ಆ್ಯಪ್ನಗರ

3 ದಿನ ಬೆಡ್‌ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಕೊರೊನಾ ರೋಗಿ, ಕೊನೆಗೂ ಸಾವು!

48 ವರ್ಷದ ಕೊರೊನಾ ರೋಗಿಯೊಬ್ಬರು ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಮೂರು ದಿನಗಳು ಅಲೆದಾಡಿ ಕೊನೆಗೆ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಾವ ಆಸ್ಪತ್ರೆ ಕೂಡ ಗಂಡನನ್ನ ದಾಖಲಿಸಿಕೊಂಡಿಲ್ಲ ಎಂದು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Vijaya Karnataka Web 9 Jul 2020, 8:43 am
ಬೆಂಗಳೂರು: ಸದ್ಯ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಿಗೂ ಕೊರೊನಾ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲು ಅವಕಾಶ ನೀಡಿದೆ. ಅಲ್ಲದೇ ಎಲ್ಲೂ ಬೆಡ್‌ಗಳ ಕೊರತೆ ಇಲ್ಲ ಎಂದು ಹೇಳುತ್ತಲಿದೆ. ಈ ಮಧ್ಯೆಯೇ 48 ವರ್ಷದ ಕೊರೊನಾ ರೋಗಿಯೊಬ್ಬರು ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಮೂರು ದಿನಗಳು ಅಲೆದಾಡಿ ಕೊನೆಗೆ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Vijaya Karnataka Web 75984042


ನಗರದ ಡಿಜೆ ಹಳ್ಳಿಯ ಅಮೃತ್‌ ಲೇಔಟ್‌ನ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿತ್ತು. ಈ ಹಿನ್ನೆಲೆ ಅವರ ಪತ್ನಿ ಕಳೆದ ಮೂರು ದಿನಗಳಿಂದ ಆಸ್ಪತ್ರೆಗಳಿಗೆ ಸೇರಿಸಲು ಹರಸಾಹಸವೇ ಪಟ್ಟಿದ್ದಾರೆ. ನಗರದ ಹಲವು ಪ್ರಮುಖ ಆಸ್ಪತ್ರೆಗಳಿಗೆ ತೆರಳಿದ್ದಾರೆ. ಆದರೆ ಎಲ್ಲಾ ಕಡೆ ಬೆಡ್‌ ಇಲ್ಲ ಎಂಬ ಉತ್ತರ ಬರುತ್ತಿತ್ತು ಎಂದು ಸಾವನಪ್ಪಿದ ಕೊರೊನಾ ರೋಗಿಯ ಪತ್ನಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಹೋದಾಗ ಬೆಡ್‌ ಇಲ್ಲ ಎಂದು ಹೇಳಿ ದಾಖಲು ಮಾಡಿಕೊಳ್ಳುತ್ತಿರಲಿಲ್ಲ. ಅಲ್ಲದೇ ರೋಗಿಯ ಸ್ಥಿತಿ ಹೇಗಿದೆ ಅನ್ನುವುದನ್ನು ನೋಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಹೇಗೋ ಆಕಾಶ್‌ ಆಸ್ಪತ್ರೆಯಲ್ಲಿ ಬೆಡ್‌ ಇದೆ ಎಂದು ತಿಳಿದು ಅಲ್ಲಿ ಸೇರಿಸಿದೆ. ಆದರೆ ಜು.7ರ ರಾತ್ರಿ ಅವರ ಸಾವನಪ್ಪಿದ್ದರು ಎಂದು ಪತ್ನಿ ನೋವಿನಿಂದ ನುಡಿದಿದ್ದಾರೆ. ಇನ್ನು ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯೊಂದು ಬೆಡ್‌ ಇದೆ ಎಂದು ಕರೆಸಿಕೊಂಡಿತ್ತು. ನಂತರ ಅಲ್ಲಿಗೆ ಹೋದಾಗ ಬೆಡ್‌ ಇಲ್ಲ ಎಂದು ವಾಪಾಸ್‌ ಕಳುಹಿಸಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು: ಮಗಳಿಂದಲೇ ಅಂತ್ಯಸಂಸ್ಕಾರ

ಆಸ್ಪತ್ರೆಗೆ ತೆರಳಲು ವೆಂಟಿಲೇಟರ್‌ ಇರುವ ಅಂಬ್ಯುಲೆನ್ಸ್‌ ಕೂಡ ಯಾರು ನೀಡಿಲ್ಲ ಎಂದು ಸರಕಾರದ ವಿರುದ್ಧ ಪತ್ನಿ ಕಿಡಿಕಾರಿದ್ದಾರೆ. ಇನ್ನು ಮೃತರ ಪತ್ನಿಗೆ ಮೂರು ಹೆಣ್ಣುಮಕ್ಕಳು ಹಾಗೂ ಒಂದು ಗಂಡು ಮಗುವಿದೆ. ಎಲ್ಲರೂ 6-7 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕಾಶ್‌ ಮೆಡಿಕಲ್‌ ಸೈನ್ಸಸ್‌ನ ವೈದ್ಯರು, ನಮ್ಮಲ್ಲಿ ಬೆಡ್‌ಗಳಿಗೆ ಸಮಸ್ಯೆಯಿಲ್ಲ. ರೋಗಿಯನ್ನ ಕರೆದುಕೊಂಡು ಬಂದ ತಕ್ಷಣ ದಾಖಲು ಮಾಡಿಕೊಂಡು ಚಿಕಿತ್ಸೆ ಆರಂಭಿಸಿದೆವು. ಆದರೆ ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ಮರಣ ಹೊಂದಿದರು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ