ಆ್ಯಪ್ನಗರ

ಮದುಮಗನ ಸೋಗಿನಲ್ಲಿ ಬಂದ ಜವರಾಯ: ದರೋಡೆಕೋರರಿಂದ ಮಹಿಳೆ ಕೊಲೆ!

ಏಕಾಏಕಿ ದಾಳಿ ಮಾಡಿದ 6 ಜನ ಖದೀಮರ ತಂಡ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ನುಗ್ಗಿ ಬಾಗಿಲು, ಕಿಟಕಿಗಳನ್ನು ಮುಚ್ಚಿ ಮಹಿಳೆಯರ ಕೈ-ಕಾಲುಗಳನ್ನು ಕಟ್ಟಿ ಹಣಕ್ಕಾಗಿ ಮನೆಯ ತುಂಬೆಲ್ಲಾ ತಡಕಾಡಿದ್ದಾರೆ.

Vijaya Karnataka Web 22 Oct 2021, 11:57 pm
ವಿಜಯನಗರ (ಹೊಸಪೇಟೆ): ಮದುಮಗನಿಗೆ ಮದುವೆಯ ಬಟ್ಟೆ ಖರೀದಿ ಸೋಗಿನಲ್ಲಿ ಬಂದ ದರೋಡೆಕೋರು ನಗರದ ಮನೆಯೊಂದರ ಮೇಲೆ ದಾಳಿ ಮಾಡಿ ಮಹಿಳೆಯೊಬ್ಬರನ್ನು ಕೊಲೆಗೈದಿರುವ ಭೀಕರ ಘಟನೆ ಶುಕ್ರವಾರ ಸಂಜೆ ನಡೆದಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಹೊಸಪೇಟೆ ನಗರದ ಹೃದಯಭಾಗ ರಾಣಿಪೇಟೆಯ ನಿವಾಸದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಸಹೋದರಿಯರಿಬ್ಬರ ಪೈಕಿ ಭುವನೇಶ್ವರಿ (68) ಮಾರಣಾಂತಿಕ ಹಲ್ಲೆಗೆ ಬಲಿಯಾದವರು. ಶಿವಭೂಷಣ (ಶಿವಕ್ಕ) ಗಾಯಗೊಂಡಿದ್ದಾರೆ. ದಾಳಿಯಲ್ಲಿ ಖದೀಮರು ಮಹಿಳೆಯರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಏಕಾಏಕಿ ದಾಳಿ ಮಾಡಿದ 6 ಜನ ಖದೀಮರ ತಂಡ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ನುಗ್ಗಿ ಬಾಗಿಲು, ಕಿಟಕಿಗಳನ್ನು ಮುಚ್ಚಿ ಮಹಿಳೆಯರ ಕೈ-ಕಾಲುಗಳನ್ನು ಕಟ್ಟಿ ಹಣಕ್ಕಾಗಿ ಮನೆಯ ತುಂಬೆಲ್ಲಾ ತಡಕಾಡಿದ್ದಾರೆ. ಬಳಿಕ ಕೂಗಾಡಿದ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ವಾರಣಾಸಿಯ 'ಗಂಗಾರತಿ' ಮಾದರಿಯಲ್ಲಿ 'ತುಂಗಭದ್ರಾ ಆರತಿ'ಯತ್ತ ಮತ್ತೆ ಒಲವು..?

ಇದೇ ವೇಳೆ ಮಹಿಳೆಯೊಬ್ಬರು ಎಚ್ಚರ ತಪ್ಪಿದ್ದರಿಂದ ಆತಂಕಗೊಂಡ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗಾಯಗೊಂಡ ಮಹಿಳೆ ಶಿವಕ್ಕ ನೆರೆಯವರನ್ನು ಕರದುಕೊಂಡು ಬಂದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಖದೀಮರು ಎರಡು ದಿನ ಮುಂಚೆಯೇ ಮದುವೆ ಬಟ್ಟೆ ಖರೀದಿಸುವ ಸೋಗಿನಲ್ಲಿ ಮನೆಗೆ ಭೇಟಿ ನೀಡಿ ರಾಣಿಪೇಟೆ ನಿವಾಸದಲ್ಲಿ ಮಹಿಳೆಯರು ಇಬ್ಬರೇ ಇರುವುದನ್ನು ಖಚಿತಪಡಿಸಿಕೊಂಡಿರುವ ಕುರಿತು ಸ್ಥಳಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಂಚೆಯೇ ಭೇಟಿ ನೀಡಿ ಮದುಮಗನನ್ನು ಕರೆದುಕೊಂಡು ಬಟ್ಟೆ ಖರೀದಿಗೆ ಬರುವುದಾಗಿ ಹೇಳಿ ಹೋಗಿದ್ದವರು, ಅದರಂತೆಯೇ ಶುಕ್ರವಾರ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಮುಂದಿನ ಬಾಗಿಲ ಮೂಲಕ ಮನೆ ಪ್ರವೇಶಿಸಿ ದರೋಡೆ ಮಾಡಿ ಹಿಂದಿನ ಬಾಗಿಲ ಮೂಲಕ ಪರಾರಿಯಾಗಿದ್ದಾರೆ.
ಹೊಸ ಜಿಲ್ಲೆ ವಿಜಯನಗರದಲ್ಲಿ ಕಲುಷಿತ ನೀರಿಗೆ 6ನೇ ಬಲಿ: ಜೀವಕ್ಕೆ ಕಂಟಕವಾದ ಜಲಜೀವನ್‌ ಮಿಷನ್‌..?

ಸ್ಥಳಕ್ಕೆ ಎಸ್ಪಿ ಡಾ.ಕೆ.ಅರುಣ್, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಎಸ್ಪಿ ಡಾ.ಕೆ. ಅರುಣ್ ಅವರು, ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪರಿಣಾಮ ಭುವನೇಶ್ವರಿ ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಘಟನೆ ಕುರಿತು ಕೂಲಕುಂಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. 6 ಜನ ಬಂದು ದಾಳಿ ಮಾಡಿರುವ ಶಂಕೆ ಇದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ