ಆ್ಯಪ್ನಗರ

ಗೃಹ ಸಚಿವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ, ಬಿಜೆಪಿ ಮುಖಂಡನ ಬಂಧನ

ಆರೋಪಿ ತನಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಎಲ್ಲ ಸಚಿವರು, ಬಿಜೆಪಿ ಮುಖಂಡರು ಪರಿಚಯವಿದ್ದಾರೆ ಎಂದು, ಅವರೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ‘ಪೊಲೀಸರಿಂದ ಆಗಾಗ್ಗೆ ತೊಂದರೆಯಾಗುತ್ತಿದೆ. ನೀವು ಮನಸ್ಸು ಮಾಡಿದರೆ ನಾನು ನಿಮಗೆ ಯಾರಿಂದಲೂ ತೊಂದರೆಯಾಗದ ರೀತಿಯಲ್ಲಿ ಬಾರ್‌ಗಳನ್ನು ನಡೆಸಿಕೊಂಡು ಹೋಗುವಂತೆ ಅವಕಾಶ ಕಲ್ಪಿಸುತ್ತೇನೆ. ಅದಕ್ಕಾಗಿ 1.25 ಕೋಟಿ ರೂ. ಕೊಟ್ಟರೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇನೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ.

Vijaya Karnataka 5 Nov 2021, 7:03 am
ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದ ಬಿಜೆಪಿ ಮುಖಂಡನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Vijaya Karnataka Web bhavani rao more


ಶಿವಮೊಗ್ಗ ಮೂಲದ ಭವಾನಿ ರಾವ್‌ ಮೋರೆ(37) ಬಂಧಿತ ಆರೋಪಿಯಾಗಿದ್ದು, ಈತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವಿಸ್ತಾರಕ ಕೂಡ ಆಗಿದ್ದ. ಆರೋಪಿಯು ವಿಜಯನಗರ ನಿವಾಸಿ ಹಾಗೂ ಕರ್ನಾಟಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಓನರ್ಸ್‌ ವಿಮೆನ್‌ ಎಂಪ್ಲಾಯೀಸ್‌ ಸರ್ವಿಸ್‌ ಅಸೋಸಿಯೇಷನ್‌ ಜಂಟಿ ಕಾರ್ಯದರ್ಶಿ ಸುರೇಶ್‌ ಎಂಬವರಿಗೆ 25 ಲಕ್ಷ ರೂ. ವಂಚಿಸಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಿಟ್‌ ಕಾಯಿನ್‌ ದಂಧೆ ಪ್ರಕರಣದಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ; ಆರಗ ಜ್ಞಾನೇಂದ್ರ
ಇತ್ತೀಚೆಗೆ ನಗರದಲ್ಲಿರುವ ಲೇಡಿಸ್‌ ಸರ್ವಿಸ್‌ ಬಾರ್‌ಗಳನ್ನು ಮುಚ್ಚುವಂತೆ ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದು, ಎರಡು ದಿನಗಳ ಕಾಲ ಬಾರ್‌ಗಳನ್ನು ಮುಚ್ಚಲಾಗಿತ್ತು. ಈ ಮಧ್ಯೆ ಆರೋಪಿ, ಸುರೇಶ್‌ ಬಗ್ಗೆ ತಿಳಿದುಕೊಂಡು, ಅ. 23 ರಂದು ರೆಸಿಡೆನ್ಸಿ ರಸ್ತೆಯಲ್ಲಿರುವ ಸುರೇಶ್‌ ಅವರ ಬಾರ್‌ಗೆ ತೆರಳಿದ್ದಾನೆ. ಆಗ ಆರೋಪಿ, ತಾನು ಶಿವಮೊಗ್ಗ ಮೂಲದ ಬಿಜೆಪಿ ಮುಖಂಡನಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಎಲ್ಲ ಸಚಿವರು, ಬಿಜೆಪಿ ಮುಖಂಡರು ಪರಿಚಯವಿದ್ದಾರೆ ಎಂದು, ಅವರೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ‘ಪೊಲೀಸರಿಂದ ಆಗಾಗ್ಗೆ ತೊಂದರೆಯಾಗುತ್ತಿದೆ. ನೀವು ಮನಸ್ಸು ಮಾಡಿದರೆ ನಾನು ನಿಮಗೆ ಯಾರಿಂದಲೂ ತೊಂದರೆಯಾಗದ ರೀತಿಯಲ್ಲಿ ಬಾರ್‌ಗಳನ್ನು ನಡೆಸಿಕೊಂಡು ಹೋಗುವಂತೆ ಅವಕಾಶ ಕಲ್ಪಿಸುತ್ತೇನೆ. ಅದಕ್ಕಾಗಿ 1.25 ಕೋಟಿ ರೂ. ಕೊಟ್ಟರೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇನೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ.
ಕಳ್ಳತನವಾದ ₹64.55 ಲಕ್ಷ ಮೌಲ್ಯದ ವಸ್ತುಗಳನ್ನು ಹಸ್ತಾಂತರ ಮಾಡಿದ ಗದಗ ಪೊಲೀಸರು
ಅಲ್ಲದೇ, ಅಸೋಸಿಯೇಷನ್‌ ಜತೆ ಚರ್ಚಿಸಿ ತಿಳಿಸಿ ಎಂದು ಸಲಹೆ ಕೂಡ ನೀಡಿದ್ದ ಎಂದು ಸುರೇಶ್‌ ದೂರಿನಲ್ಲಿ ತಿಳಿಸಿದ್ದಾರೆ. ಆನಂತರ ಸುರೇಶ್‌ ಅಸೋಸಿಯೇಷನ್‌ನ 44 ಮಂದಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಒಟ್ಟು 1.25 ಕೋಟಿ ರೂ.ಗಳನ್ನು ಯುಬಿ ಸಿಟಿಯಲ್ಲಿರುವ ಓಕ್‌ವುಡ್‌ ಹೋಟೆಲ್‌ನಲ್ಲಿ ಆರೋಪಿಗೆ ನೀಡಿದ್ದರು. ಬಳಿಕ ಈ ವ್ಯಕ್ತಿ ಮಾತು ಬದಲಿಸಿದ್ದ. ಆಗ ಸಂಶಯಗೊಂದು ವಿಚಾರಿಸಿದಾಗ 1 ಕೋಟಿ ರೂ. ವಾಪಸ್‌ ನೀಡಿದ್ದಾನೆ. ಉಳಿದ 25 ಲಕ್ಷ ಕೊಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆಯೂ ಸಾಕಷ್ಟು ಮಂದಿಗೆ ಬಿಜೆಪಿ ಮುಖಂಡರು, ಸಚಿವರ ಹೆಸರಿನಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ