ಆ್ಯಪ್ನಗರ

ಗೋಲ್ಡ್‌ ಸ್ಮಗ್ಲಿಂಗ್‌: ವಿಮಾನ ನಿಲ್ದಾಣ ಅಧಿಕಾರಿಗಳ ಸೆರೆ

ಚಿನ್ನಾಭರಣ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಕೆಂಪೇಗ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಲಸೆ ವಿಭಾಗದ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 13 Mar 2017, 12:36 pm
ಬೆಂಗಳೂರು: ಚಿನ್ನಾಭರಣ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಕೆಂಪೇಗ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಲಸೆ ವಿಭಾಗದ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ.
Vijaya Karnataka Web 2 kia officers held for smuggling
ಗೋಲ್ಡ್‌ ಸ್ಮಗ್ಲಿಂಗ್‌: ವಿಮಾನ ನಿಲ್ದಾಣ ಅಧಿಕಾರಿಗಳ ಸೆರೆ


ವಲಸೆ ವಿಭಾಗದ ಎಸ್‌ಐಗಳಾದ ಪ್ರವೀಣ್‌ ಕುಮಾರ್‌ ಮತ್ತು ಪಿ.ಡಿ ಕಾತ್ಕರ್‌ ಬಂಧಿತರು. ಒಬ್ಬ ಅಧಿಕಾರಿ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಮಲೇಷ್ಯಾದ ಪ್ರಯಾಣಿಕನಿಂದ ಮೂರು ಕೆ.ಜಿ ಚಿನ್ನ ತೆಗೆದುಕೊಳ್ಳುತ್ತಿದ್ದಾಗ ಸೆರೆ ಹಿಡಿದಿರುವುದಾಗಿ ರೆವಿನ್ಯೂ ಪತ್ತೆದಳ ಜಾರಿ ನಿರ್ದೇಶನಾಲಯ ಹೇಳಿದೆ.

ನಿಲ್ದಾಣದೊಳಗಿನ ಸಿಬ್ಬಂದಿ ನೀಡಿದ್ದ ಸುಳಿವು ಆಧರಿಸಿ ಆಯಕಟ್ಟಿನ ಸ್ಥಳಗಳಲ್ಲಿ ನಿಗಾ ಸಿಬ್ಬಂದಿಯನ್ನು ನಿಯೋಜಿಸಿದ್ದಾಗಿ ಪತ್ತೆದಳ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಜುನನ್‌ ವೇಲು ಮತ್ತು ಶಾಂತಿ ನಾರಾಯಣನ್‌ ಭಾನುವಾರ ಬೆಳಗ್ಗೆ ಮಲೇಷ್ಯಾ ಏರ್‌ಲೈನ್‌ ವಿಮಾನದಲ್ಲಿ ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದರು. ವೇಲು ಶೌಚಾಲಯದತ್ತ ಹೋದರೆ ಪತ್ನಿ ಶಾಂತಿ ಕಾಯುತ್ತ ನಿಂತಿದ್ದರು. ಕೆಲವು ಹೊತ್ತಿನ ಬಳಿ ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿದ್ದು, ಆ ವ್ಯಕ್ತಿಗೆ ವೆಲು ಚಿನ್ನಾಭರಣವಿದ್ದ ಚೀಲ ನೀಡಿದ್ದಾರೆ. ಆಗ ನಮ್ಮ ಸಿಬ್ಬಂದಿ ಇಬ್ಬರನ್ನೂ ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ವಲಸೆ ವಿಭಾಗದ ಅಧಿಕಾರಿ ಕಾತ್ಕರ್‌ ಎಂಬುದು ತಿಳಿಯಿತು. ಮತ್ತೊಬ್ಬ ಅಧಿಕಾರಿ ಪ್ರವೀಣ್‌ ಕೂಡ ಈ ಜಾಲದಲ್ಲಿ ಭಾಗಿ ಎಂಬುದು ತನಿಖಾಧಿಕಾರಿಗಳಿಗೆ ಗೊತ್ತಾಗಿದೆ.

2 KIA officers held for smuggling: Two immigration officers of Kempegowda International Airport were arrested on Sunday for allegedly aiding smuggling of gold bars and ornaments.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ