ರಾಜಧಾನಿಯಲ್ಲಿ 3986 ಮಂದಿ ನಿರ್ಗತಿಕರ ಪತ್ತೆ
ಸಮೀಕ್ಷೆಯಲ್ಲಿ 3,986 ಮಂದಿ ನಿರ್ಗತಿಕರು ಪತ್ತೆಯಾಗಿದ್ದಾರೆ. ಇವರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ರಾತ್ರಿ ತಂಗುದಾಣಗಳನ್ನು ನಿರ್ಮಿಸಲು ಮುಂದಾಗಿದೆ.
Vijaya Karnataka 23 Jan 2019, 5:00 am
ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು
ಬಿಬಿಎಂಪಿಯು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 3,986 ಮಂದಿ ನಿರ್ಗತಿಕರು ಪತ್ತೆಯಾಗಿದ್ದಾರೆ. ಇವರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ರಾತ್ರಿ ತಂಗುದಾಣಗಳನ್ನು ನಿರ್ಮಿಸಲು ಮುಂದಾಗಿದೆ.
ದೀನ ದಯಾಳ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ (ನಲ್ಮ್) ಮಾರ್ಗಸೂಚಿಯನ್ವಯ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ 50 ಮಂದಿ ನಿರಾಶ್ರಿತರ ಆಶ್ರಯಕ್ಕೆ ಅನುಕೂಲವಾಗುವಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 100 ತಂಗುದಾಣಗಳನ್ನು ನಿರ್ವಹಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, 3986 ಮಂದಿ ವಸತಿ ರಹಿತರನ್ನು ಗುರುತಿಸಲಾಗಿದೆ. ಇವರಲ್ಲಿ ಮಹಿಳೆಯರು, ಮಕ್ಕಳು ಕೂಡ ಇದ್ದಾರೆ.
ನಾನಾ ಕಾರಣಗಳಿಂದ ಮನೆಯಿಂದ ಹೊರಬಿದ್ದವರು, ಹೊರ ಹಾಕಲ್ಪಟ್ಟವರು ಹೆದ್ದಾರಿಯಲ್ಲಿ ಲಾರಿ ಹಿಡಿದು ನಗರಕ್ಕೆ ಬಂದು ರೈಲು, ಬಸ್ ನಿಲ್ದಾಣ, ಸುರಂಗ ಮಾರ್ಗ, ಮೇಲ್ಸೇತುವೆ ಕೆಳಭಾಗ, ಪಾದಚಾರಿ ಮಾರ್ಗ, ದೇವಸ್ಥಾನದ ಆವರಣವನ್ನೇ ಮನೆಯಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸಹ ನಿಲ್ದಾಣಗಳನ್ನೇ ಆಶ್ರಯಿಸಿದ್ದಾರೆ. ಇವರಿಗೆ ರಾತ್ರಿ ತಂಗುದಾಣಗಳ ವ್ಯವಸ್ಥೆ ಮಾಡಲು ಪಾಲಿಕೆಯ ಖಾಲಿ ಕಟ್ಟಡಗಳು, ನಿವೇಶನಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಜ. 31ರೊಳಗೆ 10 ಕಡೆ ತಂಗುದಾಣಗಳ ವ್ಯವಸ್ಥೆ ಮಾಡುವ ಗುರಿ ಹೊಂದಲಾಗಿದೆ.
ರಾತ್ರಿ ತಂಗುದಾಣಗಳ ನಿರ್ಮಾಣಕ್ಕೆ ಖಾಲಿ ನಿವೇಶನ, ಕಟ್ಟಡಗಳನ್ನು ಗುರುತಿಸಲು ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಹಲವೆಡೆ ಜಾಗ ಗುರುತಿಸಲಾಗಿದೆ. ಸದ್ಯ 6 ಕಡೆ ರಾತ್ರಿ ತಂಗುದಾಣಗಳು ಕಾರ್ಯ ನಿರ್ವಹಿಸುತ್ತಿದ್ದು, 175 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
ನಿರ್ಗತಿಕರಿಗೆ ಉಚಿತ ಊಟ, ತಿಂಡಿ: ಇತ್ತೀಚೆಗೆ ಗೂಡ್ಸ್ ಶೆಡ್ ರಸ್ತೆಯಲ್ಲಿ ರಾತ್ರಿ ತಂಗುದಾಣದ ವ್ಯವಸ್ಥೆ ಮಾಡಿ, 75 ಮಂದಿಗೆ ಆಶ್ರಯ ನೀಡಲಾಗಿದೆ. ರಾತ್ರಿ ತಂಗುದಾಣಗಳಲ್ಲಿ ಆಶ್ರಯ ಪಡೆಯುವವರಿಗೆ ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಹಾಸಿಗೆ, ದಿಂಬು, ಟವೆಲ್, ಹೊದಿಕೆಯನ್ನೂ ನೀಡಲಾಗುತ್ತದೆ. ಅಲ್ಲದೇ ಇಂದಿರಾ ಕ್ಯಾಂಟೀನ್ಗಳಿಂದ ರಾತ್ರಿ ಊಟ ಮತ್ತು ಬೆಳಗ್ಗೆ ಉಚಿತವಾಗಿ ತಿಂಡಿ ನೀಡಲು ತೀರ್ಮಾನಿಸಲಾಗಿದೆ.
ಲೈಂಗಿಕ ಅಲ್ಪಸಂಖ್ಯಾತರಿಗೆ ನೆಲೆ: ನಗರದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಇವರಿಗೆ ಬಾಡಿಗೆಗೆ ಮನೆಗಳು ಸಿಗುವುದಿಲ್ಲ. ಸಿಕ್ಕರೂ ಬಾಡಿಗೆ ದುಬಾರಿ. ಹಾಗಾಗಿ, ಇವರಿಗೆ ಶಾಶ್ವತ ತಂಗುದಾಣಗಳನ್ನು ನಿರ್ಮಿಸಿ, ಕೌಶಲ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ 5 ಕೊಠಡಿಗಳ ಕೊಠಡಿಯೊಂದನ್ನು ಗುರುತಿಸಲಾಗಿದೆ. 3-4 ತಿಂಗಳ ಕಾಲ ವಾಸ್ತವ್ಯ ಕಲ್ಪಿಸಿ, ಉಚಿತ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಟೈಲರಿಂಗ್, ಕಂಪ್ಯೂಟರ್, ಫ್ಯಾಷನ್ ಡಿಸೈನಿಂಗ್, ಮೇಣದ ಬತ್ತಿ ತಯಾರಿಕೆ, ವಾಹನ ಚಾಲನಾ ತರಬೇತಿ ಕೊಟ್ಟು, ಸ್ವಾವಲಂಬಿ ಬದುಕು ಕಟ್ಟಿಕೊಡಲು ನಿರ್ಧರಿಸಲಾಗಿದೆ.
ಹಾಗೆಯೇ, ವಿಶೇಷ ಚೇತನರು ಮತ್ತು ವಯಸ್ಸಾದ ಲೈಂಗಿಕ ಕಾರ್ಯಕರ್ತರು, ವಯೋವೃದ್ಧ ಮಹಿಳೆಯರಿಗೂ ಶಾಶ್ವತ ತಂಗುದಾಣಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಸುಮನಹಳ್ಳಿ ಬಳಿ ಇರುವ ಸಮುದಾಯ ಭವನದಲ್ಲಿ 60 ವರ್ಷ ಮೇಲ್ಪಟ್ಟ ನಿರ್ಗತಿಕ ಮಹಿಳೆಯರಿಗೆ ಶಾಶ್ವತ ಆಶ್ರಯ ತಂಗುದಾಣದ ವ್ಯವಸ್ಥೆ ಮಾಡಲಾಗುತ್ತಿದೆ.
ನಿರ್ಮಾಣ, ನಿರ್ವಹಣೆಗೆ 2.50 ಕೋಟಿ ರೂ.: ರಾತ್ರಿ ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ 2.50 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸದಾಗಿ ರಾತ್ರಿ ತಂಗುದಾಣ ನಿರ್ಮಿಸಲು 50 ಲಕ್ಷ ರೂ., ದೊಮ್ಮಲೂರು, ಜಕ್ಕೂರು ವಾರ್ಡ್ನಲ್ಲಿ ಕೇಂದ್ರ ನಿರ್ಮಾಣಕ್ಕೆ ಕ್ರಮವಾಗಿ 75 ಮತ್ತು 77 ಲಕ್ಷ ರೂ. ನಿಗದಿಪಡಿಸಲಾಗಿದೆ. ಹಾಲಿ ಇರುವ 6 ಕೇಂದ್ರಗಳ ನಿರ್ವಹಣೆಗೆ ತಲಾ 8 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.
ಕಲಾಸಿಪಾಳ್ಯದ ಮಾರಮ್ಮ ದೇವಸ್ಥಾನದ 100 ಮಂದಿ ನಿತ್ಯ ರಾತ್ರಿ 100 ಮಂದಿ ಮಲಗುತ್ತಿದ್ದು, ಶುಲ್ಕ ತೆರುತ್ತಿದ್ದಾರೆ. ಈ ಶುಲ್ಕವನ್ನೇ ಪಾಲಿಕೆಯಿಂದಲೇ ಪಾವತಿಸಲಾಗುವುದು. ಶಾಂತಿನಗರದ ಆನೇಪಾಳ್ಯದಲ್ಲಿ ನೈಂಟಿಗೇಲ್ ಸಂಸ್ಥೆಯು ವಯೋವೃದ್ಧ ಮಹಿಳೆಯರಿಗೆ ಆಶ್ರಯ ನೀಡಲು ಮುಂದೆ ಬಂದಿದೆ.
-ಜಗದೀಶ್, ಉಪ ಆಯುಕ್ತರು (ಕಲ್ಯಾಣ), ಬಿಬಿಎಂಪಿ
ಸಮೀಕ್ಷೆ ವೇಳೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ರಾಜ್ಯದ ರಾಯಚೂರು, ಕಲಬುರ್ಗಿ, ಬಳ್ಳಾರಿ, ಬೀದರ್ ಸೇರಿದಂತೆ ಇತರೆ ಪ್ರದೇಶಗಳಿಂದ ವಲಸೆ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
-ಉದಯಕುಮಾರ್, ಸಂಚಾಲಕ, ಇಂಪ್ಯಾಕ್ಟ್ ಇಂಡಿಯಾ ಸಂಸ್ಥೆ
ಬಿಬಿಎಂಪಿಯು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 3,986 ಮಂದಿ ನಿರ್ಗತಿಕರು ಪತ್ತೆಯಾಗಿದ್ದಾರೆ. ಇವರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ರಾತ್ರಿ ತಂಗುದಾಣಗಳನ್ನು ನಿರ್ಮಿಸಲು ಮುಂದಾಗಿದೆ.
ದೀನ ದಯಾಳ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ (ನಲ್ಮ್) ಮಾರ್ಗಸೂಚಿಯನ್ವಯ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ 50 ಮಂದಿ ನಿರಾಶ್ರಿತರ ಆಶ್ರಯಕ್ಕೆ ಅನುಕೂಲವಾಗುವಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 100 ತಂಗುದಾಣಗಳನ್ನು ನಿರ್ವಹಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, 3986 ಮಂದಿ ವಸತಿ ರಹಿತರನ್ನು ಗುರುತಿಸಲಾಗಿದೆ. ಇವರಲ್ಲಿ ಮಹಿಳೆಯರು, ಮಕ್ಕಳು ಕೂಡ ಇದ್ದಾರೆ.
ನಾನಾ ಕಾರಣಗಳಿಂದ ಮನೆಯಿಂದ ಹೊರಬಿದ್ದವರು, ಹೊರ ಹಾಕಲ್ಪಟ್ಟವರು ಹೆದ್ದಾರಿಯಲ್ಲಿ ಲಾರಿ ಹಿಡಿದು ನಗರಕ್ಕೆ ಬಂದು ರೈಲು, ಬಸ್ ನಿಲ್ದಾಣ, ಸುರಂಗ ಮಾರ್ಗ, ಮೇಲ್ಸೇತುವೆ ಕೆಳಭಾಗ, ಪಾದಚಾರಿ ಮಾರ್ಗ, ದೇವಸ್ಥಾನದ ಆವರಣವನ್ನೇ ಮನೆಯಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸಹ ನಿಲ್ದಾಣಗಳನ್ನೇ ಆಶ್ರಯಿಸಿದ್ದಾರೆ. ಇವರಿಗೆ ರಾತ್ರಿ ತಂಗುದಾಣಗಳ ವ್ಯವಸ್ಥೆ ಮಾಡಲು ಪಾಲಿಕೆಯ ಖಾಲಿ ಕಟ್ಟಡಗಳು, ನಿವೇಶನಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಜ. 31ರೊಳಗೆ 10 ಕಡೆ ತಂಗುದಾಣಗಳ ವ್ಯವಸ್ಥೆ ಮಾಡುವ ಗುರಿ ಹೊಂದಲಾಗಿದೆ.
ರಾತ್ರಿ ತಂಗುದಾಣಗಳ ನಿರ್ಮಾಣಕ್ಕೆ ಖಾಲಿ ನಿವೇಶನ, ಕಟ್ಟಡಗಳನ್ನು ಗುರುತಿಸಲು ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಹಲವೆಡೆ ಜಾಗ ಗುರುತಿಸಲಾಗಿದೆ. ಸದ್ಯ 6 ಕಡೆ ರಾತ್ರಿ ತಂಗುದಾಣಗಳು ಕಾರ್ಯ ನಿರ್ವಹಿಸುತ್ತಿದ್ದು, 175 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
ನಿರ್ಗತಿಕರಿಗೆ ಉಚಿತ ಊಟ, ತಿಂಡಿ: ಇತ್ತೀಚೆಗೆ ಗೂಡ್ಸ್ ಶೆಡ್ ರಸ್ತೆಯಲ್ಲಿ ರಾತ್ರಿ ತಂಗುದಾಣದ ವ್ಯವಸ್ಥೆ ಮಾಡಿ, 75 ಮಂದಿಗೆ ಆಶ್ರಯ ನೀಡಲಾಗಿದೆ. ರಾತ್ರಿ ತಂಗುದಾಣಗಳಲ್ಲಿ ಆಶ್ರಯ ಪಡೆಯುವವರಿಗೆ ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಹಾಸಿಗೆ, ದಿಂಬು, ಟವೆಲ್, ಹೊದಿಕೆಯನ್ನೂ ನೀಡಲಾಗುತ್ತದೆ. ಅಲ್ಲದೇ ಇಂದಿರಾ ಕ್ಯಾಂಟೀನ್ಗಳಿಂದ ರಾತ್ರಿ ಊಟ ಮತ್ತು ಬೆಳಗ್ಗೆ ಉಚಿತವಾಗಿ ತಿಂಡಿ ನೀಡಲು ತೀರ್ಮಾನಿಸಲಾಗಿದೆ.
ಲೈಂಗಿಕ ಅಲ್ಪಸಂಖ್ಯಾತರಿಗೆ ನೆಲೆ: ನಗರದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಇವರಿಗೆ ಬಾಡಿಗೆಗೆ ಮನೆಗಳು ಸಿಗುವುದಿಲ್ಲ. ಸಿಕ್ಕರೂ ಬಾಡಿಗೆ ದುಬಾರಿ. ಹಾಗಾಗಿ, ಇವರಿಗೆ ಶಾಶ್ವತ ತಂಗುದಾಣಗಳನ್ನು ನಿರ್ಮಿಸಿ, ಕೌಶಲ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ 5 ಕೊಠಡಿಗಳ ಕೊಠಡಿಯೊಂದನ್ನು ಗುರುತಿಸಲಾಗಿದೆ. 3-4 ತಿಂಗಳ ಕಾಲ ವಾಸ್ತವ್ಯ ಕಲ್ಪಿಸಿ, ಉಚಿತ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಟೈಲರಿಂಗ್, ಕಂಪ್ಯೂಟರ್, ಫ್ಯಾಷನ್ ಡಿಸೈನಿಂಗ್, ಮೇಣದ ಬತ್ತಿ ತಯಾರಿಕೆ, ವಾಹನ ಚಾಲನಾ ತರಬೇತಿ ಕೊಟ್ಟು, ಸ್ವಾವಲಂಬಿ ಬದುಕು ಕಟ್ಟಿಕೊಡಲು ನಿರ್ಧರಿಸಲಾಗಿದೆ.
ಹಾಗೆಯೇ, ವಿಶೇಷ ಚೇತನರು ಮತ್ತು ವಯಸ್ಸಾದ ಲೈಂಗಿಕ ಕಾರ್ಯಕರ್ತರು, ವಯೋವೃದ್ಧ ಮಹಿಳೆಯರಿಗೂ ಶಾಶ್ವತ ತಂಗುದಾಣಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಸುಮನಹಳ್ಳಿ ಬಳಿ ಇರುವ ಸಮುದಾಯ ಭವನದಲ್ಲಿ 60 ವರ್ಷ ಮೇಲ್ಪಟ್ಟ ನಿರ್ಗತಿಕ ಮಹಿಳೆಯರಿಗೆ ಶಾಶ್ವತ ಆಶ್ರಯ ತಂಗುದಾಣದ ವ್ಯವಸ್ಥೆ ಮಾಡಲಾಗುತ್ತಿದೆ.
ನಿರ್ಮಾಣ, ನಿರ್ವಹಣೆಗೆ 2.50 ಕೋಟಿ ರೂ.: ರಾತ್ರಿ ತಂಗುದಾಣಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ 2.50 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸದಾಗಿ ರಾತ್ರಿ ತಂಗುದಾಣ ನಿರ್ಮಿಸಲು 50 ಲಕ್ಷ ರೂ., ದೊಮ್ಮಲೂರು, ಜಕ್ಕೂರು ವಾರ್ಡ್ನಲ್ಲಿ ಕೇಂದ್ರ ನಿರ್ಮಾಣಕ್ಕೆ ಕ್ರಮವಾಗಿ 75 ಮತ್ತು 77 ಲಕ್ಷ ರೂ. ನಿಗದಿಪಡಿಸಲಾಗಿದೆ. ಹಾಲಿ ಇರುವ 6 ಕೇಂದ್ರಗಳ ನಿರ್ವಹಣೆಗೆ ತಲಾ 8 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.
ಕಲಾಸಿಪಾಳ್ಯದ ಮಾರಮ್ಮ ದೇವಸ್ಥಾನದ 100 ಮಂದಿ ನಿತ್ಯ ರಾತ್ರಿ 100 ಮಂದಿ ಮಲಗುತ್ತಿದ್ದು, ಶುಲ್ಕ ತೆರುತ್ತಿದ್ದಾರೆ. ಈ ಶುಲ್ಕವನ್ನೇ ಪಾಲಿಕೆಯಿಂದಲೇ ಪಾವತಿಸಲಾಗುವುದು. ಶಾಂತಿನಗರದ ಆನೇಪಾಳ್ಯದಲ್ಲಿ ನೈಂಟಿಗೇಲ್ ಸಂಸ್ಥೆಯು ವಯೋವೃದ್ಧ ಮಹಿಳೆಯರಿಗೆ ಆಶ್ರಯ ನೀಡಲು ಮುಂದೆ ಬಂದಿದೆ.
-ಜಗದೀಶ್, ಉಪ ಆಯುಕ್ತರು (ಕಲ್ಯಾಣ), ಬಿಬಿಎಂಪಿ
ಸಮೀಕ್ಷೆ ವೇಳೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ರಾಜ್ಯದ ರಾಯಚೂರು, ಕಲಬುರ್ಗಿ, ಬಳ್ಳಾರಿ, ಬೀದರ್ ಸೇರಿದಂತೆ ಇತರೆ ಪ್ರದೇಶಗಳಿಂದ ವಲಸೆ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
-ಉದಯಕುಮಾರ್, ಸಂಚಾಲಕ, ಇಂಪ್ಯಾಕ್ಟ್ ಇಂಡಿಯಾ ಸಂಸ್ಥೆ