ಸಂಡೂರು : ಕೊಠಡಿಗಳ ಕೊರತೆ, ಇಕ್ಕಟ್ಟಿನಲ್ಲಿ ಪಾಠ ಕೇಳುವ ಅನಿವಾರ್ಯತೆ, ಶೌಚಕ್ಕೆ ಬಯಲೇ ಆಸರೆ, ರಾಷ್ಟ್ರೀಯ ಹಬ್ಬ, ದಿನಾಚರಣೆಗಳು ಬಂದಲ್ಲಿ ಚಿಂತೆಗೆ ಬೀಳುವ, ನಿರ್ವಹಣೆ ವೆಚ್ಚಕ್ಕೆ ಸ್ವಂತ ಹಣ ವ್ಯಯಿಸುವ ಶಿಕ್ಷ ಕ ವರ್ಗ. ಇವು ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸರ್ವಶಿಕ್ಷ ಣ ಅಭಿಯಾನ ಯೋಜನೆ ಬಂದ್ ಆದ ನಂತರದ ತಾಲೂಕಿನ ಸರಕಾರಿ ಶಾಲೆಗಳ ಚಿತ್ರಣಗಳು.
ತಾಲೂಕಿನಲ್ಲಿ 155 ಸ.ಕಿ.ಪ್ರಾ ಮತ್ತು ಸ.ಹಿ.ಪ್ರಾ.ಶಾಲೆ, 20 ಸರಕಾರಿ ಪ್ರೌಢಶಾಲೆಗಳಿವೆ. 996 ಮಂಜೂರಾದ ಶಿಕ್ಷ ಕ ಹುದ್ದೆಗಳ ಪೈಕಿ ಖಾಲಿಯಿರುವ 429 ಹುದ್ದೆಗೆ ಅತಿಥಿ ಶಿಕ್ಷ ಕರನ್ನು ನೇಮಿಸಿಕೊಳ್ಳಲಾಗಿದೆ. 27,135 ವಿದ್ಯಾರ್ಥಿಗಳು ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸರ್ವ ಶಿಕ್ಷ ಣ ಅಭಿಯಾನ ಯೋಜನೆ ಸ್ಥಗಿತಗೊಂಡಿದ್ದರಿಂದ 349 ಕೊಠಡಿಗಳ ಕೊರತೆ ಕಾಡುತ್ತಿದೆ. ವಿಶೇಷವಾಗಿ ತಾಳೂರು, ತೋರಣಗಲ್ಲು, ದರೋಜಿ ಸೇರಿ ನಾನಾ ಕಡೆ ತಲಾ 10 ಕ್ಕೂ ಹೆಚ್ಚು ಕೊಠಡಿಗಳ ಕೊರತೆ ಕಾಡುತ್ತಿದ್ದು, ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಬಹುಪಾಲು ಶಾಲೆಗಳು ಸುಣ್ಣ ಬಣ್ಣ ಕಾಣದೇ ಅಂದಗೇಡಿಯಾಗಿವೆ.
ಕೈಹಿಡಿಯದ ಜಿಲ್ಲಾ ಖನಿಜ ನಿಧಿ: ಜಿಲ್ಲಾ ಖನಿಜ ನಿಧಿಯಡಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಅನುದಾನ ಈವರೆಗೆ ಲಭ್ಯವಾಗಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 45 ಶಾಲೆಗಳ ಕಾಂಪೌಂಡ್ ಗೋಡೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ 24 ಶಾಲೆಗಳಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕಿದೆ. 21 ಶಾಲೆಗಳ ಶೌಚಾಲಯಗಳು ಪೂರ್ಣ ಪ್ರಮಾಣದ ದುರಸ್ತಿಯಾಗಬೇಕಿದೆ. ಇನ್ನು ತಾಳೂರು, ಕೃಷ್ಣಾನಗರ, ಚೋರನೂರು, ಬಂಡ್ರಿ, ನಿಡಗುರ್ತಿ ಸೇರಿ ಹಲವೆಡೆ ಶೌಚಾಲಯಗಳು ಗಬ್ಬೆದ್ದು ಹೋಗಿದ್ದು ಶಿಕ್ಷ ಕರು, ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲಿಗೆ ತೆರಳಬೇಕಿದೆ. ಬಯಲಿಗೆ ತೆರಳಬೇಕೆಂಬ ನಾಚಿಕೆಯಿಂದ ವಿದ್ಯಾರ್ಥಿನಿಯರು ಸಾಕಷ್ಟು ನೀರು ಸೇವಿಸದೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೌಚಾಲಯ ಸ್ವಚ್ಛಗೊಳಿಸುವವರಿಲ್ಲದಿರುವುದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಮೇಲಾಗಿ ಸಾಕಷ್ಟು ಕುಡಿವ ನೀರಿಲ್ಲದೇ ಸೊರಗಿದ ಶಾಲೆಗಳಲ್ಲಿ ಶೌಚಕ್ಕಾಗಿ ಕೊಡಗಟ್ಟಲೆ ನೀರು ಹೊಂದಿಸಲು ಸಾಧ್ಯವಿಲ್ಲ ಎಂದು ಕೆಲ ಶಾಲೆಗಳ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.
ಲಭ್ಯವಾಗದ ಅನುದಾನ: ಶಾಲೆಗಳ ಶೌಚಾಲಯ, ಕೊಠಡಿ ನಿರ್ವಹಣೆಗೆ, ರಾಷ್ಟ್ರೀಯ ಹಬ್ಬ, ಮಹಾತ್ಮರ ದಿನಾಚರಣೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ಗಣಿತ, ವಿಜ್ಞಾನ ಮೇಳ ಸೇರಿ ಎಲ್ಲ ಕಾರ್ಯಕ್ರಮಗಳಿಗೆ 1 ರಿಂದ 15 ವಿದ್ಯಾರ್ಥಿಗಳಿರುವ ಶಾಲೆಗೆ ವಾರ್ಷಿಕ 12,500 ರೂ., 16 ರಿಂದ 100 ವಿದ್ಯಾರ್ಥಿಗಳಿರುವ ಶಾಲೆಗೆ 25 ಸಾವಿರ ರೂ., 101 ರಿಂದ 250 ವಿದ್ಯಾರ್ಥಿಗಳಿರುವ ಶಾಲೆಗೆ 50 ಸಾವಿರ ರೂ., 251 ರಿಂದ 1 ಸಾವಿರ ವಿದ್ಯಾರ್ಥಿಗಳಿರುವ ಶಾಲೆಗೆ 75 ಸಾವಿರ ರೂ., ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗೆ ಒಂದು ಲಕ್ಷ ರೂ.ಅನುದಾನ ನೀಡಲಾಗುತ್ತಿದೆಯಾದರೂ ಅರ್ಧ ಶೈಕ್ಷ ಣಿಕ ವರ್ಷ ಪೂರ್ಣಗೊಂಡರೂ ಈವರೆಗೆ ಅನುದಾನ ಲಭ್ಯವಾಗಿಲ್ಲ. ಪರಿಣಾಮ ಶಿಕ್ಷ ಕರು ಪೋಷಕರಿಂದ, ದಾನಿಗಳಿಂದ ದೇಣಿಗೆ ಸಂಗ್ರಹಣೆ ಮಾಡಲು ಪಾಠ ಮಾಡುವ ಕೆಲಸ ಬಿಟ್ಟು ಊರು ಸುತ್ತುವಂತಾಗಿದೆ.
ವರ್ಷದ ಕೊನೆಗೆ ಕಾಸು: ಉಳಿದಂತೆ ಶಿಕ್ಷ ಕರೊಬ್ಬರಿಗೆ ಚಾಕ್ಪೀಸ್, ಡಸ್ಟರ್ ಸೇರಿ ನಾನಾ ಪರಿಕರ ವೆಚ್ಚವಾಗಿ ವಾರ್ಷಿಕ 600 ರೂ. ನೀಡಲಾಗುತ್ತದೆ. ವರ್ಷದ ಕೊನೆಗೆ ಅನುದಾನ ಸಿಗುವುದರಿಂದ ಸಾಲ ಮಾಡಿ ಪರಿಕರ ಖರೀದಿಸುವುದು ಅನಿವಾರ್ಯವಾಗಿದೆ. ಶಾಲೆಗಳಲ್ಲಿ ಡಿ ದರ್ಜೆಯ ನೌಕರರಿಲ್ಲದಿರುವುದರಿಂದ ಕಸ ಗುಡಿಸುವುದು ಸೇರಿ ಶಾಲೆಯ ಆವರಣವನ್ನು ಸ್ವಚ್ಛ ಪಡಿಸುವವರು ದಿಕ್ಕಿಲ್ಲದಂತಾಗಿದೆ. ಶ್ರಮದಾನದ ಹೆಸರಿನಲ್ಲಿ ವಿದ್ಯಾಥಿಗಳಿಂದ ಕಸ ಗುಡಿಸಲಾಗುತ್ತದೆ. ಕೆಲವೆಡೆ ವಿದ್ಯಾರ್ಥಿಗಳಿಂದ ಕಸ ಗುಡಿಸುವುದನ್ನು ಕಂಡು ಪೋಷಕರು ಶಿಕ್ಷ ಕರ ಜತೆ ಜಗಳ ಕಾದ ಘಟನೆಗಳು ಸಾಕಷ್ಟಿವೆ. ಪ್ರತಿ ಶಾಲೆಗೆ ಒಬ್ಬ ಡಿ ದರ್ಜೆ ನೌಕರರನ್ನು ಸರಕಾರ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಶಿಕ್ಷ ಕರು, ಪೋಷಕರು ಆಗ್ರಹಿಸುತ್ತಾರೆ.
...................
ಶಾಲೆಗಳಿಗೆ ಯಾವ ಅನುದಾನವನ್ನೂ ಸರಕಾರ ನೀಡುತ್ತಿಲ್ಲ. ರಾಷ್ಟ್ರೀಯ ಹಬ್ಬ ಹರಿ ದಿನಗಳಲ್ಲಿ ಸ್ವಂತ ಹಣ ಖರ್ಚು ಮಾಡುತ್ತೇವೆ. 10 ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ. ಕಳೆದ 3-4 ವರ್ಷದಿಂದ ಕೊಠಡಿ ನಿರ್ಮಾಣ ಮಾಡಲು ಡಿಸಿ, ಶಾಸಕರಿಗೆ ಮನವಿ ಮಾಡಿದರೂ ಅನುದಾನ ಸಿಕ್ಕಿಲ್ಲ. ವಿದ್ಯಾರ್ಥಿಗಳು ಅಪಾಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶೌಚಾಲಯಗಳ ಬಾಗಿಲು ಕಿತ್ತು ಬಂದಿದ್ದು, ದುರಸ್ತಿ ಮಾಡಿಸಲು ಅನುದಾನವಿಲ್ಲ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಿ ಎಂದು ಗ್ರಾ.ಪಂ.ನವರನ್ನು ಕೇಳಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
- ರಾಮಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ , ತಾಳೂರು.
.................
ನಮ್ಮೂರ ಶಾಲೆಯ 8-10 ಕೊಠಡಿಗಳ ಚಾವಣಿ ಶಿಥಿಲಗೊಂಡು ಕುಸಿವ ಹಂತದಲ್ಲಿವೆ. ಮಳೆಗಾಲದಲ್ಲಿ ಸೋರುವ ಕೊಠಡಿಗಳಲ್ಲಿ ತಲಾ 150-200 ವಿದ್ಯಾರ್ಥಿಗಳು ಅಪಾಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಳೆ ಬಂದಾಗ ಶಾಲೆ ಮೈದಾನ ಕೆಸರುಗದ್ದೆಯಂತಾಗುತ್ತದೆ. ನರೇಗಾ ಅಡಿ ಶಾಲೆ ಮೈದಾನ ಅಭಿವೃದ್ಧಿ ಮಾಡಲು ಅವಕಾಶವಿದ್ದರೂ ಕುರಿತು ಗ್ರಾ.ಪಂ.ಗೆ ಕಾಳಜಿಯಿಲ್ಲ.
- ಕಾಲೂಬಾ, ಪೋಷಕ, ತಾಳೂರು.
...................
ಸರ್ವ ಶಿಕ್ಷ ಣ ಅಭಿಯಾನ ಯೋಜನೆ ಸ್ಥಗಿತಗೊಂಡ ನಂತರ ಸಮಗ್ರ ಶಿಕ್ಷ ಣ ಅಭಿಯಾನ ಯೋಜನೆಯಡಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಅನುದಾನ ನೀಡುವುದಾಗಿ ಸರಕಾರ ತಿಳಿಸಿದೆ. ಮುಂದಿನ ವಾರದಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ. ಶಿಕ್ಷ ಕರಿಗೆ ಪರಿಕರ ವೆಚ್ಚವಾಗಿ ವಾರ್ಷಿಕ ತಲಾ 600 ರೂ. ಸರಕಾರ ನೀಡುತ್ತದೆ.
ತಾಲೂಕಿನಲ್ಲಿ 155 ಸ.ಕಿ.ಪ್ರಾ ಮತ್ತು ಸ.ಹಿ.ಪ್ರಾ.ಶಾಲೆ, 20 ಸರಕಾರಿ ಪ್ರೌಢಶಾಲೆಗಳಿವೆ. 996 ಮಂಜೂರಾದ ಶಿಕ್ಷ ಕ ಹುದ್ದೆಗಳ ಪೈಕಿ ಖಾಲಿಯಿರುವ 429 ಹುದ್ದೆಗೆ ಅತಿಥಿ ಶಿಕ್ಷ ಕರನ್ನು ನೇಮಿಸಿಕೊಳ್ಳಲಾಗಿದೆ. 27,135 ವಿದ್ಯಾರ್ಥಿಗಳು ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸರ್ವ ಶಿಕ್ಷ ಣ ಅಭಿಯಾನ ಯೋಜನೆ ಸ್ಥಗಿತಗೊಂಡಿದ್ದರಿಂದ 349 ಕೊಠಡಿಗಳ ಕೊರತೆ ಕಾಡುತ್ತಿದೆ. ವಿಶೇಷವಾಗಿ ತಾಳೂರು, ತೋರಣಗಲ್ಲು, ದರೋಜಿ ಸೇರಿ ನಾನಾ ಕಡೆ ತಲಾ 10 ಕ್ಕೂ ಹೆಚ್ಚು ಕೊಠಡಿಗಳ ಕೊರತೆ ಕಾಡುತ್ತಿದ್ದು, ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಬಹುಪಾಲು ಶಾಲೆಗಳು ಸುಣ್ಣ ಬಣ್ಣ ಕಾಣದೇ ಅಂದಗೇಡಿಯಾಗಿವೆ.
ಕೈಹಿಡಿಯದ ಜಿಲ್ಲಾ ಖನಿಜ ನಿಧಿ: ಜಿಲ್ಲಾ ಖನಿಜ ನಿಧಿಯಡಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಅನುದಾನ ಈವರೆಗೆ ಲಭ್ಯವಾಗಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 45 ಶಾಲೆಗಳ ಕಾಂಪೌಂಡ್ ಗೋಡೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ 24 ಶಾಲೆಗಳಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕಿದೆ. 21 ಶಾಲೆಗಳ ಶೌಚಾಲಯಗಳು ಪೂರ್ಣ ಪ್ರಮಾಣದ ದುರಸ್ತಿಯಾಗಬೇಕಿದೆ. ಇನ್ನು ತಾಳೂರು, ಕೃಷ್ಣಾನಗರ, ಚೋರನೂರು, ಬಂಡ್ರಿ, ನಿಡಗುರ್ತಿ ಸೇರಿ ಹಲವೆಡೆ ಶೌಚಾಲಯಗಳು ಗಬ್ಬೆದ್ದು ಹೋಗಿದ್ದು ಶಿಕ್ಷ ಕರು, ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲಿಗೆ ತೆರಳಬೇಕಿದೆ. ಬಯಲಿಗೆ ತೆರಳಬೇಕೆಂಬ ನಾಚಿಕೆಯಿಂದ ವಿದ್ಯಾರ್ಥಿನಿಯರು ಸಾಕಷ್ಟು ನೀರು ಸೇವಿಸದೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೌಚಾಲಯ ಸ್ವಚ್ಛಗೊಳಿಸುವವರಿಲ್ಲದಿರುವುದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಮೇಲಾಗಿ ಸಾಕಷ್ಟು ಕುಡಿವ ನೀರಿಲ್ಲದೇ ಸೊರಗಿದ ಶಾಲೆಗಳಲ್ಲಿ ಶೌಚಕ್ಕಾಗಿ ಕೊಡಗಟ್ಟಲೆ ನೀರು ಹೊಂದಿಸಲು ಸಾಧ್ಯವಿಲ್ಲ ಎಂದು ಕೆಲ ಶಾಲೆಗಳ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.
ಲಭ್ಯವಾಗದ ಅನುದಾನ: ಶಾಲೆಗಳ ಶೌಚಾಲಯ, ಕೊಠಡಿ ನಿರ್ವಹಣೆಗೆ, ರಾಷ್ಟ್ರೀಯ ಹಬ್ಬ, ಮಹಾತ್ಮರ ದಿನಾಚರಣೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು, ಗಣಿತ, ವಿಜ್ಞಾನ ಮೇಳ ಸೇರಿ ಎಲ್ಲ ಕಾರ್ಯಕ್ರಮಗಳಿಗೆ 1 ರಿಂದ 15 ವಿದ್ಯಾರ್ಥಿಗಳಿರುವ ಶಾಲೆಗೆ ವಾರ್ಷಿಕ 12,500 ರೂ., 16 ರಿಂದ 100 ವಿದ್ಯಾರ್ಥಿಗಳಿರುವ ಶಾಲೆಗೆ 25 ಸಾವಿರ ರೂ., 101 ರಿಂದ 250 ವಿದ್ಯಾರ್ಥಿಗಳಿರುವ ಶಾಲೆಗೆ 50 ಸಾವಿರ ರೂ., 251 ರಿಂದ 1 ಸಾವಿರ ವಿದ್ಯಾರ್ಥಿಗಳಿರುವ ಶಾಲೆಗೆ 75 ಸಾವಿರ ರೂ., ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗೆ ಒಂದು ಲಕ್ಷ ರೂ.ಅನುದಾನ ನೀಡಲಾಗುತ್ತಿದೆಯಾದರೂ ಅರ್ಧ ಶೈಕ್ಷ ಣಿಕ ವರ್ಷ ಪೂರ್ಣಗೊಂಡರೂ ಈವರೆಗೆ ಅನುದಾನ ಲಭ್ಯವಾಗಿಲ್ಲ. ಪರಿಣಾಮ ಶಿಕ್ಷ ಕರು ಪೋಷಕರಿಂದ, ದಾನಿಗಳಿಂದ ದೇಣಿಗೆ ಸಂಗ್ರಹಣೆ ಮಾಡಲು ಪಾಠ ಮಾಡುವ ಕೆಲಸ ಬಿಟ್ಟು ಊರು ಸುತ್ತುವಂತಾಗಿದೆ.
ವರ್ಷದ ಕೊನೆಗೆ ಕಾಸು: ಉಳಿದಂತೆ ಶಿಕ್ಷ ಕರೊಬ್ಬರಿಗೆ ಚಾಕ್ಪೀಸ್, ಡಸ್ಟರ್ ಸೇರಿ ನಾನಾ ಪರಿಕರ ವೆಚ್ಚವಾಗಿ ವಾರ್ಷಿಕ 600 ರೂ. ನೀಡಲಾಗುತ್ತದೆ. ವರ್ಷದ ಕೊನೆಗೆ ಅನುದಾನ ಸಿಗುವುದರಿಂದ ಸಾಲ ಮಾಡಿ ಪರಿಕರ ಖರೀದಿಸುವುದು ಅನಿವಾರ್ಯವಾಗಿದೆ. ಶಾಲೆಗಳಲ್ಲಿ ಡಿ ದರ್ಜೆಯ ನೌಕರರಿಲ್ಲದಿರುವುದರಿಂದ ಕಸ ಗುಡಿಸುವುದು ಸೇರಿ ಶಾಲೆಯ ಆವರಣವನ್ನು ಸ್ವಚ್ಛ ಪಡಿಸುವವರು ದಿಕ್ಕಿಲ್ಲದಂತಾಗಿದೆ. ಶ್ರಮದಾನದ ಹೆಸರಿನಲ್ಲಿ ವಿದ್ಯಾಥಿಗಳಿಂದ ಕಸ ಗುಡಿಸಲಾಗುತ್ತದೆ. ಕೆಲವೆಡೆ ವಿದ್ಯಾರ್ಥಿಗಳಿಂದ ಕಸ ಗುಡಿಸುವುದನ್ನು ಕಂಡು ಪೋಷಕರು ಶಿಕ್ಷ ಕರ ಜತೆ ಜಗಳ ಕಾದ ಘಟನೆಗಳು ಸಾಕಷ್ಟಿವೆ. ಪ್ರತಿ ಶಾಲೆಗೆ ಒಬ್ಬ ಡಿ ದರ್ಜೆ ನೌಕರರನ್ನು ಸರಕಾರ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಶಿಕ್ಷ ಕರು, ಪೋಷಕರು ಆಗ್ರಹಿಸುತ್ತಾರೆ.
...................
ಶಾಲೆಗಳಿಗೆ ಯಾವ ಅನುದಾನವನ್ನೂ ಸರಕಾರ ನೀಡುತ್ತಿಲ್ಲ. ರಾಷ್ಟ್ರೀಯ ಹಬ್ಬ ಹರಿ ದಿನಗಳಲ್ಲಿ ಸ್ವಂತ ಹಣ ಖರ್ಚು ಮಾಡುತ್ತೇವೆ. 10 ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ. ಕಳೆದ 3-4 ವರ್ಷದಿಂದ ಕೊಠಡಿ ನಿರ್ಮಾಣ ಮಾಡಲು ಡಿಸಿ, ಶಾಸಕರಿಗೆ ಮನವಿ ಮಾಡಿದರೂ ಅನುದಾನ ಸಿಕ್ಕಿಲ್ಲ. ವಿದ್ಯಾರ್ಥಿಗಳು ಅಪಾಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶೌಚಾಲಯಗಳ ಬಾಗಿಲು ಕಿತ್ತು ಬಂದಿದ್ದು, ದುರಸ್ತಿ ಮಾಡಿಸಲು ಅನುದಾನವಿಲ್ಲ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಿ ಎಂದು ಗ್ರಾ.ಪಂ.ನವರನ್ನು ಕೇಳಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
- ರಾಮಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ , ತಾಳೂರು.
.................
ನಮ್ಮೂರ ಶಾಲೆಯ 8-10 ಕೊಠಡಿಗಳ ಚಾವಣಿ ಶಿಥಿಲಗೊಂಡು ಕುಸಿವ ಹಂತದಲ್ಲಿವೆ. ಮಳೆಗಾಲದಲ್ಲಿ ಸೋರುವ ಕೊಠಡಿಗಳಲ್ಲಿ ತಲಾ 150-200 ವಿದ್ಯಾರ್ಥಿಗಳು ಅಪಾಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಳೆ ಬಂದಾಗ ಶಾಲೆ ಮೈದಾನ ಕೆಸರುಗದ್ದೆಯಂತಾಗುತ್ತದೆ. ನರೇಗಾ ಅಡಿ ಶಾಲೆ ಮೈದಾನ ಅಭಿವೃದ್ಧಿ ಮಾಡಲು ಅವಕಾಶವಿದ್ದರೂ ಕುರಿತು ಗ್ರಾ.ಪಂ.ಗೆ ಕಾಳಜಿಯಿಲ್ಲ.
- ಕಾಲೂಬಾ, ಪೋಷಕ, ತಾಳೂರು.
...................
ಸರ್ವ ಶಿಕ್ಷ ಣ ಅಭಿಯಾನ ಯೋಜನೆ ಸ್ಥಗಿತಗೊಂಡ ನಂತರ ಸಮಗ್ರ ಶಿಕ್ಷ ಣ ಅಭಿಯಾನ ಯೋಜನೆಯಡಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಅನುದಾನ ನೀಡುವುದಾಗಿ ಸರಕಾರ ತಿಳಿಸಿದೆ. ಮುಂದಿನ ವಾರದಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ. ಶಿಕ್ಷ ಕರಿಗೆ ಪರಿಕರ ವೆಚ್ಚವಾಗಿ ವಾರ್ಷಿಕ ತಲಾ 600 ರೂ. ಸರಕಾರ ನೀಡುತ್ತದೆ.