ಆ್ಯಪ್ನಗರ

‘ಯುವ ಜನತೆಯಿಂದ ದೇಶದ ಶಕ್ತಿ ಬಲಿಷ್ಠ’

ಯುವ ಜನರಿಂದ ತುಂಬಿರುವ ಭಾರತ ದೇಶ ಮತ್ತಷ್ಟು ಬಲಿಷ್ಠವಾಗಬೇಕದಾರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆದು ದೇಶಕ್ಕಾಗಿ ಶ್ರಮಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.

Vijaya Karnataka 9 Sep 2018, 5:00 am
ಬಳ್ಳಾರಿ : ಯುವ ಜನರಿಂದ ತುಂಬಿರುವ ಭಾರತ ದೇಶ ಮತ್ತಷ್ಟು ಬಲಿಷ್ಠವಾಗಬೇಕದಾರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆದು ದೇಶಕ್ಕಾಗಿ ಶ್ರಮಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
Vijaya Karnataka Web BLR-8BLY01


ನಗರದ ಬಾಲಕಿಯರ ಸ.ಪ.ಪೂ.ಕಾಲೇಜಿನಲ್ಲಿ ಮೊದಲ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದರು. ಬಾಲಕಿಯರ ಕಾಲೇಜಿಗೆ ಶೀಘ್ರವೇ ಶುದ್ಧ ಕುಡಿವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ ಹಾಗೂ ಹೆಚ್ಚುವರಿ ಕೊಠಡಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಪ್ರಾಚಾರ್ಯ ಮಹಾಲಿಂಗನಗೌಡ ಮಾತನಾಡಿ, ಬಹುತೇಕ ಬಡ ಕುಟುಂಬದ ಮಕ್ಕಳೇ ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ.ಇವರಿಗೆ ಶಿಕ್ಷ ಣ ಮತ್ತು ಮೂಲ ಸೌಕರ್ಯಗಳಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಂಡು ಉತ್ತಮ ಭವಿಷ್ಯ ರೂಪಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಕಾಲೇಜಿನಿಂದ ವರ್ಗವಾದ ಉಪನ್ಯಾಸಕರಾದ ರೋಸ್‌ಲೀನ್‌ ಮೇರಿ, ಎಚ್‌.ಎಂ.ಜ್ಯೋತಿ, ಸರೋಜ ಕುಮ್ಮುರ್‌ ಅವರನ್ನು ಬೀಳ್ಕೋಡಲಾಗಿತು. ಪಾಲಿಕೆಯ ಸದಸ್ಯರಾದ ಮಾರ್ಕರ್‌ ಶ್ರೀನಿವಾಸ್‌, ಮಲ್ಲನಗೌಡ, ಮುಖಂಡರಾದ ಪಾಲಣ್ಣ, ವೀರಶೇಖರ ರೆಡ್ಡಿ, ಉಪನ್ಯಾಸಕರಾದ ಯು.ಶ್ರೀನಿವಾಸ್‌ಮೂರ್ತಿ, ಶಶಿಧರ, ಶ್ಯಾಮಣ್ಣ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ