ಬೆಂಗಳೂರು: ಮೆಟ್ರೊ ಎರಡನೇ ಹಂತದ ಸಿಲ್ಕ್ ಬೋರ್ಡ್- ಕೆ.ಆರ್.ಪುರ ಯೋಜನೆಯ ಕಾಮಗಾರಿಗೆ ಹೊಸ ಅಡ್ಡಿ ಎದುರಾಗಿದೆ. ಈ ಮಾರ್ಗದ ನಿರ್ಮಾಣಕ್ಕೆ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿರುವ ಐಎಲ್ ಆ್ಯಂಡ್ ಎಫ್ಎಸ್ ಕಂಪನಿಯನ್ನು ಆರಿಸಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಬಿಎಂಆರ್ಸಿಎಲ್ ಮುಳುಗಿದೆ.
ಈಗಾಗಲೇ ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಾಣವಾಗುತ್ತಿರುವ 6 ಕಿ.ಮೀ. ಉದ್ದದ ಮಾರ್ಗದ ಪೈಕಿ 3 ಕಿ.ಮೀ. ಮಾರ್ಗವನ್ನು ಐಎಲ್ ಆ್ಯಂಡ್ ಎಫ್ಎಸ್ ಕಂಪನಿ ನಿರ್ಮಿಸುತ್ತಿದೆ. ಗಡುವು ಮೀರಿದ್ದರಿಂದ ಇತ್ತೀಚೆಗೆ ಈ ಕಂಪನಿಗೆ 1.5 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ ಕಂಪನಿಯು ಎಲ್ ಆ್ಯಂಡ್ ಎಫ್ಎಸ್ ಕಂಪನಿಯ ಭಾಗವಾಗಿದೆ. ಈ ಮೂಲ ಕಂಪನಿಯು ನಷ್ಟದಲ್ಲಿರುವುದರಿಂದ ಕೇಂದ್ರ ಸರಕಾರವು ವಶಕ್ಕೆ ಪಡೆದು ಹೊಸ ಆಡಳಿತ ಮಂಡಳಿ ರಚಿಸಿದೆ. ಇಂತಹ ಕಂಪನಿಗೆ ಗುತ್ತಿಗೆ ಕೊಡುವುದು ಸರಿಯೇ ಎಂದು ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾರ್ಯಾದೇಶ ನೀಡಿಲ್ಲ.
ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಕ್ಕೆ ನಿರ್ಮಾಣವಾಗಬೇಕಿರುವ 17 ಕಿ.ಮೀ. ಉದ್ದದ ಮೆಟ್ರೊ ಮಾರ್ಗದ ಟೆಂಡರ್ ಅನ್ನು ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ. ಸಿಲ್ಕ್ ಬೋರ್ಡ್-ಬೆಳ್ಳಂದೂರು, ಬೆಳ್ಳಂದೂರು-ದೊಡ್ಡನೆಕ್ಕುಂದಿ, ದೊಡ್ಡನೆಕ್ಕುಂದಿ-ಕೆ.ಆರ್.ಪುರ ಎಂದು ಮೂರು ಪ್ಯಾಕೇಜ್ ಆಗಿ ಮಾಡಿ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಸಿಲ್ಕ್ ಬೋರ್ಡ್- ಬೆಳ್ಳಂದೂರು 7 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲು ಐಎಲ್ ಆ್ಯಂಡ್ ಎಫ್ಎಸ್ ಕಂಪನಿ ಅರ್ಜಿ ಸಲ್ಲಿಸಿದೆ. ಈ ಮಾರ್ಗದ ನಿರ್ಮಾಣ ವೆಚ್ಚ 427.29 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಕಂಪನಿ 433.26 ಕೋಟಿ ರೂ. ಮೊತ್ತವನ್ನು ಉಲ್ಲೇಖಿಸಿದೆ. ಉಳಿದ ಕಂಪನಿಗಳು ಇದಕ್ಕಿಂತ ಹೆಚ್ಚು ಮೊತ್ತವನ್ನು ಉಲ್ಲೇಖಿಸಿವೆ. ಆದ್ದರಿಂದ ನಿಯಮಗಳ ಪ್ರಕಾರ, ಈ ಕಂಪನಿಗೇ ಅವಕಾಶ ನೀಡಬೇಕಾಗುತ್ತದೆ. ಬೇರೆ ಕಂಪನಿಗೆ ಅವಕಾಶ ನೀಡಬೇಕೆಂದರೂ ನಿಯಮಬಾಹಿರವಾಗುತ್ತದೆ. ಮರು ಟೆಂಡರ್ ಕರೆಯುವ ತೀರ್ಮಾನ ಕೈಗೊಂಡರೆ ಯೋಜನೆಯ ಕಾಮಗಾರಿ ಮತ್ತಷ್ಟು ವಿಳಂಬವಾಗಿ ಸಮಸ್ಯೆಯಾಗುತ್ತದೆ.
2020ರ ಗುರಿ
ನಾಯಂಡಹಳ್ಳಿ-ಕೆಂಗೇರಿ ಮಾರ್ಗವನ್ನು 2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸಬೇಕೆಂಬ ಗುರಿ ಇತ್ತು. ಆದರೆ ಐಎಲ್ ಆ್ಯಂಡ್ ಎಫ್ಎಸ್ ಕಂಪನಿಯ ನಿಧಾನಗತಿಯ ಕಾಮಗಾರಿಯಿಂದ 2020 ಕ್ಕೆ ಕಾಮಗಾರಿ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಜನರಿಂದ ದೂರುಗಳು ಬರುತ್ತಿವೆ. ನಿಗದಿತ ಗಡುವನ್ನು ಪದೇ ಪದೆ ಮೀರುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಇದಕ್ಕೆಲ್ಲ ಕಾರಣವಾಗಿರುವ ಕಂಪನಿಗೆ ಮತ್ತೆ ಟೆಂಡರ್ ನೀಡಿದರೆ ಸಮಸ್ಯೆಯಾಗಬಹುದು ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ''ಸಿಲ್ಕ್ ಬೋರ್ಡ್-ಕೆ.ಆರ್.ಪುರ ಮಾರ್ಗದ ಗುತ್ತಿಗೆ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಐಎಲ್ ಆ್ಯಂಡ್ ಎಫ್ಎಸ್ ಕಂಪನಿಯನ್ನೂ ಅಂತಿಮಗೊಳಿಸಿಲ್ಲ,'' ಎಂದು ಸ್ಪಷ್ಟಪಡಿಸಿದ್ದಾರೆ.
ಸಿಲ್ಕ್ ಬೋರ್ಡ್ನಲ್ಲಿ ಮೇಲುರಸ್ತೆ, ಇಂಟರ್ಚೇಂಜ್ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗುವ ಈ ಯೋಜನೆಯ ಕಾಮಗಾರಿ ವೇಗವಾಗಿ ನಡೆಯಬೇಕು ಎಂಬ ಒತ್ತಾಯವಿದೆ. ಅತ್ಯಧಿಕ ಸಂಚಾರ ದಟ್ಟಣೆ ಇರುವ ಸಿಲ್ಕ್ ಬೋರ್ಡ್ ಈ ಯೋಜನೆಯಿಂದ ಸಿಗ್ನಲ್ ಮುಕ್ತವಾಗಲಿದೆ. ವೇಗವಾಗಿ ನಡೆಯಬೇಕಿರುವ ಕಾಮಗಾರಿಗೆ ಇಂತಹ ಸಮಸ್ಯೆಗಳು ಅಡ್ಡಿಯುಂಟು ಮಾಡಿವೆ.
ಈಗಾಗಲೇ ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಾಣವಾಗುತ್ತಿರುವ 6 ಕಿ.ಮೀ. ಉದ್ದದ ಮಾರ್ಗದ ಪೈಕಿ 3 ಕಿ.ಮೀ. ಮಾರ್ಗವನ್ನು ಐಎಲ್ ಆ್ಯಂಡ್ ಎಫ್ಎಸ್ ಕಂಪನಿ ನಿರ್ಮಿಸುತ್ತಿದೆ. ಗಡುವು ಮೀರಿದ್ದರಿಂದ ಇತ್ತೀಚೆಗೆ ಈ ಕಂಪನಿಗೆ 1.5 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ ಕಂಪನಿಯು ಎಲ್ ಆ್ಯಂಡ್ ಎಫ್ಎಸ್ ಕಂಪನಿಯ ಭಾಗವಾಗಿದೆ. ಈ ಮೂಲ ಕಂಪನಿಯು ನಷ್ಟದಲ್ಲಿರುವುದರಿಂದ ಕೇಂದ್ರ ಸರಕಾರವು ವಶಕ್ಕೆ ಪಡೆದು ಹೊಸ ಆಡಳಿತ ಮಂಡಳಿ ರಚಿಸಿದೆ. ಇಂತಹ ಕಂಪನಿಗೆ ಗುತ್ತಿಗೆ ಕೊಡುವುದು ಸರಿಯೇ ಎಂದು ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾರ್ಯಾದೇಶ ನೀಡಿಲ್ಲ.
ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಕ್ಕೆ ನಿರ್ಮಾಣವಾಗಬೇಕಿರುವ 17 ಕಿ.ಮೀ. ಉದ್ದದ ಮೆಟ್ರೊ ಮಾರ್ಗದ ಟೆಂಡರ್ ಅನ್ನು ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ. ಸಿಲ್ಕ್ ಬೋರ್ಡ್-ಬೆಳ್ಳಂದೂರು, ಬೆಳ್ಳಂದೂರು-ದೊಡ್ಡನೆಕ್ಕುಂದಿ, ದೊಡ್ಡನೆಕ್ಕುಂದಿ-ಕೆ.ಆರ್.ಪುರ ಎಂದು ಮೂರು ಪ್ಯಾಕೇಜ್ ಆಗಿ ಮಾಡಿ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಸಿಲ್ಕ್ ಬೋರ್ಡ್- ಬೆಳ್ಳಂದೂರು 7 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲು ಐಎಲ್ ಆ್ಯಂಡ್ ಎಫ್ಎಸ್ ಕಂಪನಿ ಅರ್ಜಿ ಸಲ್ಲಿಸಿದೆ. ಈ ಮಾರ್ಗದ ನಿರ್ಮಾಣ ವೆಚ್ಚ 427.29 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಕಂಪನಿ 433.26 ಕೋಟಿ ರೂ. ಮೊತ್ತವನ್ನು ಉಲ್ಲೇಖಿಸಿದೆ. ಉಳಿದ ಕಂಪನಿಗಳು ಇದಕ್ಕಿಂತ ಹೆಚ್ಚು ಮೊತ್ತವನ್ನು ಉಲ್ಲೇಖಿಸಿವೆ. ಆದ್ದರಿಂದ ನಿಯಮಗಳ ಪ್ರಕಾರ, ಈ ಕಂಪನಿಗೇ ಅವಕಾಶ ನೀಡಬೇಕಾಗುತ್ತದೆ. ಬೇರೆ ಕಂಪನಿಗೆ ಅವಕಾಶ ನೀಡಬೇಕೆಂದರೂ ನಿಯಮಬಾಹಿರವಾಗುತ್ತದೆ. ಮರು ಟೆಂಡರ್ ಕರೆಯುವ ತೀರ್ಮಾನ ಕೈಗೊಂಡರೆ ಯೋಜನೆಯ ಕಾಮಗಾರಿ ಮತ್ತಷ್ಟು ವಿಳಂಬವಾಗಿ ಸಮಸ್ಯೆಯಾಗುತ್ತದೆ.
2020ರ ಗುರಿ
ನಾಯಂಡಹಳ್ಳಿ-ಕೆಂಗೇರಿ ಮಾರ್ಗವನ್ನು 2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸಬೇಕೆಂಬ ಗುರಿ ಇತ್ತು. ಆದರೆ ಐಎಲ್ ಆ್ಯಂಡ್ ಎಫ್ಎಸ್ ಕಂಪನಿಯ ನಿಧಾನಗತಿಯ ಕಾಮಗಾರಿಯಿಂದ 2020 ಕ್ಕೆ ಕಾಮಗಾರಿ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಜನರಿಂದ ದೂರುಗಳು ಬರುತ್ತಿವೆ. ನಿಗದಿತ ಗಡುವನ್ನು ಪದೇ ಪದೆ ಮೀರುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಇದಕ್ಕೆಲ್ಲ ಕಾರಣವಾಗಿರುವ ಕಂಪನಿಗೆ ಮತ್ತೆ ಟೆಂಡರ್ ನೀಡಿದರೆ ಸಮಸ್ಯೆಯಾಗಬಹುದು ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ''ಸಿಲ್ಕ್ ಬೋರ್ಡ್-ಕೆ.ಆರ್.ಪುರ ಮಾರ್ಗದ ಗುತ್ತಿಗೆ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಐಎಲ್ ಆ್ಯಂಡ್ ಎಫ್ಎಸ್ ಕಂಪನಿಯನ್ನೂ ಅಂತಿಮಗೊಳಿಸಿಲ್ಲ,'' ಎಂದು ಸ್ಪಷ್ಟಪಡಿಸಿದ್ದಾರೆ.
ಸಿಲ್ಕ್ ಬೋರ್ಡ್ನಲ್ಲಿ ಮೇಲುರಸ್ತೆ, ಇಂಟರ್ಚೇಂಜ್ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗುವ ಈ ಯೋಜನೆಯ ಕಾಮಗಾರಿ ವೇಗವಾಗಿ ನಡೆಯಬೇಕು ಎಂಬ ಒತ್ತಾಯವಿದೆ. ಅತ್ಯಧಿಕ ಸಂಚಾರ ದಟ್ಟಣೆ ಇರುವ ಸಿಲ್ಕ್ ಬೋರ್ಡ್ ಈ ಯೋಜನೆಯಿಂದ ಸಿಗ್ನಲ್ ಮುಕ್ತವಾಗಲಿದೆ. ವೇಗವಾಗಿ ನಡೆಯಬೇಕಿರುವ ಕಾಮಗಾರಿಗೆ ಇಂತಹ ಸಮಸ್ಯೆಗಳು ಅಡ್ಡಿಯುಂಟು ಮಾಡಿವೆ.