ಆ್ಯಪ್ನಗರ

ಯೋಗ ದಿನಾಚರಣೆ: ಪೂರ್ವಭಾವಿ ಸಭೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿ.ಪಂ ಸಿಇಒ ಕೆ.ನಿತೀಶ್‌ ಅಧ್ಯಕ್ಷ ತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.

Vijaya Karnataka 19 Jun 2019, 5:00 am
ಬಳ್ಳಾರಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿ.ಪಂ ಸಿಇಒ ಕೆ.ನಿತೀಶ್‌ ಅಧ್ಯಕ್ಷ ತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
Vijaya Karnataka Web yoga day preliminary meeting
ಯೋಗ ದಿನಾಚರಣೆ: ಪೂರ್ವಭಾವಿ ಸಭೆ


ನಗರದಲ್ಲಿ ಜೂ.21ರಂದು ಬೆಳಗ್ಗೆ 6.30ಕ್ಕೆ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಗರದ ನಾನಾ ಶಾಲಾ-ಕಾಲೇಜುಗಳಿಂದ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಗ ದಿನಾಚರಣೆ ಮತ್ತು ಯೋಗ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗದ ಅಭ್ಯಾಸ ನಂತರ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಲಘುಪಾನೀಯ ವಿತರಣೆ ನಡೆಯಲಿದೆ ಎಂದರು.

ಯೋಗದ ಮಹತ್ವ ಹಾಗೂ ಸಂದೇಶ ಸಾರುವ ಯೋಗ ಜಾಥಾವು ನಗರದ ಮುನ್ಸಿಪಲ್‌ ಮೈದಾನದಿಂದ ಆರಂಭವಾಗಿ ರಾಯಲ್‌ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ ಎಂದು ಜಿಪಂ ಸಿಇಒ ವಿವರಿಸಿದರು.

ನಾನಾ ಯುವ ಸಂಘಟನೆಗಳ ಯೋಗಾಸಕ್ತ ಸದಸ್ಯರು, ಯೋಗಜಾಥಾದಲ್ಲಿ ಸಕ್ರಿಯವಾಗಿರುವ ಯುವ ಸಂಘಟನೆಗಳು ಮತ್ತು ಯೋಗಾಸಕ್ತ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಯುವಜನ ಸೇವಾ ಹಾಗೂ ಕ್ರಿಡಾ ಇಲಾಖೆ ಮತ್ತು ನೆಹರೂ ಯುವ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸರಕಾರಿ ನೌಕರರು ಈ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ವಚ್ಛತೆ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ತುರ್ತು ಸೇವಾ ಚಿಕಿತ್ಸೆಗೆ ತುರ್ತು ವಾಹನವನ್ನು ನಿಯೋಜಿಸಿ ಒಬ್ಬರು ವೈದ್ಯಾಧಿಕಾರಿಗಳನ್ನು ನಿಯೋಜಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿ ವಂದನಾ ಗಾಳಿ, ಪಾಲಿಕೆಯ ಆಯುಕ್ತೆ ತುಷಾರಮಣಿ, ಡಿಡಿಪಿಐ ಶ್ರೀಧರನ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ