ಆ್ಯಪ್ನಗರ

Voting Awareness: ‘ಯುವಕರಿಗೆ ಮತದಾನದ ಅರಿವು ಅಗತ್ಯ’

ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಯುವಕರ ಪಾತ್ರ ಮಹತ್ವವಾಗಿದೆ. ಆದ್ದರಿಂದ ಇಂದಿನ ಯುವಪೀಳಿಗೆ ಕಡ್ಡಾಯವಾಗಿ ಮತದಾನ ಮಾಡುವ ಅಗತ್ಯವಿದೆ ಎಂದು ತಹಸೀಲ್ದಾರ್‌ ಕೆ.ರಾಘವೇಂದ್ರರಾವ್‌ ಹೇಳಿದರು.

Vijaya Karnataka 5 Dec 2022, 10:45 pm
ಹೂವಿನಹಡಗಲಿ : ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಯುವಕರ ಪಾತ್ರ ಮಹತ್ವವಾಗಿದೆ. ಆದ್ದರಿಂದ ಇಂದಿನ ಯುವಪೀಳಿಗೆ ಕಡ್ಡಾಯವಾಗಿ ಮತದಾನ ಮಾಡುವ ಅಗತ್ಯವಿದೆ ಎಂದು ತಹಸೀಲ್ದಾರ್‌ ಕೆ.ರಾಘವೇಂದ್ರರಾವ್‌ ಹೇಳಿದರು.
Vijaya Karnataka Web BLR-BLY19HDLP1


ಜಿಬಿಆರ್‌ ಕಾಲೇಜಿನಲ್ಲಿ ಚುನಾವಣಾ ಸಾಕ್ಷ ರತಾ ಕ್ಲಬ್‌ ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು. ಯುವಕರು ಯಾವುದೇ ಆಸೆ,ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕತೆಯಿಂದ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ, ಬೋಧಕ ಸಿಬ್ಬಂದಿ ಚುನಾವಣಾ ಸಾಕ್ಷ ರತಾ ಕ್ಲಬ್‌ ಸ್ಥಾಪನೆ ಮಾಡಿರುವುದು ಸ್ತುತ್ಯಾರ್ಹ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್‌.ವರಕುಮಾರಗೌಡ, ದೇಶದ ಅಭಿವೃದ್ಧಿಗಾಗಿ ಯುವಕರು ಹಲವು ಹತ್ತು ಸವಾಲುಗಳನ್ನು ಎದುರಿಸಬೇಕಿದೆ. ಇದರಲ್ಲಿ ಮತದಾನವೂ ಒಂದಾಗಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕಿದೆ ಎಂದರು. ನಿವೃತ್ತ ಪ್ರಾಚಾರ್ಯ ಪ್ರೊ.ಟಿ.ಪರಮೇಶ್ವರಪ್ಪ, ಐಕ್ಯುಎಸಿ ಸಂಯೋಜಕ ಪ್ರೊ.ಎಸ್‌.ಎಸ್‌.ಪಾಟೀಲ್‌, ಚುನಾವಣಾ ಸಾಕ್ಷ ರತೆ ಕ್ಲಬ್‌ನ ಸಂಯೋಜಕ ಪ್ರೊ.ಬಿ.ಪ್ರಕಾಶ್‌ ಇದ್ದರು. ಉಪನ್ಯಾಸಕರಾದ ಪ್ರಕಾಶ್‌ ಗುರುವಿನ, ನಾಗವೇಣಿ, ವಿದ್ಯಾರ್ಥಿ ಹೀನಾ ಖವಾಸ್‌, ಸುಷ್ಮಾ ಜಿ.ಎನ್‌. ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ