಗದ್ದೆಗಳಿಗೆ ಆಗಮಿಸಿ ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ರೈತರು ಸಂಜೆಯಾಗುತ್ತಲೇ ಮನೆ ಸೇರುವ ಸ್ಥಿತಿ ಸೀತಾರಾಂ ತಾಂಡಾದ ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಕಮಲಾಪುರದ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಬೆಳೆದಿರುವ ನಾನಾ ಬೆಳೆಯನ್ನು ವನ್ಯಜೀವಿಗಳು ಹಾಳು ಮಾಡುತ್ತಿವೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳನ್ನು ಪ್ರಾಣಿಗಳು ಹಾಳು ಮಾಡುತ್ತಿವೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರೈತರಾದ ಸಿದ್ದಪ್ಪ, ಹಳ್ಳಿ ಜಂಬಯ್ಯ ಆಗ್ರಹಿಸಿದ್ದಾರೆ.