Please enable javascript.ರೈಲುಗಳಲ್ಲಿ ದರೋಡೆ ಮಾಡುತ್ತಿದ್ದ ಚಾಲಾಕಿ ಕಳ್ಳರ ಕತೆ - ರೈಲುಗಳಲ್ಲಿ ದರೋಡೆ ಮಾಡುತ್ತಿದ್ದ ಚಾಲಾಕಿ ಕಳ್ಳರ ಕತೆ - Vijay Karnataka

ರೈಲುಗಳಲ್ಲಿ ದರೋಡೆ ಮಾಡುತ್ತಿದ್ದ ಚಾಲಾಕಿ ಕಳ್ಳರ ಕತೆ

ವಿಕ ಸುದ್ದಿಲೋಕ 12 May 2012, 9:56 pm
Subscribe

ರೈಲು ಬೋಗಿಗಳೇ ಮನೆ. ಒಂಟಿ ಮಹಿಳೆಯರೇ ಅವರ ಟಾರ್ಗೆಟ್. ಹಣ, ಚಿನ್ನಾಭರಣ ದೋಚಿ ಪ್ರವಾಸ ಮಾಡುವುದೇ ಅವರ ಶೋಕಿ.....!

ರೈಲುಗಳಲ್ಲಿ ದರೋಡೆ ಮಾಡುತ್ತಿದ್ದ ಚಾಲಾಕಿ ಕಳ್ಳರ ಕತೆ
ಬೆಂಗಳೂರು: ರೈಲು ಬೋಗಿಗಳೇ ಮನೆ. ಒಂಟಿ ಮಹಿಳೆಯರೇ ಅವರ ಟಾರ್ಗೆಟ್. ಹಣ, ಚಿನ್ನಾಭರಣ ದೋಚಿ ಪ್ರವಾಸ ಮಾಡುವುದೇ ಅವರ ಶೋಕಿ.....!

ಇದು, ಮಾತುಬಾರದ (ವಾಕ್ ವಿಕಲಚೇತನ ) ಚಾಲಾಕಿ ಕಳ್ಳರ ದಿನಚರಿ. ರೈಲುಗಳಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರ ಬಳಿ ಚಿನ್ನಾಭರಣ ದರೋಡೆ ಮಾಡುತ್ತಿದ್ದ ಆಂಧ್ರಪ್ರದೇಶ ಗುಂಟೂರು ಮೂಲದ ಉದಯ್(26) ಹಾಗೂ ಪಶ್ಚಿಮ ಬಂಗಾಳ, ಔರಾದನ ಗೋಪಾಲ(26) ಎಂಬುವರು ಸಿಟಿ ರೈಲ್ವೆ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ.

ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12 ಮೊಬೈಲ್‌ಫೋನ್, 14 ಸಾವಿರ ರೂ. ನಗದು, ನಾಲ್ಕು ಮಹಿಳೆಯರ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾತುಬಾರದ ಅವರು, ಅದನ್ನೇ ಬಂಡವಾಳವಾಗಿಸಿಕೊಂಡು ಪ್ರಯಾಣಿಕರ ಸಹಾನುಭೂತಿ ಪಡೆದು, ಕೂಲಿಗಳಂತೆ ನಟಿಸುತ್ತಿದ್ದರು.

ರಾತ್ರಿ ವೇಳೆ ಮತ್ತು ಬೆಳಗಿನಜಾವ ಹೊರಡುವ ರೈಲುಗಳ ಅಪ್ಪರ್ ಬರ್ತ್‌ನಲ್ಲಿ ಮಲಗುತ್ತಿದ್ದರು. ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಪ್ರಯಾಣಿಕರು ಹತ್ತಿದಾಗ ಒಂಟಿ ಮಹಿಳೆಯರನ್ನು ಗುರುತಿಸಿ ಹೊಂಚು ಹಾಕಿ ಅವರ ಬ್ಯಾಗ್, ಚಿನ್ನದಸರ, ಮೊಬೈಲ್‌ಗಳನ್ನು ಕಸಿದುಕೊಂಡು ಪಕ್ಕದ ಮತ್ತೊಂದು ರೈಲು ಹತ್ತಿ ಪರಾರಿಯಾಗುತ್ತಿದ್ದರು.

ಸಿಟಿ ರೈಲು ನಿಲ್ದಾಣದಲ್ಲಿ ಆಭರಣ ದರೋಡೆಯಾಗುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮೀರ್ ಆರೀಫ್ ಅಲಿ, ಇನ್ಸ್‌ಪೆಕ್ಟರ್ ಮಹ್ಮದ್ ಬಡಾನ್ ನೇತೃತ್ವದಲ್ಲಿ ಪಿಎಸ್‌ಐ ಎಲ್. ಸುಬ್ಬಣ್ಣ, ಸಿಬ್ಬಂದಿಗಳಾದ ಮಲ್ಲೇಶ್, ಹೊನ್ನಪ್ಪ, ಚಿಕ್ಕಹನುಮೇಗೌಡ, ಕೃಷ್ಣಮೂರ್ತಿ, ಪ್ರದೀಪ್, ಶಿವಸ್ವಾಮಿ, ಸಿದ್ದಪ್ಪ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸುತಿತ್ತು. ಪ್ಲಾಟ್‌ಫಾರಂ ನಂ.1 ರಲ್ಲಿ ಮಹಿಳೆಯ ಬ್ಯಾಗ್ ಕಸಿದುಕೊಂಡು ಪರಾರಿಯಾಗುತ್ತಿದ್ದ ವೇಳೆ ಬೆನ್ನಟ್ಟಿದ ತಂಡ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪ್ರವಾಸದ ಶೋಕಿ: ಕದ್ದ ಆಭರಣಗಳನ್ನು ಅಡವಿಟ್ಟು ಬಂದ ಹಣದಲ್ಲಿ ಗೋವಾ, ತಮಿಳುನಾಡಿನ ಕನ್ಯಾಕುಮಾರಿ ಮತ್ತಿತರ ಕಡೆ ಪ್ರವಾಸ ಮಾಡಿ ಶೋಕಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ