ಆ್ಯಪ್ನಗರ

ಚಿತ್ರಸಂತೆಯಲ್ಲಿ ದಾಖಲೆ ವಹಿವಾಟು

'ಗಾಂಧಿ-150' ಶೀರ್ಷಿಕೆಯಡಿ ಆಯೋಜಿಸಿದ್ದ ಈ ಬಾರಿಯ ಚಿತ್ರಸಂತೆಗೆ ನಾಲ್ಕು ಲಕ್ಷ ಮಂದಿ ಆಗಮಿಸಿದ್ದು, ದಾಖಲೆ ಪ್ರಮಾಣದ ವಹಿವಾಟು ನಡೆದಿದೆ. ಕಳೆದ ವರ್ಷದ ಚಿತ್ರಸಂತೆಯಲ್ಲಿ 2 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿತ್ತು. ಆದರೆ ಈ ವರ್ಷದ ವಹಿವಾಟು 3 ಕೋಟಿ ರೂ. ದಾಟಿದ್ದು, ದಾಖಲೆ ನಿರ್ಮಿಸಿದೆ.

Vijaya Karnataka 7 Jan 2019, 5:00 am
ಬೆಂಗಳೂರು: 'ಗಾಂಧಿ-150' ಶೀರ್ಷಿಕೆಯಡಿ ಆಯೋಜಿಸಿದ್ದ ಈ ಬಾರಿಯ ಚಿತ್ರಸಂತೆಗೆ ನಾಲ್ಕು ಲಕ್ಷ ಮಂದಿ ಆಗಮಿಸಿದ್ದು, ದಾಖಲೆ ಪ್ರಮಾಣದ ವಹಿವಾಟು ನಡೆದಿದೆ. ಕಳೆದ ವರ್ಷದ ಚಿತ್ರಸಂತೆಯಲ್ಲಿ 2 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿತ್ತು. ಆದರೆ ಈ ವರ್ಷದ ವಹಿವಾಟು 3 ಕೋಟಿ ರೂ. ದಾಟಿದ್ದು, ದಾಖಲೆ ನಿರ್ಮಿಸಿದೆ.
Vijaya Karnataka Web 0601-2-2-130 (19)


''ಕಳೆದ ವರ್ಷ ಸುಮಾರು, 1,300 ಮಂದಿ ಕಲಾವಿದರಿದ್ದರೆ, ಈ ಬಾರಿ 1,500 ಕ್ಕೂ ಹೆಚ್ಚು ಮಂದಿ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಹೆಚ್ಚು ವಹಿವಾಟು ನಡೆದಿದೆ. ಸಂಜೆಯ ವೇಳೆಗೆ ಚಿತ್ರಸಂತೆ ಅತಿ ಹೆಚ್ಚು ಜನಸಂದಣಿಯನ್ನು ಹೊಂದಿತ್ತು. ರಾತ್ರಿ 8ರ ನಂತರವೂ ಜನ ಖರೀದಿಯಲ್ಲಿ ತೊಡಗಿದ್ದುದು ವಿಶೇಷವಾಗಿತ್ತು'' ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹಾಯಕ ಕಾರ್ಯದರ್ಶಿ ಪ್ರೊ. ಅಪ್ಪಾಜಯ್ಯ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

''ಕಳೆದ ವರ್ಷ ಸುಮಾರು 3.50 ಲಕ್ಷ ಮಂದಿ ಆಗಮಿಸಿದ್ದರು. ಈ ಬಾರಿ ಚಿತ್ರಸಂತೆಯನ್ನು ಗಾಂಧೀಜಿಯವರಿಗೆ ಅರ್ಪಿಸಿದ್ದು, ಬಿದಿರಿನ ಗಾಂಧಿ ಕುಟೀರ, ಚರಕ, ಕನ್ನಡಕದ ಪ್ರವೇಶ ದ್ವಾರ ಮಾಡಿದ್ದುದರಿಂದ ಹೆಚ್ಚು ಆಕರ್ಷಣೀಯವಾಗಿತ್ತು. ಹೀಗಾಗಿ ಎಂದಿಗಿಂತ ಹೆಚ್ಚು ಜನ ಆಗಮಿಸಿದ್ದರು'' ಎಂದರು.

ಕೊಡಗು ನೆರೆ ಸಂತ್ರಸ್ತರಿಗೆ 400 ಚಿತ್ರಗಳ ದೇಣಿಗೆ: ''ಈ ಬಾರಿಯ ಚಿತ್ರಸಂತೆಯಲ್ಲಿ ಕೊಡಗು-ಕೇರಳ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ನೆರವು ನೀಡುವಂತೆ ಚಿತ್ರಕಲಾ ಪರಿಷತ್‌ ಕಲಾವಿದರಲ್ಲಿ ಮನವಿ ಮಾಡಿತ್ತು. ಅದರಂತೆ ನೂರಾರು ಕಲಾವಿದರು ತಾವು ಬಿಡಿಸಿದ ಅಪರೂಪದ ಹಾಗೂ ಆಕರ್ಷಕ ಚಿತ್ರಗಳನ್ನು ಸಿಕೆಪಿಗೆ ನೀಡಿದ್ದಾರೆ. ಹೀಗೆ ನೀಡಿದ ಚಿತ್ರಗಳ ಪೈಕಿ ಒಟ್ಟಾರೆ 400 ಚಿತ್ರಗಳು ಸಂಗ್ರಹವಾಗಿವೆ. ಇವುಗಳನ್ನು ಸಧ್ಯದಲ್ಲೇ ಪ್ರದರ್ಶನಕ್ಕಿಟ್ಟು ಮಾರಾಟ ಮಾಡಲಾಗುವುದು. ಇದರಿಂದ ಬಂದ ಹಣವನ್ನು ಕೊಡಗು-ಕೇರಳ ನೆರೆ ಸಂತ್ರಸ್ತರ ಪುರ್ನವಸತಿಗೆ ಅಥವಾ ಅವರ ಇತರೆ ಅಗತ್ಯತೆಗಳಿಗೆ ನೀಡಲಾಗುವುದು'' ಎಂದು ಪ್ರೊ.ಅಪ್ಪಾಜಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ