ಆ್ಯಪ್ನಗರ

ಸ್ನೇಹಿತರ ನಡುವೆ ಗಲಾಟೆ ಸಹಜ, ಅದರಲ್ಲೇನು ವಿಶೇಷವಿಲ್ಲ: ಜಮೀರ್ ಅಹ್ಮದ್

ಭೀಮಾನಾಯ್ಕ್, ಗಣೇಶ್ ಕಂಪ್ಲಿ ಹಾಗೂ ಆನಂದ್ ಸಿಂಗ್ ನಡುವೆ ಸಣ್ಣ ಗಲಾಟೆಯಾಗಿದೆ. ಅದರಿಂದ ಆನಂದ್ ಸಿಂಗ್ ಕಣ್ಣಿಗೆ ಸ್ವಲ್ಪ ಗಾಯ ಆಗಿದೆ. ಆದರೆ ತಲೆಗೆ ಏಟಾಗಿಲ್ಲ, ಹೊಲಿಗೆ ಆಗಿಲ್ಲ.

Vijaya Karnataka Web 20 Jan 2019, 5:10 pm
ಬೆಂಗಳೂರು: ಆಪರೇಷನ್ ಕಮಲದ ಭೀತಿಗೆ ಒಳಗಾಗಿ ಬೆಂಗಳೂರಿನ ಬಿಡದಿಯ ಈಗಲ್‌ಟನ್ ರೆಸಾರ್ಟ್ ಸೇರಿಕೊಂಡಿದ್ದ ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಲ್ಲೆ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ಅದು ಸ್ನೇಹಿತರ ನಡುವಿನ ಸಹಜ ಗಲಾಟೆ ಎಂದಿದ್ದಾರೆ.
Vijaya Karnataka Web Zameer


ಈಗಲ್ ಟನ್ ರೆಸಾರ್ಟ್‌ನಲ್ಲಿ ಗುಂಡು ಪಾರ್ಟಿ: ಕೈ ಶಾಸಕರ ಮಾರಾಮಾರಿ

ಸ್ನೇಹಿತರ ನಡುವೆ ಗಲಾಟೆ ಸಹಜ. ಭೀಮಾನಾಯ್ಕ್, ಗಣೇಶ್ ಕಂಪ್ಲಿ ಹಾಗೂ ಆನಂದ್ ಸಿಂಗ್ ನಡುವೆ ಸಣ್ಣ ಗಲಾಟೆಯಾಗಿದೆ. ಅದರಿಂದ ಆನಂದ್ ಸಿಂಗ್ ಕಣ್ಣಿಗೆ ಸ್ವಲ್ಪ ಗಾಯ ಆಗಿದೆ. ಆದರೆ ತಲೆಗೆ ಏಟಾಗಿಲ್ಲ, ಹೊಲಿಗೆ ಆಗಿಲ್ಲ. ಯಾವುದೋ ಮಾತಲ್ಲಿ ಗಲಾಟೆ ಅಷ್ಟೆ ಎಂದು ಸಮಜಾಯಿಷಿ ನೀಡಿದ್ದಾರೆ.

ಕೈ ಶಾಸಕರ ಹೊಡೆದಾಟ ಮುಚ್ಚಿಹಾಕಲು ಡಿಕೆ ಬ್ರದರ್ಸ್ ಯತ್ನ: ಅಣ್ಣ-ತಮ್ಮ ತದ್ವಿರುದ್ಧ ಹೇಳಿಕೆ

ಇದಕ್ಕೆಲ್ಲ ಆಪರೇಶನ್ ಕಮಲ ಕಾರಣವಲ್ಲ‌. ಬೇರೆ ಯಾವುದೋ ವಿಚಾರಕ್ಕೆ ಜಗಳ. ನಿಮ್ಮ ನಡುವೆಯೂ ಗಲಾಟೆ ಆಗಲ್ವಾ? ಭಿನ್ನಾಭಿಪ್ರಾಯ ಸಹಜ. ಆನಂದ್ ಸಿಂಗ್ ಆರಾಮವಾಗಿದ್ದಾರೆ. ಇವತ್ತು ಭಾನುವಾರ, ನಾನು ಬಿರಿಯಾನಿ ತಿನ್ನಬೇಕು ಅಂದ್ರು, ತರಿಸಿಕೊಟ್ಟಿದ್ದಾರೆ.

ಭಾನುವಾರ ರಾತ್ರಿ ಅಥವಾ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ ಎಂದು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ