ಆ್ಯಪ್ನಗರ

ಸಂಜಯ್‌ದತ್‌ ಫೋಟೊದಿಂದ ಸಿಕ್ಕಿ ಬಿದ್ದ ಆಟೊ ಚಾಲಕ

ಆಟೋ ಡಿಕ್ಕಿ ಹೊಡೆದು ಕೆಎಸ್‌ಆರ್‌ಪಿ ನಿವೃತ್ತ ಕಾನ್ಸ್‌ಟೇಬಲ್‌ ರಾಮರಾವ್‌ (66) ಮೃತಪಟ್ಟಿದ್ದರು. ಚಾಲಕ ಶೋಯಬ್‌ ಖಾನ್‌(19) ಎಂಬಾತನನ್ನು ಬಂಧಿಸಲಾಗಿದೆ. ಜೂನ್‌ 17ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮರಾವ್‌ ಅವರಿಗೆ ಆಟೋ ಡಿಕ್ಕಿಯಾಗಿತ್ತು.

Vijaya Karnataka 20 Jun 2019, 8:53 am
ನಿವೃತ್ತ ಹೆಡ್‌ ಕಾನ್ಸ್‌ಟೇಬಲ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಆಟೋರಿಕ್ಷಾದ ಹಿಂಬದಿಯಲ್ಲಿದ್ದ ನಟ ಸಂಜಯ್‌ ದತ್‌ ಫೋಟೋ ಆಧರಿಸಿ ಆರೋಪಿ ಚಾಲಕನನ್ನು ಮಡಿವಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web auto


ಆಟೋ ಡಿಕ್ಕಿ ಹೊಡೆದು ಕೆಎಸ್‌ಆರ್‌ಪಿ ನಿವೃತ್ತ ಕಾನ್ಸ್‌ಟೇಬಲ್‌ ರಾಮರಾವ್‌ (66) ಮೃತಪಟ್ಟಿದ್ದರು. ಚಾಲಕ ಶೋಯಬ್‌ ಖಾನ್‌(19) ಎಂಬಾತನನ್ನು ಬಂಧಿಸಲಾಗಿದೆ. ಜೂನ್‌ 17ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮರಾವ್‌ ಅವರಿಗೆ ಆಟೋ ಡಿಕ್ಕಿಯಾಗಿತ್ತು. ಚಾಲಕ ಆಟೊ ಸಹಿತ ಪರಾರಿಯಾಗಿದ್ದ. ಘಟನಾ ಸ್ಥಳದಿಂದ ಸುಮಾರು 500 ಮೀಟರ್‌ ದೂರದಲ್ಲಿರುವ ಸಿಸಿಟಿವಿ ವಿಡಿಯೋ ಪರಿಶೀಲಿಸಿದಾಗ ಶಂಕಿತ ಆಟೋದ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿತ್ತು. ಆದರೆ, ಹಿಂಬದಿಯಲ್ಲಿ ಸಂಜಯ್‌ ದತ್‌ ಫೋಟೋ ಇರುವುದು ಕಾಣಿಸಿತ್ತು.

ಸುಳಿವು ಆಧರಿಸಿ ಸುಮಾರು 30 ಆಟೋಗಳನ್ನು ಗುರುತಿಸಿ ಚಾಲಕರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಡಿಕ್ಕಿ ಮಾಡಿದ ಆಟೋ ಚಾಲಕ ಪತ್ತೆಯಾಗಲಿಲ್ಲ. ಹೀಗಾಗಿ, ಆಟೋ ಸಂಚರಿಸಿರಬಹುದಾದ ಬೇರೆ ಬೇರೆ ರಸ್ತೆಗಳಲ್ಲಿ ಸಂಜಯ್‌ ದತ್‌ ಫೋಟೋ ಇರುವ ಆಟೋಗಳನ್ನು ಹುಡುಕುತ್ತಿದ್ದಾಗ ಸಿದ್ದಾಪುರದ ಮನೆಯ ಮುಂಭಾಗದಲ್ಲಿ ಆಟೋ ಕಾಣಿಸಿದೆ. ನಂತರ ಚಾಲಕ ಶೋಯಬ್‌ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಿಟ್‌ ಆ್ಯಂಡ್‌ ರನ್‌ ಆರೋಪಿ ಎಂದು ಖಚಿತವಾಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ