ಆ್ಯಪ್ನಗರ

ಕೊರೊನಾದಿಂದ ಕೆಲಸ ಕಳೆದುಕೊಂಡು ಕಳ್ಳತನಕ್ಕಿಳಿದ ಎಂಬಿಎ ಪದವೀಧರ ಈಗ ಪೊಲೀಸ್‌ ಅತಿಥಿ!

ಕೊರೊನಾ ಹಾವಳಿಯಿಂದ ಕಂಪನಿ ನಷ್ಟಕ್ಕೊಳಗಾಗಿ ಈತ ಸೇರಿದಂತೆ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಈ ವೇಳೆ ಗೌಸ್‌ 35 ಸಾವಿರ ರೂ. ಸಾಲಗಾರನಾಗಿದ್ದ. ಜತೆಗೆ ಜೀವನ ನಿರ್ವಹಣೆಯೂ ಕಷ್ಟವಾಗಿತ್ತು. ಸಾಲಗಾರರು ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ, ಹಣ ಸಂಪಾದನೆ ಮಾಡಲು ಕಳ್ಳತನದ ಹಾದಿ ಹಿಡಿಯಬೇಕಾಯಿತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

Vijaya Karnataka 1 Aug 2021, 7:22 am
ಬೆಂಗಳೂರು: ಎಂಬಿಎ ಓದಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದವನೊಬ್ಬ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು, ಸರಗಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
Vijaya Karnataka Web Crime News


ಜಯನಗರದ ಪೂರ್ಣಿಮಾ ಕನ್ವೆನ್ಷನ್‌ ಹಾಲ್‌ನಿಂದ ಬರುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಆರೋಪಿ ಶೇಖ್‌ ಗೌಸ್‌ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಎಂಬಿಎ ಪದವಿ ವ್ಯಾಸಂಗ ಮಾಡಿ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 40 ಲಕ್ಷ ಮೌಲ್ಯದ 46 ಬೈಕ್‌ ವಶ; ಐವರ ಬಂಧನ
ಕೊರೊನಾ ಹಾವಳಿಯಿಂದ ಕಂಪನಿ ನಷ್ಟಕ್ಕೊಳಗಾಗಿ ಈತ ಸೇರಿದಂತೆ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಈ ವೇಳೆ ಗೌಸ್‌ 35 ಸಾವಿರ ರೂ. ಸಾಲಗಾರನಾಗಿದ್ದ. ಜತೆಗೆ ಜೀವನ ನಿರ್ವಹಣೆಯೂ ಕಷ್ಟವಾಗಿತ್ತು. ಸಾಲಗಾರರು ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ, ಹಣ ಸಂಪಾದನೆ ಮಾಡಲು ಕಳ್ಳತನದ ಹಾದಿ ಹಿಡಿಯಬೇಕಾಯಿತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ