ಆ್ಯಪ್ನಗರ

ಬಿಬಿಎಂಪಿ ನೌಕರರ ಸಂಘದ ವತಿಯಿಂದ ಉಚಿತವಾಗಿ 501 ಮಣ್ಣಿನ ಗಣೇಶ ಮೂರ್ತಿ ವಿತರಣೆ

ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉಚಿತವಾಗಿ 501 ಮಣ್ಣಿನ ಗಣೇಶ ಮೂರ್ತಿ ವಿಚರಿಸಲಾಯಿತು.

Vijaya Karnataka Web 1 Sep 2019, 5:35 pm
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪರಿಸರ ಜಾಗೃತಿ ರಸ್ತೆ ಓಟ, ಪರಿಸರ ಸ್ಮೇಹಿ ಬೀದಿ ನಾಟಕ ಹಾಗೂ ಉಚಿತವಾಗಿ 501 ಮಣ್ಣಿನ ಗಣೇಶ ವಿತರಣೆ ಕಾರ್ಯಕ್ರಮವನ್ನು ಮಹಾಪೌರರಾದ ಗಂಗಾಬಿಕೆ, ಉಪಮಹಾಪೌರರಾದ ಭದ್ರೇಗೌಡ, ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್, ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಮತ್ತು ಅಧ್ಯಕ್ಷರಾದ ಅಮೃತ್ ರಾಜ್, ಪ್ರಧಾನ ಕಾರ್ಯದರ್ಶಿ ನಲ್ಲಪ್ಪ , ಹೆಚ್.ವಿ. ಅಶ್ವತ್ಥ ಅವರು ಉದ್ಘಾಟನೆ ಮಾಡಿದರು.
Vijaya Karnataka Web ganesh idol


ಪರಿಸರ ರಕ್ಷಣೆ ಮತ್ತು ಪರಿಸರ ಸ್ಮೇಹಿ ಗಣಪತಿ ಪ್ರತಿಷ್ಟಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು "ಗೆಜ್ಜೆ ಹೆಜ್ಜೆ"ತಂಡದವರಿಂದ ಬೀದಿ ನಾಟಕ ಮತ್ತು ಪರಿಸರ ಜಾಗೃತಿಗಾಗಿ ರಸ್ತೆ ಓಟ, ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿ ವಿತರಣೆ ಮಾಡಲಾಯಿತು.


ಉದ್ಘಾಟನೆ ಮಾಡಿ ಮಾತನಾಡಿದ ಮಹಾಪೌರರಾದ ಶ್ರೀಮತಿ ಗಂಗಾಬಿಕೆ ರವರು ಗಣೇಶ ಹಬ್ಬವನ್ನು ಅಚರಣೆ ಮಾಡುವ ವಿಧಾನ ಹೇಗೆ ಅಚರಿಸಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬವನ್ನು ಅಚರಿಸಬೇಕು ಎಂಬ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. 2016ರಲ್ಲಿ ಪರಿಸರ ಮಾಲಿನ್ಯ ಮಂಡಳಿಯಿಂದ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮತ್ತು ವಿಸರ್ಜನೆಯನ್ನು ನಿಷೇಧಿಸಲಾಗಿದೆ. ನಮ್ಮ ಪೂರ್ವಜರು ಬಿಟ್ಟು ಅಮೂಲ್ಯ ಪರಿಸರ ಸಂಪತ್ತುನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು.


ತದನಂತರ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ರವರು ಮಾತನಾಡಿ ಗೌರಿ ಗಣೇಶ ಹಬ್ಬವನ್ನು ಪರಿಸರ ಪ್ರೇಮ , ಪರಿಸರ ಸ್ಮೇಹದಿಂದ ಮತ್ತು ಜಾಗೂರುಕರಾಗಿ ಅಚರಣೆ ಮಾಡಿ ಎಂದು ಮನವಿ ಮಾಡಿದರು.

ಬೆಂಗಳೂರಿನ ಹಲವಾರು ಗಣೇಶ ವಿಸರ್ಜನೆ ಅವಕಾಶ ಮಾಡಿಕೊಡಲಾಗಿದೆ ,ಅಲ್ಲಿ ದೀಪಾದ ವ್ಯವಸ್ತೆ ,ಸಿ.ಸಿ.ಕ್ಯಾಮರ ಹಾಗೂ ಈಜುಗಾರರು ಇರುತ್ತಾರೆ ಮಹಿಳೆಯರು, ಯುವಕರು, ಮಕ್ಕಳು ಅವರ ಸಹಾಯ ಪಡೆದು ವಿಸರ್ಜನೆ ಮಾಡಬೇಕೆಂದು ಕೋರಿದರು.


ಉಪಮಹಾಪೌರರಾದ ಭದ್ರೇಗೌಡರು ಮಾತನಾಡಿ ಪರಿಸರ ಉಳಿವಿಗಾಗಿ ಪರಿಸರ ಸ್ಮೇಹಿ ಗಣೇಶ ಹಬ್ಬ ಅಚರಣೆ ಮಾಡೋಣ, ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸೋಣ ಎಂಬ ಸಂದೇಶ ಸಾರಿದರು.

ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಮಾತನಾಡಿ, ಪಿಒಪಿ ಗಣೇಶ ಮೂರ್ತಿಯ ಬದಲು ಪರಿಸರ ಸ್ಮೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಿ ಮುಂದಿನ ಪೀಳಿಗೆ ಪರಿಸರ ಉಳಿಸೋಣ ಎಂದು ಹೇಳಿದರು.

ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಡಿ.ಗಂಗಾದರ್ ,ಡಿ.ರಾಮಚಂದ್ರ ,ಕೆ.ಮಂಜೇಗೌಡ ,ಹೆಚ್.ನಂಜಪ್ಪ,ಕೆ.ನರಸಿಂಹ ,ಸಂತೋಷ್ ಕುಮಾರ್ ನಾಯಕ್ ,ರೇಣುಕಾ ರವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ