ವಿಕ ಸುದ್ದಿಲೋಕ ಬೆಂಗಳೂರು
ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳ ಸಂಸದರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ 60 ಕೋಟಿ ರೂ. ಪೈಕಿ 55.53 ಕೋಟಿ ರೂ. (ಶೇ.92) ಬಳಕೆಯಾಗಿದೆ. ಉತ್ತರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಖರ್ಚಾಗಿದೆ. ಈ ಕುರಿತ ವಿವರಗಳನ್ನು ಬಿ-ಪ್ಯಾಕ್ ಪ್ರಕಟಿಸಿದ್ದು, ಮತದಾರರು ಇವುಗಳ ಕಡೆಗೆ ಗಮನಹರಿಸಬೇಕು ಎಂದು ಮನವಿ ಮಾಡಿದೆ.
ಪ್ರತಿ ಕ್ಷೇತ್ರಕ್ಕೆ ವರ್ಷಕ್ಕೆ 5 ಕೋಟಿ ರೂ.ನಂತೆ ಮೂರು ಕ್ಷೇತ್ರಗಳ ಸಂಸದರ ನಿಧಿಗೆ ನಾಲ್ಕು ವರ್ಷಗಳಲ್ಲಿ ಒಟ್ಟು 60 ಕೋಟಿ ರೂ. ಮೀಸಲಿಡಲಾಗಿತ್ತು. ಪ್ರತಿ ಕ್ಷೇತ್ರಕ್ಕೆ ನಾಲ್ಕು ವರ್ಷಗಳಲ್ಲಿ 20 ಕೋಟಿ ರೂ. ದೊರೆತಿದೆ. ಇದರಲ್ಲಿ ಉತ್ತರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಬಳಕೆಯಾಗಿದೆ. ದಕ್ಷಿಣದಲ್ಲಿ ಶೇ.82 ಹಾಗೂ ಕೇಂದ್ರದಲ್ಲಿ ಶೇ.95 ರಷ್ಟು ಅನುದಾನ ಬಳಕೆಯಾಗಿದೆ. ರಾಜ್ಯ ಸರಕಾರದ ಮೂಲಗಳಿಂದ ಈ ಮಾಹಿತಿ ಪಡೆದಿದ್ದು, ಈ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಬಿ-ಪ್ಯಾಕ್ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.61 ರಷ್ಟು ನಿಧಿ ಹಾಗೂ ಹೊರ ವಲಯಗಳಲ್ಲಿ ಶೇ.39 ರಷ್ಟು ನಿಧಿ ಬಳಕೆಯಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಶೇ.25.98, ರಸ್ತೆ ಮೊದಲಾದ ಮೂಲಸೌಕರ್ಯ ಅಭಿವೃದ್ಧಿಗೆ ಶೇ.12.62, ಸಾರ್ವಜನಿಕ ಸೌಲಭ್ಯಗಳಿಗೆ ಶೇ.10.78 ರಷ್ಟು ಅನುದಾನ ಬಳಕೆಯಾಗಿದೆ. ಕೇಂದ್ರ ಕ್ಷೇತ್ರದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಶೇ.28 ರಷ್ಟು, ದಕ್ಷಿಣದಲ್ಲಿ ಬಸವನಗುಡಿಗೆ ಶೇ.25 ಹಾಗೂ ಉತ್ತರದ ಹೆಬ್ಬಾಳದಲ್ಲಿ ಶೇ.13 ರಷ್ಟು ಅನುದಾನ ಬಳಕೆಯಾಗಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ-ಪ್ಯಾಕ್ ಸಿಇಒ ರೇವತಿ ಅಶೋಕ್, ''ಚುನಾವಣೆಗೆ ಮುನ್ನ ಸಂಸದರು ಏನು ಕೆಲಸ ಮಾಡಿದ್ದಾರೆಂದು ರಾಜ್ಯ ಸರಕಾರ ಪ್ರಕಟಣೆ ಹೊರಡಿಸಿ ಜನರಿಗೆ ಮಾಹಿತಿ ನೀಡಬೇಕು. ಆದರೆ ಸರಕಾರ ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಹೀಗಾಗಿ ಸಂಸ್ಥೆಯಿಂದಲೇ ಮಾಹಿತಿ ಪಡೆದುಕೊಂಡು ಯಾವ ಕ್ಷೇತ್ರದಲ್ಲಿ ಎಷ್ಟು ಅನುದಾನ ಬಳಕೆಯಾಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಸಂಸ್ಥೆಯ ಘ್ಕಿhಠಿಠಿps://ಚಿpa್ಚ.ಜ್ಞಿ ನಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ,'' ಎಂದು ತಿಳಿಸಿದರು.
ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಹಾಜರಿದ್ದರು.
ಉತ್ತರ ಲೋಕಸಭಾ ಕ್ಷೇತ್ರ (ಶೇ.100 ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-20.04 ಕೋಟಿ ರೂ. (ಹೆಚ್ಚುವರಿ)
ನೀರು ಸರಬರಾಜು-6.36 ಕೋಟಿ ರೂ.
ಶಿಶು ಹಾಗೂ ಮಹಿಳಾ ಅಭಿವೃದ್ಧಿ-86 ಲಕ್ಷ ರೂ.
ಮಲ್ಲೇಶ್ವರದಲ್ಲಿ ವಾಲಿಬಾಲ್, ಬಾಸ್ಕೆಟ್ಬಾಲ್ ಕ್ರೀಡಾಂಗಣ-2.15 ಕೋಟಿ ರೂ.
ಆರ್ಸಿಸಿ ಚರಂಡಿ, ರಸ್ತೆ-70 ಲಕ್ಷ ರೂ.
ಕ್ರೀಡೆ, ಯುವಜನಸೇವೆ-2.76 ಕೋಟಿ ರೂ.
ಮೂಲಸೌಕರ್ಯ-6.15 ಕೋಟಿ ರೂ.
ಕೇಂದ್ರ ಲೋಕಸಭಾ ಕ್ಷೇತ್ರ (ಶೇ.95ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-19.05 ಕೋಟಿ ರೂ.
ನೀರು ಸರಬರಾಜು-2.94 ಕೋಟಿ ರೂ.
ರೈಲ್ವೆ ಮೂಲಸೌಕರ್ಯ-2.86 ಕೋಟಿ ರೂ.
ವಾಣಿವಿಲಾಸ, ವಿಕ್ಟೋರಿಯ ಆಸ್ಪತ್ರೆಗಳಿಗೆ ಸಲಕರಣೆ-3.86 ಕೋಟಿ ರೂ.
ಐಟಿಪಿಎಲ್ ಬಳಿ ತಂಗುದಾಣ, ಕಾಲುದಾರಿ ಸೇತುವೆ-2.86 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ-3.73 ಕೋಟಿ ರೂ.
ಶಿಶು ಹಾಗೂ ಮಹಿಳಾ ಅಭಿವೃದ್ಧಿ-1.76 ಕೋಟಿ ರೂ.
ದಕ್ಷಿಣ ಲೋಕಸಭಾ ಕ್ಷೇತ್ರ (ಶೇ.82 ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-16.44 ಕೋಟಿ ರೂ.
ನೀರು ಸರಬರಾಜು-5.13 ಕೋಟಿ ರೂ.
ಶಿಕ್ಷಣ-1.68 ಕೋಟಿ ರೂ.
ವಿವಿಧೋದ್ದೇಶ ಸಭಾಂಗಣಗಳ ನಿರ್ಮಾಣ-1.75 ಕೋಟಿ ರೂ.
ವಿಜಯನಗರದಲ್ಲಿ ಕೃಷ್ಣದೇವರಾಯ ತಂಗುದಾಣ-70 ಲಕ್ಷ ರೂ.
ಟ್ರಸ್ಟ್ ಹಾಗೂ ಸಂಸ್ಥೆಗಳು-2.10 ಕೋಟಿ ರೂ.
ಯೋಗಕೇಂದ್ರ-1.22 ಕೋಟಿ ರೂ.
ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳ ಸಂಸದರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿಟ್ಟ 60 ಕೋಟಿ ರೂ. ಪೈಕಿ 55.53 ಕೋಟಿ ರೂ. (ಶೇ.92) ಬಳಕೆಯಾಗಿದೆ. ಉತ್ತರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಖರ್ಚಾಗಿದೆ. ಈ ಕುರಿತ ವಿವರಗಳನ್ನು ಬಿ-ಪ್ಯಾಕ್ ಪ್ರಕಟಿಸಿದ್ದು, ಮತದಾರರು ಇವುಗಳ ಕಡೆಗೆ ಗಮನಹರಿಸಬೇಕು ಎಂದು ಮನವಿ ಮಾಡಿದೆ.
ಪ್ರತಿ ಕ್ಷೇತ್ರಕ್ಕೆ ವರ್ಷಕ್ಕೆ 5 ಕೋಟಿ ರೂ.ನಂತೆ ಮೂರು ಕ್ಷೇತ್ರಗಳ ಸಂಸದರ ನಿಧಿಗೆ ನಾಲ್ಕು ವರ್ಷಗಳಲ್ಲಿ ಒಟ್ಟು 60 ಕೋಟಿ ರೂ. ಮೀಸಲಿಡಲಾಗಿತ್ತು. ಪ್ರತಿ ಕ್ಷೇತ್ರಕ್ಕೆ ನಾಲ್ಕು ವರ್ಷಗಳಲ್ಲಿ 20 ಕೋಟಿ ರೂ. ದೊರೆತಿದೆ. ಇದರಲ್ಲಿ ಉತ್ತರ ಕ್ಷೇತ್ರದಲ್ಲಿ ಮಾತ್ರ ಅನುದಾನ ಸಂಪೂರ್ಣವಾಗಿ ಬಳಕೆಯಾಗಿದೆ. ದಕ್ಷಿಣದಲ್ಲಿ ಶೇ.82 ಹಾಗೂ ಕೇಂದ್ರದಲ್ಲಿ ಶೇ.95 ರಷ್ಟು ಅನುದಾನ ಬಳಕೆಯಾಗಿದೆ. ರಾಜ್ಯ ಸರಕಾರದ ಮೂಲಗಳಿಂದ ಈ ಮಾಹಿತಿ ಪಡೆದಿದ್ದು, ಈ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಬಿ-ಪ್ಯಾಕ್ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.61 ರಷ್ಟು ನಿಧಿ ಹಾಗೂ ಹೊರ ವಲಯಗಳಲ್ಲಿ ಶೇ.39 ರಷ್ಟು ನಿಧಿ ಬಳಕೆಯಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಶೇ.25.98, ರಸ್ತೆ ಮೊದಲಾದ ಮೂಲಸೌಕರ್ಯ ಅಭಿವೃದ್ಧಿಗೆ ಶೇ.12.62, ಸಾರ್ವಜನಿಕ ಸೌಲಭ್ಯಗಳಿಗೆ ಶೇ.10.78 ರಷ್ಟು ಅನುದಾನ ಬಳಕೆಯಾಗಿದೆ. ಕೇಂದ್ರ ಕ್ಷೇತ್ರದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಶೇ.28 ರಷ್ಟು, ದಕ್ಷಿಣದಲ್ಲಿ ಬಸವನಗುಡಿಗೆ ಶೇ.25 ಹಾಗೂ ಉತ್ತರದ ಹೆಬ್ಬಾಳದಲ್ಲಿ ಶೇ.13 ರಷ್ಟು ಅನುದಾನ ಬಳಕೆಯಾಗಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ-ಪ್ಯಾಕ್ ಸಿಇಒ ರೇವತಿ ಅಶೋಕ್, ''ಚುನಾವಣೆಗೆ ಮುನ್ನ ಸಂಸದರು ಏನು ಕೆಲಸ ಮಾಡಿದ್ದಾರೆಂದು ರಾಜ್ಯ ಸರಕಾರ ಪ್ರಕಟಣೆ ಹೊರಡಿಸಿ ಜನರಿಗೆ ಮಾಹಿತಿ ನೀಡಬೇಕು. ಆದರೆ ಸರಕಾರ ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಹೀಗಾಗಿ ಸಂಸ್ಥೆಯಿಂದಲೇ ಮಾಹಿತಿ ಪಡೆದುಕೊಂಡು ಯಾವ ಕ್ಷೇತ್ರದಲ್ಲಿ ಎಷ್ಟು ಅನುದಾನ ಬಳಕೆಯಾಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಸಂಸ್ಥೆಯ ಘ್ಕಿhಠಿಠಿps://ಚಿpa್ಚ.ಜ್ಞಿ ನಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ,'' ಎಂದು ತಿಳಿಸಿದರು.
ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಹಾಜರಿದ್ದರು.
ಉತ್ತರ ಲೋಕಸಭಾ ಕ್ಷೇತ್ರ (ಶೇ.100 ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-20.04 ಕೋಟಿ ರೂ. (ಹೆಚ್ಚುವರಿ)
ನೀರು ಸರಬರಾಜು-6.36 ಕೋಟಿ ರೂ.
ಶಿಶು ಹಾಗೂ ಮಹಿಳಾ ಅಭಿವೃದ್ಧಿ-86 ಲಕ್ಷ ರೂ.
ಮಲ್ಲೇಶ್ವರದಲ್ಲಿ ವಾಲಿಬಾಲ್, ಬಾಸ್ಕೆಟ್ಬಾಲ್ ಕ್ರೀಡಾಂಗಣ-2.15 ಕೋಟಿ ರೂ.
ಆರ್ಸಿಸಿ ಚರಂಡಿ, ರಸ್ತೆ-70 ಲಕ್ಷ ರೂ.
ಕ್ರೀಡೆ, ಯುವಜನಸೇವೆ-2.76 ಕೋಟಿ ರೂ.
ಮೂಲಸೌಕರ್ಯ-6.15 ಕೋಟಿ ರೂ.
ಕೇಂದ್ರ ಲೋಕಸಭಾ ಕ್ಷೇತ್ರ (ಶೇ.95ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-19.05 ಕೋಟಿ ರೂ.
ನೀರು ಸರಬರಾಜು-2.94 ಕೋಟಿ ರೂ.
ರೈಲ್ವೆ ಮೂಲಸೌಕರ್ಯ-2.86 ಕೋಟಿ ರೂ.
ವಾಣಿವಿಲಾಸ, ವಿಕ್ಟೋರಿಯ ಆಸ್ಪತ್ರೆಗಳಿಗೆ ಸಲಕರಣೆ-3.86 ಕೋಟಿ ರೂ.
ಐಟಿಪಿಎಲ್ ಬಳಿ ತಂಗುದಾಣ, ಕಾಲುದಾರಿ ಸೇತುವೆ-2.86 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ-3.73 ಕೋಟಿ ರೂ.
ಶಿಶು ಹಾಗೂ ಮಹಿಳಾ ಅಭಿವೃದ್ಧಿ-1.76 ಕೋಟಿ ರೂ.
ದಕ್ಷಿಣ ಲೋಕಸಭಾ ಕ್ಷೇತ್ರ (ಶೇ.82 ರಷ್ಟು ಬಳಕೆ)
ದೊರೆತ ಅನುದಾನ-20 ಕೋಟಿ ರೂ.
ಬಳಕೆಯಾದ ಅನುದಾನ-16.44 ಕೋಟಿ ರೂ.
ನೀರು ಸರಬರಾಜು-5.13 ಕೋಟಿ ರೂ.
ಶಿಕ್ಷಣ-1.68 ಕೋಟಿ ರೂ.
ವಿವಿಧೋದ್ದೇಶ ಸಭಾಂಗಣಗಳ ನಿರ್ಮಾಣ-1.75 ಕೋಟಿ ರೂ.
ವಿಜಯನಗರದಲ್ಲಿ ಕೃಷ್ಣದೇವರಾಯ ತಂಗುದಾಣ-70 ಲಕ್ಷ ರೂ.
ಟ್ರಸ್ಟ್ ಹಾಗೂ ಸಂಸ್ಥೆಗಳು-2.10 ಕೋಟಿ ರೂ.
ಯೋಗಕೇಂದ್ರ-1.22 ಕೋಟಿ ರೂ.