ಆ್ಯಪ್ನಗರ

ಸತ್ಯಾತ್ಮತೀರ್ತರಿಂದ ಹಂಪಿಯಲ್ಲಿ ಪೂಜೆ

ದಕ್ಷಿಣಾಯನ ಪುಣ್ಯಕಾಲ ಆರಂಭ ಹಿನ್ನೆಲೆಯಲ್ಲಿ ಉತ್ತರಾಧಿ ಮಠದ ಮಠಾಧೀಶರಾದ ಸತ್ಯಾತ್ಮತೀರ್ಥರು ಹಂಪಿಯಲ್ಲಿ ವಿಶೇಷ ಪೂಜೆ ಮಂಗಳವಾರ ಸಲ್ಲಿಸಿದರು.

Vijaya Karnataka 18 Jul 2018, 5:00 am
ಹೊಸಪೇಟೆ : ದಕ್ಷಿಣಾಯನ ಪುಣ್ಯಕಾಲ ಆರಂಭ ಹಿನ್ನೆಲೆಯಲ್ಲಿ ಉತ್ತರಾಧಿ ಮಠದ ಮಠಾಧೀಶರಾದ ಸತ್ಯಾತ್ಮತೀರ್ಥರು ಹಂಪಿಯಲ್ಲಿ ವಿಶೇಷ ಪೂಜೆ ಮಂಗಳವಾರ ಸಲ್ಲಿಸಿದರು.
Vijaya Karnataka Web BLR-17HPT-05


ಆರಂಭದಲ್ಲಿ ದೇವಸ್ಥಾನ ಬಳಿ ಆಗಮಿಸುತ್ತಿದ್ದ ಸ್ವಾಮೀಜಿಯನ್ನು ಆನೆ ಲಕ್ಷ್ಮೀ ಹೂವಿನ ಮಾಲೆ ಹಾಕಿ ಸ್ವಾಗತಿಸಲಾಯಿತು. ಬಳಿಕ ಸ್ವಾಮೀಜಿ ವಿರೂಪಾಕ್ಷೇಶರ ದೇವಸ್ಥಾನ ಎಡಭಾಗದಲ್ಲಿರುವ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ವಿರೂಪಾಕ್ಷೇಶ್ವರ, ಪಂಪಾ ದೇವಿ, ಭುವನೇಶ್ವರಿ, ಗುಲಗಂಜಿ ಮಾಧವ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಜನತಾ ಕಾಲೊನಿಯ ಸತೀಶ್‌ ಆಚಾರ್‌ ನಿವಾಸದಲ್ಲಿ ಪವಮಾನ ಹೋಮ ಹಾಗೂ ರಾಮದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಚಕ್ರತೀರ್ಥ ಕೋದಂಡರಾಮ ಸ್ವಾಮಿಯ ದರ್ಶನ ಪಡೆದುಕೊಂಡು, ಯಂತ್ರೋದ್ಧಾರಕ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪುರೋಹಿತ ಮೋಹನ ಚಿಕ್ಕಭಟ್‌ ಜೋಷಿ, ಸತೀಶ್‌ ಆಚಾರ್ಯ, ಅರ್ಚಕರಾದ ಶಿವಭಟ್‌ ಜೋಷಿ, ಮಂಜುನಾಥ ಜೋಷಿ, ಮುರಳೀಧರ ಶಾಸ್ತ್ರಿ, ಧಾರ್ಮಿಕ ದತ್ತಿ ಇಲಾಖೆಯ ಬಿ.ಜಿ.ಶ್ರೀನಿವಾಸ, ಹಂಪಿ ಪೊಲೀಸ್‌ ಠಾಣೆಯ ಪ್ರಭಾರ ಪಿ.ಎಸ್‌.ಐ.ಯು.ಬಸವರಾಜ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ