ನೀರು ಸಂಪರ್ಕ ಖಚಿತಪಡಿಸದಿದ್ದರೆ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅನುಮತಿ ಇಲ್ಲ
ಬಿಲ್ಡರ್ಗಳು ಕುಡಿಯುವ ನೀರಿನ ಸಂಪರ್ಕ ನೀಡದೆ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ನಂತರ ಫ್ಲ್ಯಾಟ್ ಖರೀದಿಸಿದ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಬಿಲ್ಡರ್ಗಳು ಕಟ್ಟಡ ನಿರ್ಮಿಸುವಾಗಲೇ ನೀರಿನ ಸಂಪರ್ಕ ಕಲ್ಪಿಸುವುದನ್ನು ಖಚಿತಪಡಿಸದಿದ್ದರೆ ನಿರ್ಮಾಣಕ್ಕೆ ಅನುಮತಿ ನೀಡಬಾರದು.
Vijaya Karnataka 22 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
ಬಿಲ್ಡರ್ಗಳು ಅಪಾರ್ಟ್ಮೆಂಟ್ ನಿರ್ಮಿಸುವಾಗಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕುರಿತು ಖಚಿತಪಡಿಸದಿದ್ದರೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ತರಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ಸುವರ್ಣ ಭವನ ಉದ್ಘಾಟಿಸಿ ಮಾತನಾಡಿದ ಅವರು, ''ಬಿಲ್ಡರ್ಗಳು ಕುಡಿಯುವ ನೀರಿನ ಸಂಪರ್ಕ ನೀಡದೆ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ನಂತರ ಫ್ಲ್ಯಾಟ್ ಖರೀದಿಸಿದ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಬಿಲ್ಡರ್ಗಳು ಕಟ್ಟಡ ನಿರ್ಮಿಸುವಾಗಲೇ ನೀರಿನ ಸಂಪರ್ಕ ಕಲ್ಪಿಸುವುದನ್ನು ಖಚಿತಪಡಿಸದಿದ್ದರೆ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಈ ಸಂಬಂಧ ಕಠಿಣ ಕಾನೂನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,'' ಎಂದು ತಿಳಿಸಿದರು.
''ಕಟ್ಟಡ ಮಾರಾಟ ಮಾಡಿ ಹೊರಟುಹೋಗುವ ಬಿಲ್ಡರ್ಗಳು ಫ್ಲ್ಯಾಟ್ ಖರೀದಿಸುವವರಿಗೆ ನೀರಿನ ಗ್ಯಾರಂಟಿ ಕೊಡುವುದಿಲ್ಲ. ಹೆಬ್ಬಾಳದ ಕೆಲ ಅಪಾರ್ಟ್ಮೆಂಟ್ಗಳಲ್ಲಿ ಇಂದಿಗೂ ನೀರು ಸಿಗುತ್ತಿಲ್ಲ. ಅಲ್ಲಿನ ನಿವಾಸಿಗಳು ಟ್ಯಾಂಕರ್ನಿಂದ ನೀರು ತರಿಸಿಕೊಂಡು ಸಂಪ್ಗೆ ತುಂಬಿಸಿಕೊಳ್ಳುತ್ತಾರೆ. ಅದನ್ನು ಯಾವ ಕೆರೆಯಿಂದ ತರುತ್ತಾರೆ ಎನ್ನುವುದೂ ಗೊತ್ತಿಲ್ಲ. ಇಂತಹ ನೀರು ಕುಡಿದು ನಿವಾಸಿಗಳಿಗೆ ಚರ್ಮ ರೋಗ ಬಂದಿದೆ. ಹೀಗಾಗಿ ಕುಡಿಯುವ ನೀರು ನೀಡುವುದನ್ನು ಖಚಿತಪಡಿಸದ ನಿರ್ಮಾಣಕಾರರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ನಿರ್ಧರಿಸಲಾಗಿದೆ,'' ಎಂದರು.
''ಕೊಳಚೆ ನೀರನ್ನು ಸಂಸ್ಕರಿಸಲು ಅಪಾರ್ಟ್ಮೆಂಟ್ನಲ್ಲಿ ಕಡ್ಡಾಯವಾಗಿ ಎಸ್ಟಿಪಿ ಇರಬೇಕು. ಕಟ್ಟಡ ನಿರ್ಮಾಣವಾಗುವಾಗಲೇ ಕಡ್ಡಾಯವಾಗಿ ಎಸ್ಟಿಪಿ ಅಳವಡಿಸಿಕೊಳ್ಳಲು ಪ್ರತ್ಯೇಕ ಕಾನೂನು ರೂಪಿಸಲಾಗುವುದು,'' ಎಂದು ತಿಳಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮೇಯರ್ ಗಂಗಾಂಬಿಕೆ, ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹಾಜರಿದ್ದರು.
ಸುವರ್ಣ ಭವನ
15,250 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾದ 3 ಮಹಡಿಗಳ ಕಟ್ಟಡವು ಮಂಡಳಿಯ ವಿವಿಧ ವಿಭಾಗಗಳ ಕಚೇರಿಗಳಿಗೆ ಬಳಕೆಯಾಗಲಿದೆ. ಪ್ರತಿ ಮಹಡಿಯಲ್ಲಿ ನಾಲ್ಕು ವಿಭಾಗಗಳ ಕಚೇರಿಗಳು ಇರಲಿವೆ. ನೆಲಮಹಡಿಯಲ್ಲಿನ ವಿಶಾಲವಾದ ಸ್ಥಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಸುಮಾರು 75 ಮಂದಿ ಕುಳಿತುಕೊಳ್ಳಲು ಸಾಧ್ಯವಾಗುವ ಕ್ಯಾಂಟೀನ್ ನಿರ್ಮಿಸಲಾಗಿದೆ. ತಳಮಹಡಿಯಲ್ಲಿ 150 ದ್ವಿಚಕ್ರ ವಾಹನ, 70 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯವಿದೆ. ಒಮ್ಮೆಗೆ ತಲಾ 15 ಮಂದಿಯನ್ನು ಹೊತ್ತೊಯ್ಯುವ ನಾಲ್ಕು ಲಿಫ್ಟ್ಗಳಿವೆ. ಭವನ ನಿರ್ಮಾಣಕ್ಕೆ 25.75 ಕೋಟಿ ರೂ. ವೆಚ್ಚವಾಗಿದೆ.
ಬಿಲ್ಡರ್ಗಳು ಅಪಾರ್ಟ್ಮೆಂಟ್ ನಿರ್ಮಿಸುವಾಗಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕುರಿತು ಖಚಿತಪಡಿಸದಿದ್ದರೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ತರಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ಸುವರ್ಣ ಭವನ ಉದ್ಘಾಟಿಸಿ ಮಾತನಾಡಿದ ಅವರು, ''ಬಿಲ್ಡರ್ಗಳು ಕುಡಿಯುವ ನೀರಿನ ಸಂಪರ್ಕ ನೀಡದೆ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ನಂತರ ಫ್ಲ್ಯಾಟ್ ಖರೀದಿಸಿದ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಬಿಲ್ಡರ್ಗಳು ಕಟ್ಟಡ ನಿರ್ಮಿಸುವಾಗಲೇ ನೀರಿನ ಸಂಪರ್ಕ ಕಲ್ಪಿಸುವುದನ್ನು ಖಚಿತಪಡಿಸದಿದ್ದರೆ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಈ ಸಂಬಂಧ ಕಠಿಣ ಕಾನೂನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,'' ಎಂದು ತಿಳಿಸಿದರು.
''ಕಟ್ಟಡ ಮಾರಾಟ ಮಾಡಿ ಹೊರಟುಹೋಗುವ ಬಿಲ್ಡರ್ಗಳು ಫ್ಲ್ಯಾಟ್ ಖರೀದಿಸುವವರಿಗೆ ನೀರಿನ ಗ್ಯಾರಂಟಿ ಕೊಡುವುದಿಲ್ಲ. ಹೆಬ್ಬಾಳದ ಕೆಲ ಅಪಾರ್ಟ್ಮೆಂಟ್ಗಳಲ್ಲಿ ಇಂದಿಗೂ ನೀರು ಸಿಗುತ್ತಿಲ್ಲ. ಅಲ್ಲಿನ ನಿವಾಸಿಗಳು ಟ್ಯಾಂಕರ್ನಿಂದ ನೀರು ತರಿಸಿಕೊಂಡು ಸಂಪ್ಗೆ ತುಂಬಿಸಿಕೊಳ್ಳುತ್ತಾರೆ. ಅದನ್ನು ಯಾವ ಕೆರೆಯಿಂದ ತರುತ್ತಾರೆ ಎನ್ನುವುದೂ ಗೊತ್ತಿಲ್ಲ. ಇಂತಹ ನೀರು ಕುಡಿದು ನಿವಾಸಿಗಳಿಗೆ ಚರ್ಮ ರೋಗ ಬಂದಿದೆ. ಹೀಗಾಗಿ ಕುಡಿಯುವ ನೀರು ನೀಡುವುದನ್ನು ಖಚಿತಪಡಿಸದ ನಿರ್ಮಾಣಕಾರರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ನಿರ್ಧರಿಸಲಾಗಿದೆ,'' ಎಂದರು.
''ಕೊಳಚೆ ನೀರನ್ನು ಸಂಸ್ಕರಿಸಲು ಅಪಾರ್ಟ್ಮೆಂಟ್ನಲ್ಲಿ ಕಡ್ಡಾಯವಾಗಿ ಎಸ್ಟಿಪಿ ಇರಬೇಕು. ಕಟ್ಟಡ ನಿರ್ಮಾಣವಾಗುವಾಗಲೇ ಕಡ್ಡಾಯವಾಗಿ ಎಸ್ಟಿಪಿ ಅಳವಡಿಸಿಕೊಳ್ಳಲು ಪ್ರತ್ಯೇಕ ಕಾನೂನು ರೂಪಿಸಲಾಗುವುದು,'' ಎಂದು ತಿಳಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮೇಯರ್ ಗಂಗಾಂಬಿಕೆ, ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹಾಜರಿದ್ದರು.
ಸುವರ್ಣ ಭವನ
15,250 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾದ 3 ಮಹಡಿಗಳ ಕಟ್ಟಡವು ಮಂಡಳಿಯ ವಿವಿಧ ವಿಭಾಗಗಳ ಕಚೇರಿಗಳಿಗೆ ಬಳಕೆಯಾಗಲಿದೆ. ಪ್ರತಿ ಮಹಡಿಯಲ್ಲಿ ನಾಲ್ಕು ವಿಭಾಗಗಳ ಕಚೇರಿಗಳು ಇರಲಿವೆ. ನೆಲಮಹಡಿಯಲ್ಲಿನ ವಿಶಾಲವಾದ ಸ್ಥಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಸುಮಾರು 75 ಮಂದಿ ಕುಳಿತುಕೊಳ್ಳಲು ಸಾಧ್ಯವಾಗುವ ಕ್ಯಾಂಟೀನ್ ನಿರ್ಮಿಸಲಾಗಿದೆ. ತಳಮಹಡಿಯಲ್ಲಿ 150 ದ್ವಿಚಕ್ರ ವಾಹನ, 70 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯವಿದೆ. ಒಮ್ಮೆಗೆ ತಲಾ 15 ಮಂದಿಯನ್ನು ಹೊತ್ತೊಯ್ಯುವ ನಾಲ್ಕು ಲಿಫ್ಟ್ಗಳಿವೆ. ಭವನ ನಿರ್ಮಾಣಕ್ಕೆ 25.75 ಕೋಟಿ ರೂ. ವೆಚ್ಚವಾಗಿದೆ.