ಬೆಂಗಳೂರು: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ತುಂತುರು ಮಳೆ ಜತೆ ಶೀತಗಾಳಿ ಬೀಸುತ್ತಿದ್ದು, ಭಾನುವಾರ ಮತ್ತು ಸೋಮವಾರ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಯಲ್ಲೊಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಧ್ಯೆ, ಭಾನುವಾರ (ನವೆಂಬರ್ 13) ಅಂಡಮಾನ್-ನಿಕೋಬಾರ್ ದ್ವೀಪ, ಲಕ್ಷದ್ವೀಪ, ರಾಯಲಸೀಮೆ, ತಮಿಳುನಾಡು, ಪುದುಚೆರಿಯ ಬಹುತೇಕ ಭಾಗಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಹಲವು ಕಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಬಿದ್ದಿದೆ. ಇದರ ಜತೆಯಲ್ಲೇ ಥಂಡಿಯ ಹವಾ ಕೂಡ ಹೆಚ್ಚಳವಾಗಿದೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ತುಂತುರು ಮಳೆಯಾಗಿದೆ. ಜತೆಗೆ ಶೀತಗಾಳಿಯೂ ಬಿಸುತ್ತಿದೆ. ಇದರಿಂದಾಗಿ ಹವಾಮಾನದಲ್ಲಿ ಥಂಡಿಯೂ ಹೆಚ್ಚುತ್ತಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆವರೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹರದನಹಳ್ಳಿಯಲ್ಲಿ ತಲಾ 3 ಸೆಂ.ಮೀ, ಕೊಡಗು ಜಿಲ್ಲೆಯ ಶ್ರೀಮಂಗಲದಲ್ಲಿ2 ಸೆಂ.ಮೀ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮೈಸೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಇಲಾಖೆಯ ಹವಾಮಾನ ವಿಜ್ಣಾನಿ ಪ್ರಸಾದ್ ಮಾತನಾಡಿ, ವಾಯುಭಾರ ಕುಸಿತ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ದುರ್ಬಲವಾಗುವ ಸಾಧ್ಯತೆ ಇದೆ. ಟ್ರಫ್ ನಿರ್ಮಾಣವಾಗಿದೆ. ಇದಲ್ಲದೆ ನವೆಂಬರ್ 16 ರಂದು ಹೊಸದಾಗಿ, ಈಶಾನ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಿದರಿಂದ ಮುಂದಿನ ಐದು ದಿನವೂ ಮಳೆಯಾಗಲಿದ್ದು, ದಕ್ಷಿಣ ಒಳನಾಡಿಗೆ ಮಳೆಯ ಪ್ರಮಾಣ ಹೆಚ್ಚು ಇರಲಿದೆ. ಕರಾವಳಿಯಲ್ಲೂ ಹೆಚ್ಚು ಮಳೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಹಗುರ ಮಳೆಯಿರುವ ಸಾಧ್ಯತೆಯಿದೆ ಎಂದರು.
ಈ ಮಧ್ಯೆ, ಭಾನುವಾರ (ನವೆಂಬರ್ 13) ಅಂಡಮಾನ್-ನಿಕೋಬಾರ್ ದ್ವೀಪ, ಲಕ್ಷದ್ವೀಪ, ರಾಯಲಸೀಮೆ, ತಮಿಳುನಾಡು, ಪುದುಚೆರಿಯ ಬಹುತೇಕ ಭಾಗಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಹಲವು ಕಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಬಿದ್ದಿದೆ. ಇದರ ಜತೆಯಲ್ಲೇ ಥಂಡಿಯ ಹವಾ ಕೂಡ ಹೆಚ್ಚಳವಾಗಿದೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ತುಂತುರು ಮಳೆಯಾಗಿದೆ. ಜತೆಗೆ ಶೀತಗಾಳಿಯೂ ಬಿಸುತ್ತಿದೆ. ಇದರಿಂದಾಗಿ ಹವಾಮಾನದಲ್ಲಿ ಥಂಡಿಯೂ ಹೆಚ್ಚುತ್ತಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆವರೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹರದನಹಳ್ಳಿಯಲ್ಲಿ ತಲಾ 3 ಸೆಂ.ಮೀ, ಕೊಡಗು ಜಿಲ್ಲೆಯ ಶ್ರೀಮಂಗಲದಲ್ಲಿ2 ಸೆಂ.ಮೀ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮೈಸೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಇಲಾಖೆಯ ಹವಾಮಾನ ವಿಜ್ಣಾನಿ ಪ್ರಸಾದ್ ಮಾತನಾಡಿ, ವಾಯುಭಾರ ಕುಸಿತ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ದುರ್ಬಲವಾಗುವ ಸಾಧ್ಯತೆ ಇದೆ. ಟ್ರಫ್ ನಿರ್ಮಾಣವಾಗಿದೆ. ಇದಲ್ಲದೆ ನವೆಂಬರ್ 16 ರಂದು ಹೊಸದಾಗಿ, ಈಶಾನ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಿದರಿಂದ ಮುಂದಿನ ಐದು ದಿನವೂ ಮಳೆಯಾಗಲಿದ್ದು, ದಕ್ಷಿಣ ಒಳನಾಡಿಗೆ ಮಳೆಯ ಪ್ರಮಾಣ ಹೆಚ್ಚು ಇರಲಿದೆ. ಕರಾವಳಿಯಲ್ಲೂ ಹೆಚ್ಚು ಮಳೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಹಗುರ ಮಳೆಯಿರುವ ಸಾಧ್ಯತೆಯಿದೆ ಎಂದರು.