ಆ್ಯಪ್ನಗರ

ಮೆಡಿಸನ್‌ ಸಪ್ಲೈ ಗುತ್ತಿಗೆ ಕೊಡಿಸುವುದಾಗಿ 8.36 ಲಕ್ಷ ರೂ. ಪಡೆದು ಮೋಸ

ಸ್ಮಾರ್ಟ್‌ ಸಿಟಿ ಮತ್ತು ನಗರಾಭಿವೃದ್ಧಿ ಇಲಾಖೆ ಯೋಜನೆಯಡಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳಿಗೆ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡುವ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಮೆಡಿಕಲ್‌ ಶಾಪ್‌ ಮಾಲೀಕನಿಗೆ 8.36 ಲಕ್ಷ ರೂ. ವಂಚಿಸಿದ ಪ್ರಕರಣ ನಡೆದಿದೆ.

Vijaya Karnataka 15 Mar 2019, 5:00 am
ಬೆಂಗಳೂರು: ಸ್ಮಾರ್ಟ್‌ ಸಿಟಿ ಮತ್ತು ನಗರಾಭಿವೃದ್ಧಿ ಇಲಾಖೆ ಯೋಜನೆಯಡಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳಿಗೆ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡುವ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಮೆಡಿಕಲ್‌ ಶಾಪ್‌ ಮಾಲೀಕನಿಗೆ 8.36 ಲಕ್ಷ ರೂ. ವಂಚಿಸಿದ ಪ್ರಕರಣ ನಡೆದಿದೆ.
Vijaya Karnataka Web 8 36 lakh cheating
ಮೆಡಿಸನ್‌ ಸಪ್ಲೈ ಗುತ್ತಿಗೆ ಕೊಡಿಸುವುದಾಗಿ 8.36 ಲಕ್ಷ ರೂ. ಪಡೆದು ಮೋಸ


ಬನಶಂಕರಿ 2ನೇ ಹಂತದ ನಿವಾಸಿ ಮನೀಷ್‌ ವಂಚನೆಗೆ ಒಳಗಾದವರು. ಈ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಗೆ ಮಾ.13ರಂದು ದೂರು ನೀಡಿದ್ದಾರೆ.

''ಸ್ನೇಹಿತ ಕುಮಾರ್‌ ಜೊತೆ ಸೇರಿ ಕಳೆದ ಒಂದು ವರ್ಷದಿಂದ ಲೈಫ್‌ ಕೇರ್‌ ಮೆಡಿಕಲ್‌ ಶಾಪ್‌ ನಡೆಸುತ್ತಿದ್ದೇನೆ. ಆಗಾಗ ಶಾಪ್‌ಗೆ ಬರುತ್ತಿದ್ದ ರಾಜೇಶ್‌, ಸತ್ಯಭಾಮ, ಅನುರಾಗ್‌ ಮತ್ತು ಚಂದನಾ ಎಂಬುವರು ಪರಿಚಯವಾಗಿದ್ದರು. ಈ ವೇಳೆ ತಾವು ಸ್ಮಾರ್ಟ್‌ ಸಿಟಿ ಮತ್ತು ಅರ್ಬನ್‌ ಡೆವಲಪ್‌ಮೆಂಟ್‌ ಯೋಜನೆ ನಡೆಸುತ್ತಿದ್ದೇವೆ. ಅಲ್ಲಿ 4 ಸಾವಿರ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಬೇಕಾಗಿದೆ. ಅದರ ಗುತ್ತಿಗೆಯನ್ನು ನಿಮಗೆ ಕೊಡಿಸುತ್ತೇವೆ ಎಂದು ನಂಬಿಸಿದ್ದರು'' ಎಂದು ದೂರಿನಲ್ಲಿ ಮನೀಷ್‌ ವಿವರಿಸಿದ್ದಾರೆ.

''2019ರ ಜ.5ರಂದು 22 ಸಾವಿರ ರೂ. ಚೆಕ್‌, ಜ.7ರಂದು 3.60 ಲಕ್ಷ ರೂ. ಮತ್ತು 1.40 ಲಕ್ಷ ರೂ.ಗಳನ್ನು ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದೆ. ನಂತರ ಅಗ್ರಿಮೆಂಟ್‌ ಮಾಡಿಕೊಳ್ಳಬೇಕು ಎಂದು ಹೇಳಿ ವಿವಿಧ ಹಂತಗಳಲ್ಲಿ ಹಣ ಪಡೆದರು. ಕೆಲ ದಿನಗಳ ನಂತರ ನಿಮ್ಮ ಹೆಸರಿಗೆ ಗುತ್ತಿಗೆ ಸಿಕ್ಕಿದೆ. ಬ್ಯಾಂಕ್‌ ಖಾತೆ ತೆರೆಯಬೇಕಿದೆ ಎಂದು ಹೇಳಿ ಮತ್ತೆ ಹಣವನ್ನು ಡಿಡಿ ಮೂಲಕ ಪಡೆದರು. ವಿವಿಧ ಹಂತಗಳಲ್ಲಿ ಒಟ್ಟು 8.36 ಲಕ್ಷ ರೂ. ಪಡೆದು ಯಾವುದೇ ಗುತ್ತಿಗೆ ಕೊಡಿಸದೆ, ಕೊಟ್ಟ ಹಣವನ್ನು ಮರಳಿಸದೆ ಮೋಸ ಮಾಡಿದ್ದಾರೆ'' ಎಂದು ಮನೀಷ್‌ ಆರೋಪಿದ್ದಾರೆ.

ವಂಚನೆ ಕೇಸ್‌ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬನಶಂಕರಿ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ