ಆ್ಯಪ್ನಗರ

ಬೆಂಗಳೂರು: 34 ಕೆ.ಜಿ ಗಾಂಜಾ, ಎಂಡಿಎಂಎ ಮಾತ್ರೆ ಜಪ್ತಿ; 3 ಪ್ರತ್ಯೇಕ ಪ್ರರಣಗಳಲ್ಲಿ ವಿದೇಶಿ ಪ್ರಜೆ ಸೇರಿ 9 ಜನರ ಬಂಧನ

ಹೆಣ್ಣೂರು ಮುಖ್ಯರಸ್ತೆ ಮೇಗನಪಾಳ್ಯದಲ್ಲಿರುವ ಸವೀರ್‍ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಮಾದಕವಸ್ತು ಸಂಗ್ರಹಿಸಿರುವ ಮಾಹಿತಿ ಆಧರಿಸಿ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಫ್ಲ್ಯಾಟ್‌ನಲ್ಲಿ 50 ಗ್ರಾಂ ತೂಕದ 100 ಜೂರಾಸಿಸ್‌ ಮಾತ್ರೆಗಳು, 10 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 22 Sep 2020, 10:50 pm
ಬೆಂಗಳೂರು: ಮಾದಕವಸ್ತುಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಸಂಜಯನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 9 ಲಕ್ಷ ರೂ. ಮೌಲ್ಯದ 30 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
Vijaya Karnataka Web ಡ್ರಗ್ಸ್‌
ಡ್ರಗ್ಸ್‌


ಭೂಪಸಂದ್ರದ ಶಬ್ಬೀರ್‌ ಖಾನ್‌ (34), ಆಂಧ್ರಪ್ರದೇಶದ ವಿಶಾಖಪಟ್ಟಣದ ಭೀಮಣ್ಣ (28) ಮತ್ತು ಎಸ್‌.ನನ್ನರಾವ್‌ (24) ಬಂಧಿತರು.

ಭೂಪಸಂದ್ರ ಮೋಹನ್‌ರಾಜ್‌ ಲೇಔಟ್‌ ಬಳಿ ಗಾಂಜಾ ಮಾರುತ್ತಿರುವ ಮಾಹಿತಿ ಆಧರಿಸಿ ಸಂಜಯನಗರ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಶಬ್ಬೀರ್‌ಖಾನ್‌ನನ್ನು ವಶಕ್ಕೆ ಪಡೆದು ಆತ ನೀಧಿಡಿದ ಮಾಹಿತಿ ಆಧರಿಸಿ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆಟೊ ಚಾಲಕನಾಗಿರುವ ಶಬ್ಬೀರ್‌ ಖಾನ್‌ ಸುಲಭವಾಗಿ ಹಣ ಗಳಿಸಲು ಗಾಂಜಾ ಮಾರಾಟ ದಂಧೆಗೆ ಇಳಿದಿದ್ದ. ಒಡಿಶಾದಿಂದ ಭೀಮಣ್ಣ ಮತ್ತು ನನ್ನರಾವ್‌ ತರುತ್ತಿದ್ದ ಗಾಂಜಾವನ್ನು ಮಾರಾಟ ಮಾಡುತ್ತಿದ್ದುದಾಗಿ ಆರೋಪಿಯ ವಿಚಾರಣೆ ವೇಳೆ ಗೊತ್ತಾಗಿದೆ.

ಸೋಲದೇವನಹಳ್ಳಿ


ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಸುರೇಂದ್ರ (25) ಎಂಬಾತನನ್ನು ಬಂಧಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು, 4 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಿ.ಎಸ್ಸಿ. ಪದವೀಧರನಾಗಿರುವ ಸುರೇಂದ್ರ, ಸುಲಭವಾಗಿ ಹಣ ಗಳಿಸಲು ಆಂಧ್ರದಿಂದ ನಗರಕ್ಕೆ ಗಾಂಜಾ ತಂದು ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶಿ ಪ್ರಜೆ ಸೇರಿ ಐವರ ಬಂಧನ


ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸುಧಿಡಾನ್‌ ಪ್ರಜೆ ಸೇರಿ ಐವರನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು, 5 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಣ್ಣೂರು ಮುಖ್ಯರಸ್ತೆ ಮೇಗನ ಪಾಳ್ಯದಲ್ಲಿರುವ ಸವೀರ್‍ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಮಾದಕವಸ್ತು ಸಂಗ್ರಹಿಸಿರುವ ಮಾಹಿತಿ ಆಧರಿಸಿ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಫ್ಲ್ಯಾಟ್‌ನಲ್ಲಿ 50 ಗ್ರಾಂ ತೂಕದ 100 ಜೂರಾಸಿಸ್‌ ಮಾತ್ರೆಗಳು, 10 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಳ್ಳಲಾಗಿದೆ.

ಸುಧಿಡಾನ್‌ ದೇಶದ ಅಹ್ಮದ್‌ ಒಮರ್‌, ಸ್ಥಳೀಯರಾದ ಕೆ. ತಬಶೀರ್‌, ಲಜೀಂ ನಾಸಿರ್‌, ಸೈಯದ್‌ ಶಾಕೀರ್‌ ಮತ್ತು ಮೊಹಮ್ಮದ್‌ ಸೀಹಂ ಬಂಧಿತರು.

ಎಂ.ಸಿ.ಎ. ವ್ಯಾಸಂಗ ಮಾಡಲು ವಿದೇಶದಿಂದ ಬಂದಿದ್ದೆ. ಒಂಟಿಯಾಗಿದ್ದ ಕಾರಣ ಒತ್ತಡ ನಿವಾರಣೆಗೆ ಮಾದಕ ವಸ್ತು ಬಳಸುತ್ತಿದ್ದೆ. ಹವ್ಯಾಸವಾದ ಬಳಿಕ ಹಣಕಾಸಿನ ಸಮಸ್ಯೆಯಾಯಿತು. ಅದಕ್ಕಾಗಿ ವಿದೇಶಿಯರಿಂದ ಡ್ರಗ್ಸ್‌ ಖರೀದಿಸಿ, ಸ್ಥಳೀಯ ಯುವಕರ ಜತೆ ಸೇರಿ ಮಾರಾಟ ಮಾಡುತ್ತಿದ್ದೆ ಎಂದು ಆರೋಪಿ ಅಹ್ಮದ್‌ ಒಮರ್‌ ಪೊಲೀಸರಿಗೆ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ