ಆ್ಯಪ್ನಗರ

ವಿಶ್ವ ಪರಿಸರ ದಿನಾಚರಣೆ

ಸಮೀಪದ ಮೆಟ್ರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ, ಶಾಸಕ ಜೆಎನ್‌ಗಣೇಶ್‌ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು...

Vijaya Karnataka 6 Jun 2019, 5:00 am
ಕಂಪ್ಲಿ : ಸಮೀಪದ ಮೆಟ್ರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ, ಶಾಸಕ ಜೆ.ಎನ್‌.ಗಣೇಶ್‌ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು.
Vijaya Karnataka Web world environment day
ವಿಶ್ವ ಪರಿಸರ ದಿನಾಚರಣೆ


ಇದಕ್ಕೂ ಮೊದಲು ಗ್ರಾ.ಪಂ.ಸಭಾಂಗಣವನ್ನು ಉದ್ಘಾಟಿಸಿದರು. ಬಳಿಕ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಮ್ಮ 40ನೇ ಜನ್ಮದಿನ ನಿಮಿತ್ತ ಕೇಕ್‌ ಕತ್ತರಿಸಿ, ಮೃದ್ಧ ಮಹಿಳೆಗೆ ತಿನ್ನಿಸಿದರು. ಬಳಿಕ ಮಾತನಾಡಿ, ಮಳೆ ಕೊರತೆ ಹಿನ್ನೆಲೆಯಲ್ಲಿ ನನ್ನ ಜನ್ಮದಿನ ಆಚರಿಸಿಕೊಳ್ಳಲು ಬಯಸುವುದಿಲ್ಲ. ಇಂದು ಸಸಿಗಳನ್ನು ನೆಟ್ಟು ಜನ್ಮದಿನ ಆಚರಿಸಲಾಗುತ್ತದೆ. ಪರಿಸರ ಸಂರಕ್ಷ ಣೆಗೆ ಎಲ್ಲರೂ ಸಹಕರಿಸಬೇಕು. ಕಾಡು ಬೆಳೆದರೆ ಮಳೆ, ಬೆಳೆ ಬರುತ್ತದೆ. ಪ್ರತಿಯೊಬ್ಬರೂ ಮನೆಗೊಂದು ಸಸಿ ನೆಟ್ಟು, ಮರ, ಗಿಡಗಳನ್ನು ಬೆಳೆಸಬೇಕು. ಇದರಿಂದ ಪರಿಸರ ಶುದ್ಧವಾಗಿರುತ್ತದೆ. ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಕಂಪ್ಲಿ ಹೋಬಳಿಯಲ್ಲಿ 7000 ಸಸಿ, ಕುರುಗೋಡು ಹೋಬಳಿಯಲ್ಲಿ 3000 ಸಸಿಗಳನ್ನು ವಿತರಿಸಲಾಗುವುದು ಎಂದರು. ಇದೇ ವೇಳೆ ಗ್ರಾ.ಪಂ.ಅಧ್ಯಕ್ಷೆ ಬಾರಿಕೇರ ಹುಲಿಗೆಮ್ಮ ಕೊಡಮಾಡಿದ ಸೀರೆಗಳನ್ನು ಮಹಿಳೆಯರಿಗೆ ವಿತರಿಸಿದರು. ದೇವಸಮುದ್ರ ಜಿ.ಪಂ.ಅಧ್ಯಕ್ಷ ಕೆ.ಶ್ರೀನಿವಾಸರಾವ್‌, ಕಂಪ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಟಿಗಿ ಬಸವರಾಜಗೌಡ, ಗ್ರಾ.ಪಂ. ಉಪಾಧ್ಯಕ್ಷ ರಾಮಸ್ವಾಮಿ, ಸದಸ್ಯರು, ನರೇಗಾ ಎಡಿ ಶ್ರೀಕುಮಾರ್‌, ಪಿಡಿಒಗಳಾದ ಶ್ರೀಶೈಲಗೌಡ, ವಾಸುಕಿ, ದರೋಜಿ ಕರಡಿ ಧಾಮದ ಆರ್‌ಎಫ್‌ಒ ಬಿ.ವಿನೋದ್‌ ಕುಮಾರ್‌, ಡಿವೈಆರ್‌ಎಫ್‌ಒ ಎಸ್‌.ದೇವರಾಜ, ಆರ್‌.ಎಚ್‌.ರಾಘವೇಂದ್ರಯ್ಯ, ಸಿ.ಮೇಘನಾ, ಕೆಂಚಪ್ಪ, ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ತಿಪ್ಪಾರೆಡ್ಡಿ ಇದ್ದರು. ಇದಕ್ಕೂ ಮೊದಲು ದೇವಲಾಪುರ ಗ್ರಾ.ಪಂ.ಆವರಣದಲ್ಲಿ, ಪ್ರಭು ಕ್ಯಾಂಪ್‌ ಹಾಗೂ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶಾಸಕರು ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದರು.

---

ಪೊ.ಶೀ.5ಕೆಎಂಪಿ2;- ಕಂಪ್ಲಿ ಸಮೀಪದ ಮೆಟ್ರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶಾಸಕ ಜೆ.ಎನ್‌.ಗಣೇಶ್‌ ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಬುಧವಾರ ಆಚರಿಸಿದರು.

ಪೊ.ಶೀ.5ಕೆಎಂಪಿ2ಎ;- ಕಂಪ್ಲಿ ಸಮೀಪದ ಮೆಟ್ರಿಯಲ್ಲಿ ಶಾಸಕ ಜೆ.ಎನ್‌.ಗಣೇಶ್‌ ಜನ್ಮದಿನ ನಿಮಿತ್ತ ಮಹಿಳೆಯರಿಗೆ ಬಟ್ಟೆ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ