ಆ್ಯಪ್ನಗರ

ಖಗೋಳ ವಿಜ್ಞಾನಿ ಮೇಲೆ ಹಲ್ಲೆ

ಕ್ಷುಲ್ಲಕ ವಿಚಾರವಾಗಿ ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಯ (ಐಐಎ) 55 ವರ್ಷದ ಮಹಿಳಾ ವಿಜ್ಞಾನಿಯನ್ನು ಕಾರು ಚಾಲಕನೊಬ್ಬ ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಆರ್‌ಎಂವಿ 2ನೇ ಹಂತದಲ್ಲಿ ನಡೆದಿದೆ.

Vijaya Karnataka 12 May 2018, 5:00 am
ಬೆಂಗಳೂರು: ಕ್ಷುಲ್ಲಕ ವಿಚಾರವಾಗಿ ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಯ (ಐಐಎ) 55 ವರ್ಷದ ಮಹಿಳಾ ವಿಜ್ಞಾನಿಯನ್ನು ಕಾರು ಚಾಲಕನೊಬ್ಬ ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಆರ್‌ಎಂವಿ 2ನೇ ಹಂತದಲ್ಲಿ ನಡೆದಿದೆ.
Vijaya Karnataka Web astronomer attacked
ಖಗೋಳ ವಿಜ್ಞಾನಿ ಮೇಲೆ ಹಲ್ಲೆ


ಕಳೆದ ವಾರ ರಾತ್ರಿ 11.35ರ ಸುಮಾರಿಗೆ ತಮ್ಮ ಕಾರಿನಲ್ಲಿ ಮಗಳ ಜತೆ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಕಡೆಯಿಂದ ಸಂಜಯ್‌ ನಗರ ಕಡೆ ಮಹಿಳೆ ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕಾರೊಂದು ಹೈ ಬೀಮ್‌ ಲೈಟ್‌ ಹಾಕಿದ್ದ ಕಾರಣ, ರಸ್ತೆ ಕಾಣಿಸದೇ ಅವರು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಅವರ ಕಾರಿನ ಹಿಂದೆ ಇದ್ದ ಕಾರಿನ ಚಾಲಕ ಸೈಡ್‌ ನೀಡುವಂತೆ ಹಾರ್ನ್‌ ಮಾಡಿದ್ದಾನೆ. ಬಳಿಕ ಅಪಾಯಕಾರಿ ರೀತಿಯಲ್ಲಿ ಮಹಿಳೆಯ ಕಾರನ್ನು ಓವರ್‌ಟೇಕ್‌ ಮಾಡಿದ್ದಾನೆ. ಈ ವೇಳೆ ''ಮದ್ಯಪಾನ ಮಾಡಿದ್ದೀಯಾ,'' ಎಂದು ಆ ಕಾರಿನ ಚಾಲಕನಿಗೆ ಪ್ರಶ್ನಿದ್ದಾರೆ. ಇದರಿಂದ ಕುಪಿತಗೊಂಡ ಆತ ''ಮಹಿಳೆಯತ್ತಾ ಜೋರಾಗಿ ಕೂಗಾಡಲು ಆರಂಭಿಸಿದ್ದ. ಇದರಿಂದ ಕುಪಿತಗೊಂಡು ಮಹಿಳೆ, ಆತನ ಕಡೆ ಬೆರಳಿನಲ್ಲಿ ಸಂಜ್ಞೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಕಾರು ಚಾಲಕ, ಆರ್‌ಎಂವಿ 2ನೇ ಹಂತ 80 ಅಡಿ ರಸ್ತೆಯಲ್ಲಿ ಮಹಿಳೆಯ ಕಾರನ್ನು ಅಡ್ಡ ಹಾಕಿ ನಿಲ್ಲಿಸಿ ಮತ್ತೆ ಜಗಳ ಮಾಡಿದ್ದಾನೆ. ಅಲ್ಲದೇ, ಮಹಿಳೆ ಕೆಳಗೆ ಇಳಿದಾಗ ಅವರನ್ನು ಎಳೆದಾಡಿ ಹಲ್ಲೆ ನಡೆಸಿ ಕಾರಿನ ಕೀಲಿ ಕಿತ್ತುಕೊಂಡಿದ್ದಾನೆ.

ಬಳಿಕ ಮಹಿಳೆ ಐಐಎಸ್ಸಿಯಲ್ಲಿ ಕೆಲಸ ಮಾಡುವ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪತಿಯು ಕೂಡಲೇ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಪೊಲೀಸರು, ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಕಾರು ಕೀಲಿ ಮಹಿಳೆಯತ್ತ ಎಸೆದು ಸ್ಥಳದಿಂದ ಪರಾರಿಯಾಗಿದ್ದ. ಹಲ್ಲೆಗೊಳಗಾದ ಮಹಿಳೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಜಯ್‌ ನಗರ ಠಾಣೆಗೆ ದೂರು ನೀಡಿದ್ದರು.

ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ 60 ವರ್ಷದ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ