ಆ್ಯಪ್ನಗರ

‘ಸಿಎಂ ಆಣತಿಯಂತೆ ಅಧಿಕಾರಿಗಳ ಕೆಲಸ’: ಎಚ್‌ಡಿಕೆ ಟೀಕೆ

ಬೇಸಿಗೆ ವೇಳೆ ತೀವ್ರಗೊಂಡ ಕುಡಿವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಕೆ.ವಿ.ರತ್ನಪ್ರಭಾ ಸೇರಿ ಹಲವು ಐಎಎಸ್‌ ಅಧಿಕಾರಿಗಳು, ಸಿಎಂ ಸಿದ್ದರಾಮಯ್ಯ ಅವರು ಹೇಳುವ ಕಡೆ ಹೆಬ್ಬೆಟ್ಟು ಒತ್ತುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

Vijaya Karnataka Web 13 Apr 2018, 5:00 am
ಬಳ್ಳಾರಿ : ಬೇಸಿಗೆ ವೇಳೆ ತೀವ್ರಗೊಂಡ ಕುಡಿವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಕೆ.ವಿ.ರತ್ನಪ್ರಭಾ ಸೇರಿ ಹಲವು ಐಎಎಸ್‌ ಅಧಿಕಾರಿಗಳು, ಸಿಎಂ ಸಿದ್ದರಾಮಯ್ಯ ಅವರು ಹೇಳುವ ಕಡೆ ಹೆಬ್ಬೆಟ್ಟು ಒತ್ತುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.
Vijaya Karnataka Web work on officers as cms hdk criticism
‘ಸಿಎಂ ಆಣತಿಯಂತೆ ಅಧಿಕಾರಿಗಳ ಕೆಲಸ’: ಎಚ್‌ಡಿಕೆ ಟೀಕೆ


ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರಕಾರದ ಮುಖ್ಯ ಕಾರ್ಯದರ್ಶಿಯವರ ಅಧಿಕಾರಾವಧಿ ಮುಕ್ತಾಯವಾಗಿದ್ದರೂ ಆರು ತಿಂಗಳು ಸೇವೆಯನ್ನು ಸರಕಾರ ಮುಂದುವರಿಸಿದೆ. ಅಧಿಕಾರಿಗಳೆಲ್ಲರೂ ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಋುಣ ತೀರಿಸುತ್ತಿದ್ದಾರೆ. ನೀತಿ ಸಂಹಿತೆ ನೆಪದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಗಳ ಸಭೆ ನಡೆಸಿಲ್ಲ. ಚುನಾವಣೆ ಕರ್ತವ್ಯದಷ್ಟೇ ರಾಜ್ಯದ ಜನರ ಸೌಖ್ಯ ಕಾಪಾಡುವುದೂ ತಮ್ಮ ಕರ್ತವ್ಯ ಎಂದು ಅಧಿಕಾರಿಗಳು ಅರಿಯಬೇಕು'' ಎಂದು ಸಲಹೆ ನೀಡಿದರು.

''ಕೊಪ್ಪಳ, ಬಳ್ಳಾರಿ, ರಾಯಚೂರಿನಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ವಿಜಯಪುರದಲ್ಲಿ ಕಬ್ಬು ಬೆಳೆ ನಷ್ಟವಾಗಿದೆ. ಇಂತಹ ಕಷ್ಟಗಳಿಗೆ ಸರಕಾರದ ಮುಖ್ಯಕಾರ್ಯದರ್ಶಿಗಳೇ ಸ್ಪಂದಿಸಬೇಕು. ಈ ಕುರಿತು ಅವರಿಗೆ ಪತ್ರ ಬರೆಯುವೆ'' ಎಂದ ಅವರು, ''ಗೆಲ್ಲುವ ಅಭ್ಯರ್ಥಿಗಳನ್ನು ನೋಡಿಕೊಂಡು ಟಿಕೆಟ್‌ ನೀಡಲಾಗುತ್ತಿದೆ. ಹಣ ಕೊಟ್ಟವರಿಗೆ ಜೆಡಿಎಸ್‌ನಲ್ಲಿ ಟಿಕೆಟ್‌ ನೀಡುತ್ತಾರೆ ಎನ್ನುವ ಜಿಲ್ಲಾ ಜೆಡಿಎಸ್‌ ಮಾಜಿ ಅಧ್ಯಕ್ಷ ಕುಡತಿನಿ ಶ್ರೀನಿವಾಸ ಅವರ ಹೇಳಿಕೆ ಶುದ್ಧ ಸುಳ್ಳು. ಪ್ರಚಾರಕ್ಕಾಗಿ ಈ ರೀತಿ ಲೂಸ್‌ ಟಾಕ್‌ ಸರಿಯಲ್ಲ. ಅವರ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ'' ಎಂದು ಹೇಳಿದರು.

ಹೈಜಾಕ್‌ನಿಂದ ಪಟ್ಟಿ ವಿಳಂಬ: ''ಕಾಂಗ್ರೆಸ್‌, ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಟಿಕೆಟ್‌ ಘೋಷಣೆಗೂ ಮುನ್ನ ಜೆಡಿಎಸ್‌ ಅಭ್ಯರ್ಥಿಗಳನ್ನು ಪ್ರಕಟಿಸಿದರೆ, ಆ ಪಕ್ಷದವರು ಹೈಜಾಕ್‌ ಮಾಡುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ಪಟ್ಟಿ ಇನ್ನೂ ಬಿಡುಗಡೆ ಮಾಡಿಲ್ಲ. ಬಳ್ಳಾರಿಯ ಮಣ್ಣನ್ನು ಲೂಟಿ ಮಾಡಿದವರಿಗೆ ಟಿಕೆಟ್‌ ನೀಡಲಾಗುತ್ತಿದೆ. ಅಂತಹವರನ್ನೇ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್‌ ಹಾಗೂ ಬಿಜೆಪಿಯವರಿಗೆ ಯಾವ ನೈತಿಕತೆ ಇದೆ?'' ಎಂದು ಪ್ರಶ್ನಿಸಿದರು.

*ಪ್ರಚಾರಕ್ಕಾಗಿ ಮೋದಿ ಉಪವಾಸ

''ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರು ಕೇವಲ ಪ್ರಚಾರ ಪಡೆಯಲು ಉಪವಾಸ ನಡೆಸಿದ್ದಾರೆ. ಆಡಳಿತ ಪಕ್ಷದಲ್ಲಿ ಇರುವವರು ಆಡಳಿತ ನಡೆಸಬೇಕು. ಆದರೆ, ಅವರೇ ಹೋರಾಟಕ್ಕೆ ಇಳಿದರೆ ಸಂವಿಧಾನಕ್ಕೆ ನೀಡುವ ಗೌರವ ಎಂಥದ್ದು ಎಂದು ಗೊತ್ತಾಗುತ್ತದೆ'' ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ