ಆ್ಯಪ್ನಗರ

ಗಾಂಜಾವ್ಯಸನಿ ಪ್ರಿಯತಮನನ್ನು ಬೈದಿದ್ದಕ್ಕೆ ಪ್ರೇಯಸಿ ಆತ್ಮಹತ್ಯೆ..!

ಪೋಷಕರ ಮಾತನ್ನು ನಿರ್ಲಕ್ಷಿಸಿ ಪ್ರೀತಿ ಮುಂದುವರಿಸಿದ್ದ ಮಗಳ ವರ್ತನೆಗೆ ಬೇಸತ್ತ ತಾಯಿ, ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ತಾಯಿ ಸಾವಿನ ನಂತರವೂ ಜೆಮಿನಿ, ಭರತ್‌ ಜತೆ ಪ್ರೀತಿ ಮುಂದುವರಿಸಿದಳು. ಜ.1ರಂದು ಜೆಮಿನಿ ತಂದೆ ನಾಗರಾಜ್‌ಗೆ ಕರೆ ಮಾಡಿದ್ದ ಭರತ್‌, ಜೆಮಿನಿಗೆ ಹೊಸ ವರ್ಷದ ಶುಭಾಶಯ ಕೋರಬೇಕು, ಪೋನ್‌ ಕೊಡಿ ಎಂದು ಕೇಳಿದ್ದ. ಇದರಿಂದ ಕೋಪಗೊಂಡ ಆಕೆಯ ತಂದೆ ನಾಗರಾಜ್‌ ಭರತ್‌ಗೆ ಬೈದು ಬುದ್ಧಿವಾದ ಹೇಳಿದ್ದರು.

Vijaya Karnataka Web 11 Jan 2021, 7:34 am
ಬೆಂಗಳೂರು: ತನ್ನ ತಂದೆ ಪ್ರಿಯತಮನನ್ನು ಬೈದಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿರುವ ಘಟನೆ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web suicide-rep-toi
Image used for representational purpose only


ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಜೆಮಿನಿ(19) ಮೃತ ದುರ್ದೈವಿ. ತಂದೆ ನಾಗರಾಜ್‌ ಬುದ್ಧಿವಾದ ಹೇಳಿದ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆಮಿನಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಗಾಂಜಾ ವ್ಯಧಿನಿ ಭರತ್‌ ಎಂಬತಾನ ಪ್ರೀತಿಯ ಬಲೆಗೆ ಸಿಲುಕಿದಳು. ಈತನ ಬಗ್ಗೆ ಎಲ್ಲವನ್ನೂ ಅರಿತಿದ್ದ ಆಕೆಯ ಪೋಷಕರು, ಭರತ್‌ನ ಸಹವಾಸ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದರು.

ನಕಲಿ ಉಬ್ಬಚ್ಚು ಯಂತ್ರ ಬಳಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ

ಆದರೂ, ಪೋಷಕರ ಮಾತನ್ನು ನಿರ್ಲಕ್ಷಿಸಿ ಪ್ರೀತಿ ಮುಂದುವರಿಸಿದ್ದಳು. ಮಗಳ ವರ್ತನೆಗೆ ಬೇಸತ್ತ ತಾಯಿ, ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ತಾಯಿ ಸಾವಿನ ನಂತರವೂ ಜೆಮಿನಿ, ಭರತ್‌ ಜತೆ ಪ್ರೀತಿ ಮುಂದುವರಿಸಿದಳು. ಜ.1ರಂದು ಜೆಮಿನಿ ತಂದೆ ನಾಗರಾಜ್‌ಗೆ ಕರೆ ಮಾಡಿದ್ದ ಭರತ್‌, ಜೆಮಿನಿಗೆ ಹೊಸ ವರ್ಷದ ಶುಭಾಶಯ ಕೋರಬೇಕು, ಪೋನ್‌ ಕೊಡಿ ಎಂದು ಕೇಳಿದ್ದ. ಇದರಿಂದ ಕೋಪಗೊಂಡ ಆಕೆಯ ತಂದೆ ನಾಗರಾಜ್‌ ಭರತ್‌ಗೆ ಬೈದು ಬುದ್ಧಿವಾದ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಜೆಮಿನಿ ನೇಣಿಗೆ ಶರಣಾಗಿದ್ದಾಳೆ.

ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಿಳಿದ ವಿಮಾನ: ಎಲ್ಲಾ ಪ್ರಯಾಣಿಕರ ಕಡ್ಡಾಯ ಪರೀಕ್ಷೆ!

ಯುವತಿಯ ತಂದೆ ನಾಗರಾಜ್‌, ತನ್ನ ಮಗಳ ಸಾವಿಗೆ ಭರತ್‌ ಕಾರಣ ಎಂದು ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ