ಆ್ಯಪ್ನಗರ

ಶಂಕರ್‌ ಬಿದರಿ ಇ-ಮೇಲ್‌ ಐಡಿ ಹ್ಯಾಕ್ ಪ್ರಕರಣ, ನಾಗಾಲ್ಯಾಂಡ್‌ ಮೂಲದ ಮೂವರ ಬಂಧನ

ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಅವರ ಇ-ಮೇಲ್‌ ಐಡಿ ಹ್ಯಾಕ್‌ ಮಾಡಿ ಅವರ ಸ್ನೇಹಿತರಿಂದ 25 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಗಾಲ್ಯಾಂಡ್‌ ಮೂಲದ ಮೂವರನ್ನು ಸೆರೆಹಿಡಿಯಲಾಗಿದೆ.

Vijaya Karnataka Web 11 Mar 2021, 7:11 am
ಬೆಂಗಳೂರು: ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಅವರ ಇ-ಮೇಲ್‌ ಐಡಿ ಹ್ಯಾಕ್‌ ಮಾಡಿ ಅವರ ಸ್ನೇಹಿತರಿಂದ 25 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದ ಗ್ಯಾಂಗ್‌ನ ಮೂವರು ಸದಸ್ಯರನ್ನು ಆಗ್ನೇಯ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Shankar bidari
ಶಂಕರ್‌ ಬಿದರಿ, ನಿವೃತ್ತ ಐಪಿಎಸ್‌ ಅಧಿಕಾರಿ


ಹೊರಮಾವು ಪ್ರದೇಶದಲ್ಲಿವಾಸವಿದ್ದ ಥಿಯಾ(31) ಸೆರೋಪಾ(27), ಇಸ್ಟರ್‌ ಕೊನ್ಯಾಕ್‌(28) ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್‌ ಫೋನ್‌ಗಳು, ಬೇರೆ ಬೇರೆ ಹೆಸರಿನ 13 ಪ್ಯಾನ್‌ ಕಾರ್ಡ್‌, 6 ಆಧಾರ್‌ ಕಾರ್ಡ್‌ ಮತ್ತು 2 ಎಟಿಎಂ ಕಾರ್ಡ್‌ ಹಾಗೂ ಸುಮಾರು 20ಕ್ಕೂ ಹೆಚ್ಚು ವಿವಿಧ ಬ್ಯಾಂಕ್‌ ಖಾತೆಗಳಲ್ಲಿನ ಸುಮಾರು 2 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಮಹಾದೇವ್‌ ತಿಳಿಸಿದರು.

ಈ ಮೂವರು ಸೇರಿ ನಾಗಾಲ್ಯಾಂಡ್‌ನಲ್ಲಿರುವ ನಿರುದ್ಯೋಗಿ ಸಾರ್ವಜನಿಕರನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡಿ ಅವರಿಂದ ಆಧಾರ್‌ ಕಾರ್ಡ್‌, ಬಾಡಿಗೆ ಕರಾರು ಪತ್ರ, ಪ್ಯಾನ್‌ಕಾರ್ಡ್‌ಗಳನ್ನು ಪಡೆದು ಸುಮಾರು 60ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ತೆಗೆದಿದ್ದರು. ಅವುಗಳನ್ನು ವಂಚನೆಯ ಹಣ ವರ್ಗಾವಣೆ ಮಾಡಿಸಿಕೊಳ್ಳಲು ಬಳಸಲಾಗುತ್ತಿತ್ತು.

ಶಂಕರ್‌ ಬಿದರಿ ಇ ಮೇಲ್‌ ಐಡಿ ಹ್ಯಾಕ್..! ₹25 ಸಾವಿರ ವರ್ಗಾವಣೆ ಮಾಡಿಸಿ ಪಂಗನಾಮ ಹಾಕಿದ ವಂಚಕರು..!

ಮೂವರು ಆರೋಪಿಗಳು ಸೇಲ್ಸ್‌ ಬಾಯ್‌ ಮತ್ತು ಬ್ಯೂಟಿ ಪಾರ್ಲರ್‌ಗಳಲ್ಲಿಕೆಲಸ ಮಾಡಲೆಂದು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಇಸ್ಟರ್‌ ಕೊನ್ಯಾಕ್‌ಗೆ ಆನ್‌ಲೈನ್‌ ವಂಚಕರಾದ ಜೇಮ್ಸ್‌ ಮತ್ತು ಪೀಟರ್‌ ಎಂಬುವರು ಫೇಸ್‌ಬುಕ್‌ನಲ್ಲಿಪರಿಚಯವಾಗಿದ್ದರು.

ಶಂಕರ್‌ ಬಿದರಿ ಇ ಮೇಲ್‌ ಐಡಿ ಹ್ಯಾಕ್..! ₹25 ಸಾವಿರ ವರ್ಗಾವಣೆ ಮಾಡಿಸಿ ಪಂಗನಾಮ ಹಾಕಿದ ವಂಚಕರು..!

ಜೇಮ್ಸ್‌ ಮತ್ತು ಪೀಟರ್‌ ತಂಡ ಇ-ಮೇಲ್‌ ಐಡಿ ಹ್ಯಾಕ್‌, ನಕಲಿ ಫೇಸ್‌ಬುಕ್‌ ಖಾತೆ, ಜಾಲತಾಣಗಳನ್ನು ಸೃಷ್ಟಿಸಿ ವಂಚನೆಯಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಮುಖ ಆರೋಪಿಗಳಾಗಿದ್ದಾರೆ. ಇಸ್ಟರ್‌ ಕೊನ್ಯಾಕ್‌ ಸೇರಿದಂತೆ ಮೂವರಿಂದ ಬ್ಯಾಂಕ್‌ ಖಾತೆ ಪಡೆದುಕೊಳ್ಳುತ್ತಿದ್ದರು. ಈ ಖಾತೆಗಳಿಗೆ ಮೋಸದಿಂದ ಬರುತ್ತಿದ್ದ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಶಂಕರ್‌ ಬಿದರಿ ಪಾತ್ರದಲ್ಲಿ ಸುನೀಲ್ ಶೆಟ್ಟಿ? ಮತ್ತೆ ಕನ್ನಡದಲ್ಲಿ ಮಿಂಚಲಿರುವ ಬಾಲಿವುಡ್‌ ನಟ!

ಸಿಕ್ಕಿ ಬಿದ್ದದ್ದು ಹೇಗೆ
ಶಂಕರ್‌ ಬಿದರಿ ಸ್ನೇಹಿತರು 25 ಸಾವಿರ ರೂ. ಹಣ ಹಾಕಿದ್ದ ಖಾತೆಯ ಬೆನ್ನು ಬಿದ್ದ ಪೊಲೀಸರು, ನೀಡಿದ್ದ ದಾಖಲೆಗಳ ಆಧಾರದ ಮೇಲೆ ಖಾತೆದಾರರನ್ನು ಪತ್ತೆ ಮಾಡಿದ್ದಾರೆ. ಆದರೆ, ನಮ್ಮಿಂದ ಖಾತೆ ಮಾಡಿಸಿಕೊಂಡು ಬೇರೆಯವರು ಬಳಸುತ್ತಿದ್ದಾರೆಂದು ಹೇಳಿದ್ದರು. ಈ ಆಧಾರದ ಫೋನ್‌ ನಂಬರ್‌ ಆಧರಿಸಿ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ