ಆ್ಯಪ್ನಗರ

ಅನಾಥ ಶಿಶುವನ್ನು ರಕ್ಷಿಸಿದ ಆಟೊ ಚಾಲಕ

ನಿಲ್ಲಿಸಿದ್ದ ಆಟೊದಲ್ಲಿ ಪತ್ತೆಯಾಗಿರುವ ಎಂಟು ದಿನಗಳ ಅನಾಥ ಮಗುವನ್ನು ಆಟೊ ಚಾಲಕ ರಕ್ಷಿಸಿದ್ದಾರೆ.

TIMESOFINDIA.COM 10 Jun 2018, 11:51 am
ಬೆಂಗಳೂರು: ನಿಲ್ಲಿಸಿದ್ದ ಆಟೊದಲ್ಲಿ ಪತ್ತೆಯಾಗಿರುವ ಎಂಟು ದಿನಗಳ ಅನಾಥ ಮಗುವನ್ನು ಆಟೊ ಚಾಲಕ ರಕ್ಷಿಸಿದ್ದಾರೆ.
Vijaya Karnataka Web auto


ಕೆಲವು ದಿನಗಳ ಹಿಂದೆ ರಾತ್ರಿ ದೊಡ್ಡಪ್ಪಯ್ಯ ಎಂಬವರ ಆಟೊ ಕೆಟ್ಟು ಹೋಗಿದ್ದ ಕಾರಣ ದುರಸ್ತಿಗೆಂದು ಕೂಡಿಗೇನಹಳ್ಳಿ ರೈಲು ನಿಲ್ದಾಣ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಹುಡುಕುತ್ತ ರೈಲು ನಿಲ್ದಾಣಕ್ಕೆ ಹೋಗಿದ್ದರು.

ಹೀಗೆ ಹೋದವರು 15 ನಿಮಿಷ ಬಿಟ್ಟು ಬರುವಾಗ ಆಟೊ ಸುತ್ತ ಜನ ಸೇರಿದ್ದರು. ಹತ್ತಿರ ಬಂದು ನೋಡಬೇಕಾದರೆ ಆಟೊದಲ್ಲಿ ಗಂಡು ಮಗುವೊಂದನ್ನು ಮಲಗಿಸಲಾಗಿತ್ತು. ಇದನ್ನು ನೋಡಿದ ದೊಡ್ಡಪ್ಪಯ ಅವರು ಪೊಲೀಸರಿಗೆ ವಿಷಯ ತಿಳಿಸಿ, ಪೊಲೀಸರು ಸ್ಥಳಕ್ಕೆ ಬರುವವರೆಗೆ ಜತನದಿಂದ ನೋಡಿಕೊಂಡರು.

ಪೊಲೀಸರು ಬಂದು ಮಗುವಿಗೆ ಹಾಲು ನೀಡಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದು, ಅದನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಕಾಲ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ