ಆ್ಯಪ್ನಗರ

ಲಾಲ್‌ಬಾಗ್‌ ದುರಂತ: ಈಡೇರದ ವಿಕ್ರಮ್‌ ಪೋಷಕರ ಆಸೆ

ಲಾಲ್‌ಬಾಗ್‌ನಲ್ಲಿ ಅಲಂಕಾರಿಕ ಕಲ್ಲು ತಲೆ ಮೇಲೆ ಬಿದ್ದು ಮೃತಪಟ್ಟ ವಿಕ್ರಮ್‌ನ ಅಂಗಾಂಗ ದಾನ ಮಾಡಬೇಕು ಎನ್ನುವ ಪೋಷಕರ ಆಸೆ ಕೊನೆಗೂ ಈಡೇರದೇ ಆತನ ...

ವಿಕ ಸುದ್ದಿಲೋಕ 28 Dec 2016, 11:17 am

ಬೆಂಗಳೂರು:ಲಾಲ್‌ಬಾಗ್‌ನಲ್ಲಿ ಅಲಂಕಾರಿಕ ಕಲ್ಲು ತಲೆ ಮೇಲೆ ಬಿದ್ದು ಮೃತಪಟ್ಟ ವಿಕ್ರಮ್‌ನ ಅಂಗಾಂಗ ದಾನ ಮಾಡಬೇಕು ಎನ್ನುವ ಪೋಷಕರ ಆಸೆ ಕೊನೆಗೂ ಈಡೇರದೇ ಆತನ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Vijaya Karnataka Web 6 year old vikram dies while posing for a photo at lalbagh
ಲಾಲ್‌ಬಾಗ್‌ ದುರಂತ: ಈಡೇರದ ವಿಕ್ರಮ್‌ ಪೋಷಕರ ಆಸೆ

ತಮ್ಮ ಮಗನ ಅಂಗಾಂಗ ದಾನ ಮಾಡಲು ಇಚ್ಚಿಸಿರುವುದಾಗಿ ಪೋಷಕರು ಹೇಳಿದ್ದರು. ಆದರೆ ತಲೆ ಮೇಲೆ ಕಲ್ಲು ಬಿದ್ದಿದ್ದರಿಂದ ಕಣ್ಣುಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ, ಅಲ್ಲದೆ, ಉಳಿದ ಅಂಗಗಳನ್ನು ತೆಗೆಯುವ ಸಮಯ ಮೀರಿದ್ದರಿಂದ ಅಂಗಾಂಗ ದಾನ ಇಲ್ಲದೆಯೇ ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸಿದರು.

ಮೃತದೇಹದ ಶವಪರೀಕ್ಷೆ ನೆರವೇರಿಸಿದ ಕಿಮ್ಸ್‌ ಆಸ್ಪತ್ರೆ ವೈದ್ಯರು ಮಂಗಳವಾರ ಮಧ್ಯಾಹ್ನದ ವೇಳೆಗೆ ಪೋಷಕರಿಗೆ ಮರಳಿಸಿದ್ದರು. ಮನೆ ಮುಂದೆ ಕೆಲಹೊತ್ತು ಸ್ಥಳೀಯರ ದರ್ಶನಕ್ಕೆ ಇಟ್ಟ ನಂತರ ಸಂಜೆವೇಳೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ