ಆ್ಯಪ್ನಗರ

ಬಿಎಸ್‌ವೈ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ಸಾಯಿಸಿದೆ, ಆಮ್ ಆದ್ಮಿ ಪಕ್ಷ ಆರೋಪ

ಲೋಕಾಯುಕ್ತ ಸಂಸ್ಥೆಯನ್ನು ಬಿಎಸ್‌ವೈ ಸರ್ಕಾರ ಸಂಪೂರ್ಣ ಸಾಯಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಈ ಆರೋಪ ಮಾಡಿದ್ದಾರೆ.

Vijaya Karnataka Web 19 Jan 2021, 3:48 pm
ಬೆಂಗಳೂರು: ಬಿಎಸ್‌ವೈ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ಸಾಯಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಸರ್ಕಾರದ ನಡೆಯನ್ನು ಖಂಡಿಸಿ ಬುಧವಾರ ಆಮ್ ಆದ್ಮಿ ಪಕ್ಷದಿಂದ ಕಪ್ಪು ದಿನ ಆಚರಣೆ ನಡೆಸಲು ಕರೆ ಕೊಟ್ಟಿದೆ.
Vijaya Karnataka Web lokayukta


ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಳು ಗೆಡವಿ, ಹಲ್ಲು ಕಿತ್ತ ಹಾವಿನಂತೆ ಮಾಡಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಸಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಷತ್ ಕೋಲಾಹಲ: ಶೀಘ್ರದಲ್ಲೇ ಮಧ್ಯಂತರ ವರದಿ, ಗುರುವಾರ ಸಮಿತಿಯಿಂದ ಕರಡು ಪರಿಶೀಲನಾ ಸಭೆ

ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಡಿನೋಟಿಫಿಕೇಶನ್ ಹಗರಣದಲ್ಲಿ ಯಡಿಯೂರಪ್ಪ ಅವರು ತಪ್ಪಿತಸ್ಥರೆಂದು ಸಾಕ್ಷ್ಯಗಳು ದೊರೆತರು ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತನಿಖೆ ನಡೆಸದೇ ಪ್ರಕರಣವನ್ನು ಬಾಕಿ ಇರಿಸಿಕೊಂಡು, ಈಗ ಪ್ರಕರಣವನ್ನು ಮುಕ್ತಾಯ ಮಾಡಲು ಹೊರಟಿರುವುದರ ಹಿಂದೆ ಯಡಿಯೂರಪ್ಪ ಹಾಗೂ ಗೃಹ ಸಚಿವ ಬೊಮ್ಮಾಯಿ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಆದ ಕಾರಣ ಜನವರಿ 20 ರಂದು ಲೋಕಾಯುಕ್ತವನ್ನು ಸಾಯಿಸಿದ ಕಪ್ಪು ದಿನ ವನ್ನಾಗಿ ಆಚರಿಸಲಾಗುವುದು ಎಂದರು. ಬಿಜೆಪಿಯ ಮುಖ್ಯಮಂತ್ರಿಗಳನ್ನೇ ಜೈಲಿಗೆ ಕಳಿಸಿದ ಲೋಕಾಯುಕ್ತ ಸಂಸ್ಥೆಯನ್ನು ಪ್ರಬಲಗೊಳಿಸಿದರೆ ಸರ್ಕಾರದ ವೈದ್ಯಕೀಯ ಪರಿಕರಗಳ ಖರೀದಿ ಹಗರಣ, ಕೊರೋನಾ ಸಮಯದಲ್ಲಿ ನಡೆಸಿದ ಹಗರಣಗಳು, ಸೂಪರ್ ಸಿಎಂ ವಿಜಯೇಂದ್ರ ನಡೆಸುತ್ತಿರುವ ದಂಧೆಗಳು ಎಲ್ಲಿ ಮತ್ತೆ ಬಟಾಬಯಲಾಗುತ್ತವೆಯೋ ಎನ್ನುವ ಭಯದಿಂದ ಬಿಜೆಪಿಯವರು ಸಹ ಲೋಕಾಯುಕ್ತದ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ