ಬೆಂಗಳೂರು: ನೀರಿನ ಬಳಕೆ ಹಕ್ಕನ್ನು ಸ್ಥಳೀಯ ಸಮುದಾಯಗಳಿಗೆ ಮೀಸಲಿಡಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ.ರಾಜೇಂದ್ರ ಸಿಂಗ್ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಅಂತರ್ಜಲ ಸಂರಕ್ಷಣೆ ಮತ್ತು ರೈತ ಕುಲದ ಸಂರಕ್ಷಣೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘‘ಸ್ಥಳೀಯ ಜನತೆ ಜಲ ಸಂರಕ್ಷಣೆ ಕೈಗೊಂಡ ಬಳಿಕ ಅಲ್ಲಿನ ನೀರಿನ ಮಾಲೀಕತ್ವವನ್ನು ಸರಕಾರ ವಹಿಸಿಕೊಳ್ಳುವುದು ಸರಿಯಲ್ಲ. ಬದಲಾಗಿ ಕಷ್ಟಪಟ್ಟು ಜಲ ಉಕ್ಕಿಸುವಲ್ಲಿ ಸಫಲತೆ ಕಂಡ ಸಮುದಾಯದ ಜನತೆಗೆ ಹೊಣೆ ವಹಿಸಬೇಕು,’’ ಎಂದರು.
‘‘ರಾಜಸ್ಥಾನದ ಬರಡು ಭೂಮಿಯಲ್ಲಿ ನದಿ ಮರುಹುಟ್ಟು ಪಡೆಯಲು ಸಾವಿರಾರು ಹಳ್ಳಿಗರು ಜೀವ ತೇಯ್ದಿದ್ದಾರೆ. ಸಣ್ಣ ಕಾಲುವೆಗಳಲ್ಲೂ ನೀರು ಬರುವಂತೆ ಮಾಡಿದ ಸಾಹಸಿಗರ ಯಶೋಗಾಥೆಗೆ ಬೆಲೆ ನೀಡದೆ, ಸರಕಾರದ ವಶಕ್ಕೆ ಪಡೆಯುವ ಪ್ರಯತ್ನದ ವಿರುದ್ಧ ಸ್ಥಳೀಯರು ಜನತಾ ಸಂಸತ್ ಮೂಲಕ ದನಿ ಎತ್ತಿದ್ದಾರೆ. ಇದನ್ನು ಹಿರಿಯ ನ್ಯಾಯಮೂರ್ತಿ ಒಬ್ಬರು ಮಾಹಿತಿ ಸಂಗ್ರಹಿಸುವ ವೇಳೆ ಒಪ್ಪಿದ್ದರೂ, ಸಂವಿಧಾನದತ್ತ ಬೊಟ್ಟು ಮಾಡಿ ಜನರ ದನಿ ಅಡಗುವಂತೆ ಮಾಡಿರುವುದು ಸರಿಯಲ್ಲ,’’ ಎಂದರು.
‘‘ಅಂತರ್ಜಲ ವೃದ್ಧಿಗೆ ರೈತರು ಸರಕಾರದ ಮುಂದೆ ಕೈ ಚಾಚಬೇಕಿಲ್ಲ. ಸಮುದಾಯದ ಸಂಸ್ಥೆಗಳು ಶಿಥಿಲವಾದರೆ ಹೋರಾಟ ಮಾಯವಾಗುತ್ತದೆ. ಪರಾವಲಂಬಿ ಜೀವನ ಸಾಗಿಸುವ ಬದಲು ಸ್ಥಳೀಯವಾಗಿ ಸಿಗುವ ಸಂಪನ್ಮೂಲ ಹಾಗೂ ಮಾನವ ಶಕ್ತಿ ಸದುಪಯೋಗ ಮಾಡಿಕೊಂಡು ಜಲ ಸಂರಕ್ಷಣೆಗೆ ಮುಂದಾಗಬೇಕಿದೆ,’’ ಎಂದರು.
ನಿಸರ್ಗ ದೋಚಲು ಮಿತಿ ಇರಲಿ
‘‘ಮಾನವ ತನ್ನ ಬೇಡಿಕೆ ಈಡೇರಿಸಿಕೊಳ್ಳಲು ನಿಸರ್ಗ ದೋಚುತ್ತಿದ್ದಾನೆ. ನಿಸರ್ಗಕ್ಕೆ ಕೊಡುವ ತಾಕತ್ ಒಂದು ಹಂತದವರೆಗೆ ಇರುತ್ತದೆ. ಇದನ್ನು ಮನಗಾಣದೆ ನಿರಂತರ ಲೂಟಿಗೆ ನಿಂತರೆ ಮುಂದೊಂದು ದಿನ ಬಳಸಲು ಏನೂ ಇರದು. ಇದನ್ನು ಅರ್ಥ ಮಾಡಿಕೊಳ್ಳದ ಸರಕಾರಗಳು, ಅಭಿವೃದ್ಧಿ ಹೆಸರಿನಲ್ಲಿ ಜನತೆಗೆ ಕೆಡಕುಂಟು ಮಾಡುತ್ತಿದೆ. ವಿವಿಗಳಲ್ಲಿ ಸಂಶೋಧನೆ ಆಗುವ ತಂತ್ರಜ್ಞಾನವೂ ರೈತರ ಪೋಷಣೆ ಬದಲು ಶೋಷಣೆಗೆ ಬಳಕೆ ಆಗುತ್ತಿದೆ,’’ ಎಂದು ವಿಷಾದಿಸಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘‘ಆಡಳಿತಗಾರರಲ್ಲಿ ಶಿಸ್ತು ಮೂಡದ ಕಾರಣ ಕೃಷಿ ಕ್ಷೇತ್ರ ಕೃಶಗೊಂಡಿದೆ. ರೈತರು ಸ್ವಯಂ ಜಲ ಸಂರಕ್ಷಣೆಗೆ ಮುಂದಾಗೋಣ,’’ ಎಂದು ಮನವಿ ಮಾಡಿದರು.
ಬರಡು ಭೂಮಿಯಲ್ಲಿ ಜಲ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ, ರೈತರೊಂದಿಗೆ ಸಂವಾದ ನಡೆಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಅಂತರ್ಜಲ ಸಂರಕ್ಷಣೆ ಮತ್ತು ರೈತ ಕುಲದ ಸಂರಕ್ಷಣೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘‘ಸ್ಥಳೀಯ ಜನತೆ ಜಲ ಸಂರಕ್ಷಣೆ ಕೈಗೊಂಡ ಬಳಿಕ ಅಲ್ಲಿನ ನೀರಿನ ಮಾಲೀಕತ್ವವನ್ನು ಸರಕಾರ ವಹಿಸಿಕೊಳ್ಳುವುದು ಸರಿಯಲ್ಲ. ಬದಲಾಗಿ ಕಷ್ಟಪಟ್ಟು ಜಲ ಉಕ್ಕಿಸುವಲ್ಲಿ ಸಫಲತೆ ಕಂಡ ಸಮುದಾಯದ ಜನತೆಗೆ ಹೊಣೆ ವಹಿಸಬೇಕು,’’ ಎಂದರು.
‘‘ರಾಜಸ್ಥಾನದ ಬರಡು ಭೂಮಿಯಲ್ಲಿ ನದಿ ಮರುಹುಟ್ಟು ಪಡೆಯಲು ಸಾವಿರಾರು ಹಳ್ಳಿಗರು ಜೀವ ತೇಯ್ದಿದ್ದಾರೆ. ಸಣ್ಣ ಕಾಲುವೆಗಳಲ್ಲೂ ನೀರು ಬರುವಂತೆ ಮಾಡಿದ ಸಾಹಸಿಗರ ಯಶೋಗಾಥೆಗೆ ಬೆಲೆ ನೀಡದೆ, ಸರಕಾರದ ವಶಕ್ಕೆ ಪಡೆಯುವ ಪ್ರಯತ್ನದ ವಿರುದ್ಧ ಸ್ಥಳೀಯರು ಜನತಾ ಸಂಸತ್ ಮೂಲಕ ದನಿ ಎತ್ತಿದ್ದಾರೆ. ಇದನ್ನು ಹಿರಿಯ ನ್ಯಾಯಮೂರ್ತಿ ಒಬ್ಬರು ಮಾಹಿತಿ ಸಂಗ್ರಹಿಸುವ ವೇಳೆ ಒಪ್ಪಿದ್ದರೂ, ಸಂವಿಧಾನದತ್ತ ಬೊಟ್ಟು ಮಾಡಿ ಜನರ ದನಿ ಅಡಗುವಂತೆ ಮಾಡಿರುವುದು ಸರಿಯಲ್ಲ,’’ ಎಂದರು.
‘‘ಅಂತರ್ಜಲ ವೃದ್ಧಿಗೆ ರೈತರು ಸರಕಾರದ ಮುಂದೆ ಕೈ ಚಾಚಬೇಕಿಲ್ಲ. ಸಮುದಾಯದ ಸಂಸ್ಥೆಗಳು ಶಿಥಿಲವಾದರೆ ಹೋರಾಟ ಮಾಯವಾಗುತ್ತದೆ. ಪರಾವಲಂಬಿ ಜೀವನ ಸಾಗಿಸುವ ಬದಲು ಸ್ಥಳೀಯವಾಗಿ ಸಿಗುವ ಸಂಪನ್ಮೂಲ ಹಾಗೂ ಮಾನವ ಶಕ್ತಿ ಸದುಪಯೋಗ ಮಾಡಿಕೊಂಡು ಜಲ ಸಂರಕ್ಷಣೆಗೆ ಮುಂದಾಗಬೇಕಿದೆ,’’ ಎಂದರು.
ನಿಸರ್ಗ ದೋಚಲು ಮಿತಿ ಇರಲಿ
‘‘ಮಾನವ ತನ್ನ ಬೇಡಿಕೆ ಈಡೇರಿಸಿಕೊಳ್ಳಲು ನಿಸರ್ಗ ದೋಚುತ್ತಿದ್ದಾನೆ. ನಿಸರ್ಗಕ್ಕೆ ಕೊಡುವ ತಾಕತ್ ಒಂದು ಹಂತದವರೆಗೆ ಇರುತ್ತದೆ. ಇದನ್ನು ಮನಗಾಣದೆ ನಿರಂತರ ಲೂಟಿಗೆ ನಿಂತರೆ ಮುಂದೊಂದು ದಿನ ಬಳಸಲು ಏನೂ ಇರದು. ಇದನ್ನು ಅರ್ಥ ಮಾಡಿಕೊಳ್ಳದ ಸರಕಾರಗಳು, ಅಭಿವೃದ್ಧಿ ಹೆಸರಿನಲ್ಲಿ ಜನತೆಗೆ ಕೆಡಕುಂಟು ಮಾಡುತ್ತಿದೆ. ವಿವಿಗಳಲ್ಲಿ ಸಂಶೋಧನೆ ಆಗುವ ತಂತ್ರಜ್ಞಾನವೂ ರೈತರ ಪೋಷಣೆ ಬದಲು ಶೋಷಣೆಗೆ ಬಳಕೆ ಆಗುತ್ತಿದೆ,’’ ಎಂದು ವಿಷಾದಿಸಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘‘ಆಡಳಿತಗಾರರಲ್ಲಿ ಶಿಸ್ತು ಮೂಡದ ಕಾರಣ ಕೃಷಿ ಕ್ಷೇತ್ರ ಕೃಶಗೊಂಡಿದೆ. ರೈತರು ಸ್ವಯಂ ಜಲ ಸಂರಕ್ಷಣೆಗೆ ಮುಂದಾಗೋಣ,’’ ಎಂದು ಮನವಿ ಮಾಡಿದರು.
ಬರಡು ಭೂಮಿಯಲ್ಲಿ ಜಲ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ, ರೈತರೊಂದಿಗೆ ಸಂವಾದ ನಡೆಯಿತು.