ಆ್ಯಪ್ನಗರ

ಬೆಂಗಳೂರು: ಗ್ಯಾಸ್‌ ಕಟರ್ ಬೆಂಕಿಯಿಂದ ಎಟಿಎಂನಲ್ಲೇ ಭಸ್ಮವಾದ 19 ಲಕ್ಷ ರೂ. ಮೌಲ್ಯದ ನೋಟುಗಳು

ಲ ದಿನಗಳ ಹಿಂದೆ ಎಟಿಎಂ ಕೇಂದ್ರಕ್ಕೆ ರಾತ್ರಿ ವೇಳೆ ನುಗ್ಗಿರುವ ಕಳ್ಳರು, ಗ್ಯಾಸ್‌ ಕಟರ್‌ ಬಳಸಿ ಯಂತ್ರವನ್ನು ಕತ್ತರಿಸಲು ಯತ್ನಿಸಿದ್ದಾರೆ. ಈ ವೇಳೆ ಒಟ್ಟು 19.65 ಲಕ್ಷ ರೂ.ಮೌಲ್ಯದ ನೋಟುಗಳು ಸುಟ್ಟು ಬೂದಿಯಾಗಿವೆ

Vijaya Karnataka Web 25 May 2022, 10:24 am
ಬೆಂಗಳೂರು: ಗ್ಯಾಸ್‌ ಕಟರ್‌ನಿಂದ ಎಟಿಎಂ ಯಂತ್ರ ಕತ್ತರಿಸುವ ವೇಳೆ ಬೆಂಕಿ ಹೊತ್ತಿಕೊಂಡು 19 ಲಕ್ಷ ರೂ. ಮೌಲ್ಯದ ನೋಟುಗಳು ಸುಟ್ಟು ಬೂದಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web ಎಟಿಎಂ
ಎಟಿಎಂ


ಬೆಂಗಳೂರು ಪರಪ್ಪನ ಅಗ್ರಹಾರದ ಹೊಸ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿಈ ಘಟನೆ ನಡೆದಿದೆ. ಈ ಕುರಿತು ಎಟಿಎಂಗಳಿಗೆ ಹಣ ತುಂಬುವ ಏಜೆನ್ಸಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಹೆಲಿಕಾಪ್ಟರ್‌ನಲ್ಲಿ ಬಂದ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್!

ಕೆಲ ದಿನಗಳ ಹಿಂದೆ ಎಟಿಎಂ ಕೇಂದ್ರಕ್ಕೆ ರಾತ್ರಿ ವೇಳೆ ನುಗ್ಗಿರುವ ಕಳ್ಳರು, ಗ್ಯಾಸ್‌ ಕಟರ್‌ ಬಳಸಿ ಯಂತ್ರವನ್ನು ಕತ್ತರಿಸಲು ಯತ್ನಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಯಂತ್ರದ ಕ್ಯಾಸೆಟ್‌ ಬಾಕ್ಸ್‌ನಲ್ಲಿದ್ದ ಐನೂರು, ಇನ್ನೂರು, ನೂರು ರೂ. ಮುಖ ಬೆಲೆಯ ಒಟ್ಟು 19.65 ಲಕ್ಷ ರೂ.ಮೌಲ್ಯದ ನೋಟುಗಳು ಸುಟ್ಟು ಬೂದಿಯಾಗಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬೆಂಕಿ ಹೊತ್ತಿಕೊಂಡ ಬಳಿಕ ಕಳ್ಳರು ಹೊರಟು ಹೋಗಿರುವ ಸಾಧ್ಯತೆಯಿದೆ ಎಂದು ದೂರುದಾರರು ಹೇಳಿದ್ದಾರೆ. ಎಟಿಎಂ ಕೇಂದ್ರದಲ್ಲಿ ಸಿಸಿ ಕ್ಯಾಮೆರಾವೂ ಇಲ್ಲ. ಘಟನೆ ನಡೆದ ಐದು ದಿನಗಳ ಬಳಿ ದೂರು ನೀಡಲಾಗಿದೆ. ಹೀಗಾಗಿ, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಮಾಸಿಕ ಪಾಸ್‌ಗೆ ಸಂಸ್ಥೆಯ ಗುರುತಿನ ಚೀಟಿ ಅಗತ್ಯವಿಲ್ಲ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಮಾಸಿಕ ಬಸ್‌ ಪಾಸ್‌ನೊಂದಿಗೆ ಸಂಸ್ಥೆಯ ಗುರುತಿನ ಚೀಟಿ ಹೊಂದಿರಬೇಕೆಂಬ ನಿಯಮವನ್ನು ಹಿಂಪಡೆಯಲಾಗಿದೆ. ಜುಲೈ ತಿಂಗಳಿನಿಂದಲೇ ಅನ್ವಯವಾಗುವಂತೆ ಗುರುತಿನ ಚೀಟಿಯನ್ನು ಹಿಂಪಡೆಯಲಾಗಿದೆ.

ಬಿಎಂಟಿಸಿಯು ಸಾಮಾನ್ಯ, ವಜ್ರ ಮತ್ತು ವಾಯುವಜ್ರ ಮಾಸಿಕ ಪಾಸ್‌ಗಳನ್ನು ಪ್ರತಿ ತಿಂಗಳು ವಿತರಣೆ ಮಾಡುತ್ತಿದೆ. ಈ ಮಾಸಿಕ ಪಾಸ್‌ಗಳೊಂದಿಗೆ ಸಂಸ್ಥೆಯ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿತ್ತು. ಇದೀಗ ಗುರುತಿನ ಚೀಟಿ ಹಿಂಪಡೆಯಲಾಗಿದೆ. ಪ್ರಯಾಣಿಕರು ಮಾಸಿಕ ಪಾಸ್‌ನೊಂದಿಗೆ ಭಾವಚಿತ್ರವಿರುವ ಆಧಾರ್‌, ಮತದಾರರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್‌, ಚಾಲನಾ ಪರವಾನಗಿ ಅಥವಾ ಇತರೆ ಯಾವುದಾದರೂ ಒಂದು ದಾಖಲೆಯೊಂದಿಗೆ ಪ್ರಯಾಣ ಮಾಡಬಹುದಾಗಿದೆ.

ಬೆಂಗಳೂರು: ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಗೇ ಕನ್ನ ಹಾಕುತ್ತಿದ್ದವರು ಅಂದರ್‌

ಇದಲ್ಲದೆ, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮಾಸಿಕ ಪಾಸ್‌ಗಳನ್ನು ಪಡೆಯಲು ಅನುವಾಗುವಂತೆ ದಿನಾಂಕವಾರು ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿತರಣಾ ದಿನಾಂಕದಿಂದ ಪಾಸ್‌ಗಳ ಮಾನ್ಯತೆ ಅವಧಿಯು 30 ದಿನ ಇರಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ