ಆ್ಯಪ್ನಗರ

ಲೈಂಗಿಕ ದೌರ್ಜನ್ಯ ನೀಡಿದ ಕಾಮುಕ; ಮನನೊಂದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ!

ಕಾಮುಕ ಸುಬ್ರಮಣಿ ಬಾಲಕಿಯ ಬಗ್ಗೆ ಊರಿನಲ್ಲಿ ಕೆಲವರೊಂದಿಗೆ ಅಸಭ್ಯವಾಗಿ ಹೇಳಿಕೊಂಡು ವಿಕೃತ ಸಂತೋಷ ಪಟ್ಟಿದ್ದಾನೆ. ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಇದರಿಂದ ಮನನೊಂದ ಬಾಲಕಿ ಮರ್ಯಾದೆಗೆ ಅಂಜಿ, 'ನನ್ನ ಸಾವಿಗೆ ಸುಬ್ರಹ್ಮಣ್ಯ ಕಾರಣ' ಅಂತ ಡೆತ್‌ ನೋಟ್‌ ಬರೆದಿಟ್ಟು, ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Vijaya Karnataka 13 Sep 2021, 7:53 am
ಬೆಂಗಳೂರು: ಶೌಚಾಲಯಕ್ಕೆ ಹೋಗಿದ್ದ ಬಾಲಕಿಯನ್ನು ಗ್ರಾಮದ ಯುವಕ ಲೈಂಗಿಕ ಕಿರುಕುಳ ನೀಡುವ ಉದ್ದೇಶಕ್ಕಾಗಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರಿಂದ ಮನನೊಂದಿದ್ದ ಬಾಲಕಿ ಮಾರ್ಯಾದೆಗೆ ಅಂಜಿ ಡೆತ್‌ ನೋಟ್‌ ಬರೆದಿಟ್ಟು, ವಿಷ ಸೇವಿಸಿ ಸಾವಿಗೆ ಶರಣಾದ ಪ್ರಕರಣ ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
Vijaya Karnataka Web dead try news 675
Representative image


ನಂದಗುಡಿ ಹೋಬಳಿಯ ಮಾರಸಂಡಹಳ್ಳಿ ಗ್ರಾಮದ ವಾಸಿ ಸುಬ್ರಹ್ಮಣ್ಯ ಎಂಬಾತ ಇದೇ ಗ್ರಾಮದ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುವ ದುರುದ್ದೇಶದಿಂದ ಎಳೆದಾಡಿ ವಿಫಲನಾಗಿದ್ದ. ಆ ಬಳಿಕ ಗ್ರಾಮದ ಯುವಕರ ಬಳಿ ಬಾಲಕಿಯ ಬಗ್ಗೆ ಬೇರೆ ರೀತಿಯಲ್ಲಿ ಅಸಭ್ಯವಾಗಿ ಹೇಳಿಕೊಂಡಿದ್ದು, ಗ್ರಾಮದಲ್ಲೆಲ್ಲ ಈ ವಿಷಯ ಹರಿದಾಡಿದೆ.
ಶಾಲೆಗೆ ತೆರಳುವ ದಲಿತ ಯುವತಿಯರಿಗೆ ಕೋಲಾರದಲ್ಲಿ ನಿತ್ಯ ಕಿರುಕುಳ; ಪ್ರಶ್ನಿಸಿದ್ದಕ್ಕೆ 50 ಜನ ಪುಂಡರಿಂದ ಥಳಿತ!
ಘಟನೆ ವಿವರ: ಸೆ.6ರಂದು ಬೆಳಗಿನ ಜಾವ ಬಾಲಕಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭ ಅರಿತ ಆರೋಪಿ ಸುಬ್ರಮಣಿ ಹಿಂದಿನಿಂದ ಕುತ್ತಿಗೆ ಹಿಡಿದು ಅಸಭ್ಯವಾಗಿ ವರ್ತಿಸಲು ಯತ್ನಿಸಿದಾಗ ಬಾಲಕಿ ಕಿರುಚಿಕೊಂಡಿದ್ದಾಳೆ. ಈ ವೇಳೆ ತಾಯಿ ಬರುವುದನ್ನು ಗಮನಿಸಿದ ಆರೋಪಿ ಸುಬ್ರಮಣಿ ಪಕ್ಕದ ನೀಲಗಿರಿ ತೋಪಿನೊಳಕ್ಕೆ ಓಡಿ ಹೋಗಿದ್ದಾನೆ. ಆರೋಪಿ ಸುಬ್ರಮಣಿ ಮುಖಕ್ಕೆ ಮಫ್ಲರ್‌ ಸುತ್ತಿಕೊಂಡಿದ್ದರಿಂದ ಬಾಲಕಿಗೆ ತನಗೆ ತೊಂದರೆ ನೀಡಿದ ಕಾಮುಕ ಯಾರೆಂದು ಗುರುತು ಸಿಗಲಿಲ್ಲ, ಓಡುವ ಭರದಲ್ಲಿ ಆರೋಪಿಯು ತನ್ನ ಮೊಬೈಲ್‌ ಬೀಳಿಸಿಕೊಂಡು ಹೋಗಿದ್ದಾನೆ.
ಮಾನಭಂಗ ಯತ್ನ ಪ್ರಕರಣ; ಸುಳ್ಯ ಮಂಡಲ ಸಮಿತಿ ಬಿಜೆಪಿ ಅಧ್ಯಕ್ಷನಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟ
ಬಳಿಕ ಕಾಮುಕ ಸುಬ್ರಮಣಿ ಬಾಲಕಿಯ ಬಗ್ಗೆ ಊರಿನಲ್ಲಿ ಕೆಲವರೊಂದಿಗೆ ಅಸಭ್ಯವಾಗಿ ಹೇಳಿಕೊಂಡು ವಿಕೃತ ಸಂತೋಷ ಪಟ್ಟಿದ್ದಾನೆ. ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಇದರಿಂದ ಮನನೊಂದ ಬಾಲಕಿ ಮರ್ಯಾದೆಗೆ ಅಂಜಿ, 'ನನ್ನ ಸಾವಿಗೆ ಸುಬ್ರಹ್ಮಣ್ಯ ಕಾರಣ' ಅಂತ ಡೆತ್‌ ನೋಟ್‌ ಬರೆದಿಟ್ಟು, ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿಯ ಪೋಷಕರು ಈ ಸಂಬಂಧ ದೂರು ದಾಖಲಿಸಿದ್ದು, ನಂದಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ