ಆ್ಯಪ್ನಗರ

ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಅಬಾರ್ಷನ್ ಮಾಡಿಸಿದ ಉದ್ಯಮಿ

ಗರ್ಭಪಾತ ಮಾಡಿಸಿದ ಬಳಿಕವೂ ಕಿರುಕುಳ ಮುಂದುವರಿಸಿದ್ದು, ಡಿವೋರ್ಸ್ ನೀಡಲು ಒತ್ತಾಯಿಸುತ್ತಿದ್ದಾನೆ. ವಿಚ್ಚೇದನ ದೊರೆತರೆ ಬೇರೆ ಮದುವೆಯಾಗಿ, ಗಂಡು ಮಗು ಪಡೆಯಬಹುದು ಎನ್ನುವುದು ಉದ್ಯಮಿಯ ವಾದವಾಗಿದೆ.

Vijaya Karnataka Web 4 Jan 2019, 5:30 pm
ಬೆಂಗಳೂರು: ಜ್ಯೋತಿಷಿಯ ಮಾತು ಕೇಳಿದ ಬೆಂಗಳೂರಿನ ಉದ್ಯಮಿಯೊಬ್ಬ ತನ್ನ ಪತ್ನಿಗೆ ಹೆಣ್ಣು ಮಗುವಾಗುವುದು ಬೇಡ ಎಂದು ಗರ್ಭಪಾತ ಮಾಡಿಸಿದ ಪ್ರಕರಣ ವರದಿಯಾಗಿದೆ.
Vijaya Karnataka Web abortion


ಮಧ್ಯಪ್ರದೇಶ ಮೂಲದ ದಂಪತಿ 15 ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿ, ಇಲ್ಲಿಯೇ ನೆಲೆಸಿದ್ದಾರೆ, ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದಾರೆ. ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದ ಸಂದರ್ಭ ಪತಿ ಜ್ಯೋತಿಷಿ ಸಲಹೆ ಕೇಳಿದ್ದು, ಈ ಬಾರಿಯೂ ಹೆಣ್ಣು ಮಗುವಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದರಿಂದ, ಉದ್ಯಮಿ ಪತ್ನಿಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ.

ಗರ್ಭಪಾತ ಮಾಡಿಸಿದ ಬಳಿಕವೂ ಕಿರುಕುಳ ಮುಂದುವರಿಸಿದ್ದು, ಡಿವೋರ್ಸ್ ನೀಡಲು ಒತ್ತಾಯಿಸುತ್ತಿದ್ದಾನೆ. ವಿಚ್ಚೇದನ ದೊರೆತರೆ ಬೇರೆ ಮದುವೆಯಾಗಿ, ಗಂಡು ಮಗು ಪಡೆಯಬಹುದು ಎನ್ನುವುದು ಉದ್ಯಮಿಯ ವಾದವಾಗಿದೆ.

ಹೀಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಬಳಿಕ ಆತನ ವಿರುದ್ಧ ನೊಂದ ಪತ್ನಿ ಮಹಿಳಾ ಸಹಾಯವಾಣಿ ಪರಿಹಾರ್ ಸಂಪರ್ಕಿಸಿ ಸಹಾಯ ಕೋರಿದ್ದಾರೆ. ಪತಿ ಪತ್ನಿ ಇಬ್ಬರನ್ನೂ ಕರೆಸಿದ ಕೌನ್ಸೆಲರ್‌ಗಳು ಮಾತುಕತೆ ನಡೆಸಿ ಸಂಧಾನ ಯತ್ನ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ