ಆ್ಯಪ್ನಗರ

ಅದಮ್ಯ ಚೇತನದಿಂದ 'ಅನಂತ'ದ ಕಡೆಗೆ ಸಾಗಿದ ಅನಂತಕುಮಾರ್‌...

ತಮ್ಮ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರ ನೇತೃತ್ವಕ್ಕೆ ಬೆನ್ನೆಲುಬಾಗಿದ್ದ ಅನಂತ್‌ ಕುಮಾರ್‌ ಅವರು, ಪ್ರತಿ ಹಂತದಲ್ಲೂ ಸಂಸ್ಥೆಯ ಮೂಲಕ ಅನೇಕರಿಗೆ ನೆರವಾಗಿದ್ದರು.

Vijaya Karnataka Web 12 Nov 2018, 10:11 am
ಬೆಂಗಳೂರು: ಹಸಿರು ಭಾನುವಾರ, ಶಾಲಾ ಮಕ್ಕಳಿಗೆ ಬಿಸಿಯೂಟ, ಶಿಕ್ಷಣ, ಆರೋಗ್ಯ ಯೋಜನೆಗಳ ಮೂಲಕ ಮನೆಮಾತಾಗಿದ್ದ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮಹಾಪೋಷಕರಾಗಿದ್ದವರು ಅನಂತ್‌ ಕುಮಾರ್‌.
Vijaya Karnataka Web anant kumar


ತಮ್ಮ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರ ನೇತೃತ್ವಕ್ಕೆ ಬೆನ್ನೆಲುಬಾಗಿದ್ದ ಅನಂತ್‌ ಕುಮಾರ್‌ ಅವರು, ಪ್ರತಿ ಹಂತದಲ್ಲೂ ಸಂಸ್ಥೆಯ ಮೂಲಕ ಅನೇಕರಿಗೆ ನೆರವಾಗಿದ್ದರು.

ಅದಮ್ಯ ಚೇತನ ಸೇವಾ ಉತ್ಸವದ ಮೂಲಕ ಮಕ್ಕಳಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದಿನ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕೆಂಬುದು ಅನಂತ್‌ ಕುಮಾರ್‌ ಅವರ ಆಶಯಗಳಲ್ಲಿ ಒಂದಾಗಿತ್ತು. ಈ ಹಿನ್ನೆಲೆಯಲ್ಲೇ ಅದಮ್ಯ ಚೇತನ ಸೇವಾ ಉತ್ಸವ ಸೇರಿ ಇನ್ನಿತರ ಕಾರ್ಯಕ್ರಮಗಳಲ್ಲಿ ಅವರು ಇಸ್ರೋ ಡಿಆರ್‌ಡಿಒ, ಎಚ್‌ಎಎಲ್‌, ಬಿಇಎಲ್‌ ಸಂಸ್ಥೆಗಳ ಸಹಯೋಗದಲ್ಲಿ ಮಾಹಿತಿ ವಿನಿಮಯ ಕಾರ್ಯಕ್ರಮ, ಭಿತ್ತಿಚಿತ್ರ ಪ್ರದರ್ಶನಗಳನ್ನು ಏರ್ಪಡಿಸುವುದರಲ್ಲಿ ಉತ್ಸುಕರಾಗಿದ್ದರು.

ಬೆಂಗಳೂರನ್ನು ಹಸಿರಾಗಿಸುವ ಕನಸು ಹೊತ್ತವರು!
ಬೆಂಗಳೂರನ್ನು ಮತ್ತೆ ಉದ್ಯಾನ ನಗರಿ ಮಾಡಬೇಕೆಂಬುದೇ ಅನಂತಕುಮಾರ್‌ ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಪ್ರತಿ ಭಾನುವಾರ ಗಿಡನೆಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಈ ವರೆಗೆ 149 ಭಾನುವಾರಗಳಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಅಸಂಖ್ಯ ಗಿಡ ಹಾಕಿದ ಕೀರ್ತಿಯೂ ಅನಂತ್‌ ಕುಮಾರ್‌ ಅವರಿಗೆ ಸಲ್ಲುತ್ತದೆ. ವೃಕ್ಷ ರಕ್ಷ ಯೋಜನೆ ಸೇರಿ ವಿವಿಧ ರೀತಿಯ ಯೋಜನೆಯ ರುವಾರಿ ಅನಂತ್‌ ಕುಮಾರ್‌ ಆಗಿದ್ದರು.

ಝೀರೋ ಗಾರ್ಬೇಜ್‌ ಕಿಚನ್‌: ಅದಮ್ಯ ಚೇತನ ಅಡುಗೆ ಮನೆಯ ವಿಶೇಷತೆ
ಬೆಂಗಳೂರಿನ ಸುತ್ತಮುತ್ತಲಿ ಸುಮಾರು 2 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿರುವ ಅದಮ್ಯ ಚೇತನ ಸಂಸ್ಥೆಯಲ್ಲಿ ತ್ಯಾಜ್ಯಗಳ ಹಾವಳಿ ಇಲ್ಲ. ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ವ್ಯವಸ್ಥೆ ಸಂಸ್ಥೆಯಲ್ಲಿತ್ತು. ಈ ವ್ಯವಸ್ಥೆಯ ನಿರ್ಮಾಣದಲ್ಲೂ ಅನಂತ ಕುಮಾರ್‌ ಅವರ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ ಈ ಅಡುಗೆ ಮನೆಯಲ್ಲಿ ಅಡುಗೆ ಅನಿಲ ಬಳಕೆಯಾಗುತ್ತಿರಲಿಲ್ಲ.

ಸಸ್ಯಾಗ್ರಹ, ಅನ್ನ-ಅಕ್ಷರ- ಆರೋಗ್ಯ, ಸಸ್ಯಾಗ್ರಹ, ಅನಂತ ವನ, ಹಸಿರು ಭಾನುವಾರ, ಇಕೋ ಚೇನತ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಂಸ್ಥೆಗೆ ಅದಮ್ಯ ಚೇತನರಾಗಿದ್ದರು.

ಅನಂತ ಕುಮಾರ್‌ ಅವರ ಕೊನೆ ಟ್ವೀಟ್‌: ಹಸಿರು ಭಾನುವಾರ 148

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ