ಆ್ಯಪ್ನಗರ

ಕಪಾಟು ಸಮೇತ ಆಭರಣ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ

ಮನೆಗೆ ಕನ್ನ ಹಾಕಿ ಲಾಕರ್‌ ಮತ್ತು ಕಬ್ಬಿಣದ ಕಪಾಟು ಸಮೇತ ನಗ, ನಾಣ್ಯ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 7 Oct 2018, 8:08 am
ಬೆಂಗಳೂರು: ಮನೆಗೆ ಕನ್ನ ಹಾಕಿ ಲಾಕರ್‌ ಮತ್ತು ಕಬ್ಬಿಣದ ಕಪಾಟು ಸಮೇತ ನಗ, ನಾಣ್ಯ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Arrest 23


ತಮಿಳುನಾಡಿನ ಕಾಳಿದಾಸ್‌(36), ಲೋಕನಾಥ್‌(52) ಬಂಧಿತರು. ಇವರಿಂದ 1.34 ಕೆ. ಜಿ ಚಿನ್ನಾಭರಣ, 1.3 ಗ್ರಾಂ ಬೆಳ್ಳಿಯ ವಸ್ತುಗಳು, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ವಸ್ತುಗಳು ಸೇರಿದಂತೆ 29.45 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತಮಿಳುನಾಡು ಪೊಲೀಸರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕರನ್‌ ಎಂಬುವನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಆರೋಪಿಯು ತನ್ನ ಸಹಚರರ ಜೊತೆ ಸೇರಿ ನಗರದ ಬೈಯ್ಯಪ್ಪನಹಳ್ಳಿ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿರುವುದನ್ನು ಬಾಯಿ ಬಿಟ್ಟಿದ್ದ. ಆ ಕುರಿತು ಅಲ್ಲಿನ ಪೊಲೀಸರು ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ದಿನಕರನ್‌ನನ್ನು ಬಾಡಿ ವಾರೆಂಟ್‌ ಮೂಲಕ ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ, 2018 ಏಪ್ರಿಲ್‌ನಲ್ಲಿ ಬೈರಸಂದ್ರ ಜಿ.ಎಂ ಪಾಳ್ಯದಲ್ಲಿ ಮನೆಗೆ ನುಗ್ಗಿ 4 ಚಿನ್ನದ ಉಂಗುರು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅಲ್ಲದೆ, ತನ್ನ ಕಳ್ಳತನದಲ್ಲಿ ಸಹಕರಿಸುತ್ತಿದ್ದ ತಮಿಳುನಾಡಿನ ನಾಗಪಟ್ಟಣಂನ ಕಾಳಿದಾಸ ಮತ್ತು ಲೋಕನಾಥ್‌ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಕಾರ್ಯಾಚರಣೆ ನಡೆಸಿ ಕಾಳಿದಾಸ್‌ ಮತ್ತು ಲೋಕನಾಥ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಬೈಯ್ಯಪ್ಪನಹಳ್ಳಿಯಲ್ಲಿ ವರದಿಯಾಗಿದ್ದ 6 ಕೇಸ್‌ಗಳು ಮತ್ತು ಗ್ರಾಮಾಂತರ ಜಿಲ್ಲೆ ಅವಲಹಳ್ಳಿಯ ಒಂದು ಕಳವು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಆರೋಪಿಗಳ ವಿರುದ್ಧ ಮನೆಕಳ್ಳತನ, ಬ್ಯಾಂಕ್‌ ಕನ್ನ ಕಳವು ಸೇರಿದಂತೆ ನೂರಾರು ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಾಗಿಲು ಮುರಿದು ಒಳ ನುಗ್ಗುತ್ತಿದ್ದ ಆರೋಪಿಗಳು, ಲಾಕರ್‌ ಮತ್ತು ಕಪಾಟುಗಳನ್ನೆ ವಾಹನದಲ್ಲಿ ಹಾಕಿಕೊಂಡು ಪರಾರಿಯಾಗುತ್ತಿದ್ದರು. ಕಳ್ಳತನ ಮಾಡಿದ ಹಣದಲ್ಲಿ ಐಷಾರಾಮಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ