ಆ್ಯಪ್ನಗರ

ಒಮ್ಮೆ ಬಿಟ್ಟ ಪಕ್ಷ ಮತ್ತೆ ಸೇರಲು ನಾನು ಯಡಿಯೂರಪ್ಪ ಅಲ್ಲ: ಧನಂಜಯ್‌

ಬಿಜೆಪಿ ಬಿಟ್ಟ ಬಳಿಕ ಅಲ್ಲಿಗೆ ಮರಳಿ ಹೋಗಲು ನಾನು ಯಡಿಯೂರಪ್ಪ ಅಲ್ಲ ಈ ಜನ್ಮದಲ್ಲಿ ಮತ್ತೆ ಬಿಜೆಪಿ ಸೇರಲ್ಲ ಅಂತ ಯಡಿಯೂರಪ್ಪ ಹೇಳಿದ್ದರು ಅಂಥವರು ಮತ್ತೆ ಬಿಜೆಪಿ ಸೇರಿದ್ದಾರೆ ನಾನು ಅವರಂತಲ್ಲ ಎಂದು ಧನಂಜಯ್‌ ಕುಮಾರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 3 Aug 2017, 5:05 pm
ಬೆಂಗಳೂರು: ಬಿಜೆಪಿ ಬಿಟ್ಟ ಬಳಿಕ ಅಲ್ಲಿಗೆ ಮರಳಿ ಹೋಗಲು ನಾನು ಯಡಿಯೂರಪ್ಪ ಅಲ್ಲ ಈ ಜನ್ಮದಲ್ಲಿ ಮತ್ತೆ ಬಿಜೆಪಿ ಸೇರಲ್ಲ ಅಂತ ಯಡಿಯೂರಪ್ಪ ಹೇಳಿದ್ದರು ಅಂಥವರು ಮತ್ತೆ ಬಿಜೆಪಿ ಸೇರಿದ್ದಾರೆ ನಾನು ಅವರಂತಲ್ಲ ಎಂದು ಧನಂಜಯ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web am not like yeddyurappa says dhananjay
ಒಮ್ಮೆ ಬಿಟ್ಟ ಪಕ್ಷ ಮತ್ತೆ ಸೇರಲು ನಾನು ಯಡಿಯೂರಪ್ಪ ಅಲ್ಲ: ಧನಂಜಯ್‌


ಬಿಜೆಪಿ ತೊರೆದಿದ್ದ ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್‌‌ಗೆ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರದಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಕಾಂಗ್ರೆಸ್ ಬಾವುಟ ನೀಡಿ ಧನಂಜಯ್ ಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಇದಾದ ಬಳಿಕ ಮಾತನಾಡಿದ ಧನಂಜಯ್‌ 40 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ, ಯಾವುದೇ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಸೇರುತ್ತಿಲ್ಲ.
ಇತ್ತೀಚಿನ ದೇಶದ ಬೆಳವಣಿಗೆಗಳು ಬೇಸರ ತರಿಸಿದ್ದು ಜಾತ್ಯಾತೀತ ತಳಹದಿಯ ಮೇಲೆ ಈ ದೇಶ ನಿಂತಿದೆ. ಆದರೆ ಈ ದೇಶದಲ್ಲಿ ಇವತ್ತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾರ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ನಾನೊಬ್ಬ ರಾಷ್ಟ್ರಪ್ರೇಮಿ ದೇಶದ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಬೇಕು ನಮ್ಮ ದೇಶದದಲ್ಲಿ ಇವರಿಬ್ಬರ ಸರ್ವಾಧಿಕಾರಿ ಧೋರಣೆ ವಿರೋಧಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೇ ಈ ವೇಳೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ಉತ್ತಮ ಭವಿಷ್ಯವಿದೆ ಎಂದು ನುಡಿದಿರುವ ಧನಂಜಯ್‌, ನಾನು ಯಾವತ್ತೂ ಯಾರ ವೈಯಕ್ತಿಕ ವಿಚಾರದಲ್ಲಿ ಮಾತಾಡಿಲ್ಲ, 2004ರಲ್ಲೇ ಕಾಂಗ್ರೆಸ್ ಸೇರುವ ಅವಕಾಶ ನನಗೆ ಬಂದಿತ್ತು ಆದರೆ ನಾನು ಕಾದು ನೋಡೋಣ ಅಂತ ಇದ್ದೆ. ಈಗ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದೇನೆ, ದಕ್ಷಿಣ ಕನ್ನಡ ಜಿಲ್ಲೆ ನನ್ನ ಕರ್ಮ ಭೂಮಿ ಅಲ್ಲಿನ ಮೂಲೆ ಮೂಲೆಯೂ ನನಗೆ ಗೊತ್ತಿದೆ ಎಂದಿದ್ದಾರೆ.\

ಇದಕ್ಕೂ ಮುನ್ನ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಬಿಜೆಪಿಯ ಬೆಳವಣಿಗೆಗಳಿಂದ ನೊಂದು ಅವರೀಗ ಕಾಂಗ್ರೆಸ್ ಸೇರಿದ್ದಾರೆ. ನಮ್ಮ ಸಿದ್ಧಾಂತದ ಚೌಕಟ್ಟಿನಲ್ಲಿ ಧನಂಜಯ್ ಕುಮಾರ್ ಅವರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತೇವೆ. ಅವರ ಸೇರ್ಪಡೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ