ವಿಕ ಸುದ್ದಿಲೋಕ ಬೆಂಗಳೂರು
ಮಹತ್ವದ ಬೆಳವಣಿಗೆಯಲ್ಲಿ ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳ ಮೇಲೆ ಸಿಸಿಬಿ ಅಧಿಕಾರಿಗಳು ಕೆಪಿಐಡಿ (ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಕಂಪನಿಯ ಮಾಲೀಕ ಸೇರಿದಂತೆ ಕಂಪನಿ ಮೂಲಕ ಹಣ ಪಡೆದವರೆಲ್ಲರಿಂದ ಹಣವನ್ನು ವಾಪಾಸ್ ಪಡೆದು ಹೂಡಿಕೆದಾರರಿಗೆ ಹಿಂದಿರುಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಈ ಕಾಯ್ದೆಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಆ್ಯಂಬಿಡೆಂಟ್ 900 ಕೋಟಿಯಷ್ಟು ವಂಚನೆ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಕಂಪನಿ ಮಾಲೀಕ ಫರೀದ್ನಿಂದ ಈ ಹಣವನ್ನು ಹಲವಾರು ಮಂದಿ ನಾನಾ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಅವರೆಲ್ಲರೂ ಈ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡುವುದು ಅನಿವಾರ್ಯವಾಗಲಿದೆ. ''ಈಗಾಗಲೇ ಆ್ಯಂಬಿಡೆಂಟ್ನಿಂದ ಹಣ ಪಡೆದ ಹಲವರಿಗೆ ಹಣ ವಾಪಾಸ್ ಮಾಡಲು ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದವರು ಹಣ ಹಿಂದಿರುಗಿಸದೆ ನಾಟಕ ಆಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು' ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಕೆಪಿಐಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಕೆಪಿಐಡಿ ? :
ಕಂಪನಿ ಮಾಲೀಕರು ಮತ್ತು ಕಂಪನಿಯಿಂದ ಹಣ ಪಡೆದವರೆಲ್ಲರೂ ಹಣವನ್ನು ವಾಪಾಸ್ ತಲುಪಿಸಲೇಬೇಕು. ಇಲ್ಲದಿದ್ದರೆ ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರಕ್ಕೆ ಅವಕಾಶವಿದೆ. ಆ್ಯಂಬಿಡೆಂಟ್ ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಈಗಾಗಲೇ ರಾಜ್ಯ ಸರಕಾರ ಉತ್ತರ ವಿಭಾಗದ ಉಪವಿಭಾಗಾಧಿಕಾರಿಗಳನ್ನು ಈ ಪ್ರಕ್ರಿಯೆಗೆ ನೇಮಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ವಂಚಕ ಕಂಪನಿಯಿಂದ ಹಣ ಪಡೆದವರು, ಕಂಪನಿ ಮಾಲೀಕರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿಕೊಂಡವರೂ ಈ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ಗಳಾಗಲಿದ್ದಾರೆ. ಇವರುಗಳ ಆಸ್ತಿ ಕೂಡ ಮುಟ್ಟುಗೋಲಿಗೆ ಅವಕಾಶವಿದೆ. ಈ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ವಿಶೇಷ ನ್ಯಾಯಾಲಯದಲ್ಲಿ (ಒಂದನೇ ಸಿಸಿಹೆಚ್) ಮಾತ್ರ ವಿಚಾರಣೆಗೆ ಒಳಪಡುತ್ತವೆ. ಆರೋಪಿಗಳಿಗೆ ಜಾಮೀನು ಸಿಗುವುದು ಸುಲಭವಲ್ಲ.
ಅಲೋಕ್ ವಿರುದ್ಧ ದೂರು :
ಒಂದು ಕಡೆ ಕೆಪಿಐಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ ಮತ್ತೊಂದು ಕಡೆ ಝೈದ್ ಖಾನ್ ಎಂಬಾತ ಪತ್ರಿಕಾಗೋಷ್ಠಿ ನಡೆಸಿ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ಗೂ ಆ್ಯಂಬಿಡೆಂಟ್ ಮಾಲೀಕ ಫರೀದ್ ನಡುವೆ ಒಳ್ಳೆಯ ಸಂಬಂಧ ಇದೆ. ಹೀಗಾಗಿಯೇ ಫರೀದ್ ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಮನವಿ ಮಾಡದ ಅಲೋಕ್ಕುಮಾರ್, ಜನಾರ್ಧನ ರೆಡ್ಡಿ ಅವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲೋಕ್ ಕುಮಾರ್ ಜತೆ ಎಸಿಪಿ ವೆಂಕಟೇಶ್ ಪ್ರಸನ್ನ ಕೂಡ ಶಾಮೀಲಾಗಿದ್ದಾರೆ. ಅಪರಾಧ ಜಗತ್ತಿನ ನಂಟಿರುವ ಖಲಂದರ್ ಎನ್ನುವ ವ್ಯಕ್ತಿಯೇ ಫರೀದ್ನನ್ನು ಅಲೋಕ್ಕುಮಾರ್ ಮತ್ತು ವೆಂಕಟೇಶ್ ಪ್ರಸನ್ನ ಅವರಿಗೆ ಪರಿಚಯ ಮಾಡಿಸಿದ್ದು. ಇವರಿಬ್ಬರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಒಲಿಸಿಕೊಳ್ಳುವ ಸಲುವಾಗಿ ತಮ್ಮ ಮೂಗಿನ ನೇರಕ್ಕೆ ತನಿಖೆ ನಡೆಸುತ್ತಿದ್ದಾರೆ. ಇವರಿಂದ ನನಗೆ ಬೆದರಿಕೆ ಇದೆ ಎಂದು ಝೈದ್ ಖಾನ್ ಆರೋಪಿಸಿದ್ದಾನೆ.
ಬಾಕ್ಸ್
ಅಧಿಕಾರಿಗಳ ವಿರುದ್ಧ
ಆರೋಪಗಳ ಸರಮಾಲೆ
ಆ್ಯಂಬಿಡೆಂಟ್ ಪ್ರಕರಣದ ತನಿಖೆ ಬಿಗಿಯಾದಷ್ಟು ಅಧಿಕಾರಿಗಳ ಮೇಲೆ ಆರೋಪ ಹೊರಿಸುವ ಸರಣಿ ಮುಂದುವರೆದಿದೆ. ಆರಂಭದಲ್ಲಿ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವಿರುದ್ಧ ಆರೋಪಿ ವಿಜಯ್ ಟಾಟಾ ಎಂಬಾತ ಆರೋಪ ಮಾಡಿದ್ದ. ತನಿಖಾಧಿಕಾರಿ ಬದಲಾದರು. ಈಗ ಅಲೋಕ್ ಕುಮಾರ್ ವಿರುದ್ಧವೇ ಆರೋಪ ಮಾಡಿ ದೂರು ನೀಡಲಾಗಿದೆ. ಆ್ಯಂಬಿಡೆಂಟ್ ಕಂಪನಿಯಿಂದ ಹಣ ಪಡೆದಿರುವ ವಿಜಯ್ ಟಾಟಾ ಸೇರಿ ಹಲವರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಅಲೋಕ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದಾಗಿ ಕೆಲ ದಿನಗಳಲ್ಲೇ ಅಲೋಕ್ ವಿರುದ್ಧವೂ ಆರೋಪ ಕೇಳಿ ಬಂದಿದೆ. ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ದೂರು ನೀಡಿದಾಗ ಹಿರಿಯ ಅಧಿಕಾರಿಗಳು ಎಸಿಪಿ ಪರವಾಗಿ ನಿಲ್ಲಲಿಲ್ಲ. ಹೀಗಾಗಿ ವಂಚಕ ಕಂಪನಿಯಿಂದ ಹಣ ತಿಂದಿರುವವರೇ ಅಧಿಕಾರಿಗಳ ವಿರುದ್ಧ ಷಡ್ಯಂತ್ರ ಮಾಡುವುದನ್ನು ಮುಂದುವರೆಸಿದ್ದಾರೆ ಎನ್ನುವ ಅಸಮಾಧಾನ ಸಿಸಿಬಿ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕೋಟ್-1
ಆ್ಯಂಬಿಡೆಂಟ್ ತನಿಖೆ ಚುರುಗೊಂಡಿದ್ದು ಸಾರ್ವಜನಿಕರ ಹಣ ವಾಪಾಸ್ ಕೊಡಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ಕಂಪನಿಯಿಂದ ಹಣ ಪಡೆದವರಿಗೆ ಹಣ ವಾಪಾಸ್ ನೀಡುವಂತೆ ನೋಟಿಸ್ ನೀಡಲಾಗಿದೆ. ತನಿಖೆಗೆ ಅಡ್ಡಿಪಡಿಸಲು, ತನಿಖೆಯ ದಿಕ್ಕು ತಪ್ಪಿಸಲು ಈ ರೀತಿಯ ಆರೋಪಗಳನ್ನೆಲ್ಲ ಮಾಡಲಾಗುತ್ತಿದೆ.
-ಅಲೋಕ್ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರು.
ಮಹತ್ವದ ಬೆಳವಣಿಗೆಯಲ್ಲಿ ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳ ಮೇಲೆ ಸಿಸಿಬಿ ಅಧಿಕಾರಿಗಳು ಕೆಪಿಐಡಿ (ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಕಂಪನಿಯ ಮಾಲೀಕ ಸೇರಿದಂತೆ ಕಂಪನಿ ಮೂಲಕ ಹಣ ಪಡೆದವರೆಲ್ಲರಿಂದ ಹಣವನ್ನು ವಾಪಾಸ್ ಪಡೆದು ಹೂಡಿಕೆದಾರರಿಗೆ ಹಿಂದಿರುಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಈ ಕಾಯ್ದೆಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಆ್ಯಂಬಿಡೆಂಟ್ 900 ಕೋಟಿಯಷ್ಟು ವಂಚನೆ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಕಂಪನಿ ಮಾಲೀಕ ಫರೀದ್ನಿಂದ ಈ ಹಣವನ್ನು ಹಲವಾರು ಮಂದಿ ನಾನಾ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಅವರೆಲ್ಲರೂ ಈ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡುವುದು ಅನಿವಾರ್ಯವಾಗಲಿದೆ. ''ಈಗಾಗಲೇ ಆ್ಯಂಬಿಡೆಂಟ್ನಿಂದ ಹಣ ಪಡೆದ ಹಲವರಿಗೆ ಹಣ ವಾಪಾಸ್ ಮಾಡಲು ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದವರು ಹಣ ಹಿಂದಿರುಗಿಸದೆ ನಾಟಕ ಆಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು' ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಕೆಪಿಐಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಕೆಪಿಐಡಿ ? :
ಕಂಪನಿ ಮಾಲೀಕರು ಮತ್ತು ಕಂಪನಿಯಿಂದ ಹಣ ಪಡೆದವರೆಲ್ಲರೂ ಹಣವನ್ನು ವಾಪಾಸ್ ತಲುಪಿಸಲೇಬೇಕು. ಇಲ್ಲದಿದ್ದರೆ ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರಕ್ಕೆ ಅವಕಾಶವಿದೆ. ಆ್ಯಂಬಿಡೆಂಟ್ ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಈಗಾಗಲೇ ರಾಜ್ಯ ಸರಕಾರ ಉತ್ತರ ವಿಭಾಗದ ಉಪವಿಭಾಗಾಧಿಕಾರಿಗಳನ್ನು ಈ ಪ್ರಕ್ರಿಯೆಗೆ ನೇಮಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ವಂಚಕ ಕಂಪನಿಯಿಂದ ಹಣ ಪಡೆದವರು, ಕಂಪನಿ ಮಾಲೀಕರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿಕೊಂಡವರೂ ಈ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ಗಳಾಗಲಿದ್ದಾರೆ. ಇವರುಗಳ ಆಸ್ತಿ ಕೂಡ ಮುಟ್ಟುಗೋಲಿಗೆ ಅವಕಾಶವಿದೆ. ಈ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ವಿಶೇಷ ನ್ಯಾಯಾಲಯದಲ್ಲಿ (ಒಂದನೇ ಸಿಸಿಹೆಚ್) ಮಾತ್ರ ವಿಚಾರಣೆಗೆ ಒಳಪಡುತ್ತವೆ. ಆರೋಪಿಗಳಿಗೆ ಜಾಮೀನು ಸಿಗುವುದು ಸುಲಭವಲ್ಲ.
ಅಲೋಕ್ ವಿರುದ್ಧ ದೂರು :
ಒಂದು ಕಡೆ ಕೆಪಿಐಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ ಮತ್ತೊಂದು ಕಡೆ ಝೈದ್ ಖಾನ್ ಎಂಬಾತ ಪತ್ರಿಕಾಗೋಷ್ಠಿ ನಡೆಸಿ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ಗೂ ಆ್ಯಂಬಿಡೆಂಟ್ ಮಾಲೀಕ ಫರೀದ್ ನಡುವೆ ಒಳ್ಳೆಯ ಸಂಬಂಧ ಇದೆ. ಹೀಗಾಗಿಯೇ ಫರೀದ್ ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಮನವಿ ಮಾಡದ ಅಲೋಕ್ಕುಮಾರ್, ಜನಾರ್ಧನ ರೆಡ್ಡಿ ಅವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲೋಕ್ ಕುಮಾರ್ ಜತೆ ಎಸಿಪಿ ವೆಂಕಟೇಶ್ ಪ್ರಸನ್ನ ಕೂಡ ಶಾಮೀಲಾಗಿದ್ದಾರೆ. ಅಪರಾಧ ಜಗತ್ತಿನ ನಂಟಿರುವ ಖಲಂದರ್ ಎನ್ನುವ ವ್ಯಕ್ತಿಯೇ ಫರೀದ್ನನ್ನು ಅಲೋಕ್ಕುಮಾರ್ ಮತ್ತು ವೆಂಕಟೇಶ್ ಪ್ರಸನ್ನ ಅವರಿಗೆ ಪರಿಚಯ ಮಾಡಿಸಿದ್ದು. ಇವರಿಬ್ಬರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಒಲಿಸಿಕೊಳ್ಳುವ ಸಲುವಾಗಿ ತಮ್ಮ ಮೂಗಿನ ನೇರಕ್ಕೆ ತನಿಖೆ ನಡೆಸುತ್ತಿದ್ದಾರೆ. ಇವರಿಂದ ನನಗೆ ಬೆದರಿಕೆ ಇದೆ ಎಂದು ಝೈದ್ ಖಾನ್ ಆರೋಪಿಸಿದ್ದಾನೆ.
ಬಾಕ್ಸ್
ಅಧಿಕಾರಿಗಳ ವಿರುದ್ಧ
ಆರೋಪಗಳ ಸರಮಾಲೆ
ಆ್ಯಂಬಿಡೆಂಟ್ ಪ್ರಕರಣದ ತನಿಖೆ ಬಿಗಿಯಾದಷ್ಟು ಅಧಿಕಾರಿಗಳ ಮೇಲೆ ಆರೋಪ ಹೊರಿಸುವ ಸರಣಿ ಮುಂದುವರೆದಿದೆ. ಆರಂಭದಲ್ಲಿ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವಿರುದ್ಧ ಆರೋಪಿ ವಿಜಯ್ ಟಾಟಾ ಎಂಬಾತ ಆರೋಪ ಮಾಡಿದ್ದ. ತನಿಖಾಧಿಕಾರಿ ಬದಲಾದರು. ಈಗ ಅಲೋಕ್ ಕುಮಾರ್ ವಿರುದ್ಧವೇ ಆರೋಪ ಮಾಡಿ ದೂರು ನೀಡಲಾಗಿದೆ. ಆ್ಯಂಬಿಡೆಂಟ್ ಕಂಪನಿಯಿಂದ ಹಣ ಪಡೆದಿರುವ ವಿಜಯ್ ಟಾಟಾ ಸೇರಿ ಹಲವರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಅಲೋಕ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದಾಗಿ ಕೆಲ ದಿನಗಳಲ್ಲೇ ಅಲೋಕ್ ವಿರುದ್ಧವೂ ಆರೋಪ ಕೇಳಿ ಬಂದಿದೆ. ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ದೂರು ನೀಡಿದಾಗ ಹಿರಿಯ ಅಧಿಕಾರಿಗಳು ಎಸಿಪಿ ಪರವಾಗಿ ನಿಲ್ಲಲಿಲ್ಲ. ಹೀಗಾಗಿ ವಂಚಕ ಕಂಪನಿಯಿಂದ ಹಣ ತಿಂದಿರುವವರೇ ಅಧಿಕಾರಿಗಳ ವಿರುದ್ಧ ಷಡ್ಯಂತ್ರ ಮಾಡುವುದನ್ನು ಮುಂದುವರೆಸಿದ್ದಾರೆ ಎನ್ನುವ ಅಸಮಾಧಾನ ಸಿಸಿಬಿ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕೋಟ್-1
ಆ್ಯಂಬಿಡೆಂಟ್ ತನಿಖೆ ಚುರುಗೊಂಡಿದ್ದು ಸಾರ್ವಜನಿಕರ ಹಣ ವಾಪಾಸ್ ಕೊಡಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ಕಂಪನಿಯಿಂದ ಹಣ ಪಡೆದವರಿಗೆ ಹಣ ವಾಪಾಸ್ ನೀಡುವಂತೆ ನೋಟಿಸ್ ನೀಡಲಾಗಿದೆ. ತನಿಖೆಗೆ ಅಡ್ಡಿಪಡಿಸಲು, ತನಿಖೆಯ ದಿಕ್ಕು ತಪ್ಪಿಸಲು ಈ ರೀತಿಯ ಆರೋಪಗಳನ್ನೆಲ್ಲ ಮಾಡಲಾಗುತ್ತಿದೆ.
-ಅಲೋಕ್ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರು.